Category: ವಿಜ್ಞಾನ ತಂತ್ರಜ್ಞಾನ

ಮೆಟ್ರೋ ರೀಚ್ ೪ ಬಿ: ಡಿಸೆಂಬರ್ ೩ನೇ ವಾರ ಆರಂಭ?

ಮೆಟ್ರೊ ಎರಡನೇ ಹಂತದ ಯಲಚೇನಹಳ್ಳಿ–ಅಂಜನಾಪುರ ವಿಸ್ತರಿಸಿದ ಮಾರ್ಗ ರೈಲು ಸೇವೆ ಡಿಸೆಂಬರ್ ಮೂರನೇ ವಾರ ಆರಂಭವಾಗಲಿದೆ. ರೈಲು ಸುರಕ್ಷತಾ ಆಯುಕ್ತರ ತಂಡ(ಸಿಎAಆರ್‌ಎಸ್) ಈ ಮಾರ್ಗದ ಪರಿಶೀಲನೆ ನಡೆಸಿದೆ. ತಂಡ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿದ್ದು, ಸರಿಪಡಿಸಲು ಸೂಚಿಸಿದೆ. ಇದಕ್ಕೆ ಒಂದೆರಡು ವಾರ ಸಮಯ ಹಿಡಿಯುತ್ತದೆ. ತಂಡ ನ.೩೦ ರಂದು ವರದಿ ನೀಡಲಿದ್ದು, ವಾಣಿಜ್ಯ ಸಂಚಾರ ಸೇವೆಗೆ ಅನುಮತಿ ನೀಡಲಿದೆ. ಡಿಸೆಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಸೇವೆ ಪ್ರಾರಂಭಿಸುವ ಉದ್ದೇಶವಿದೆ.  ಎರಡನೇ ಹಂತದಲ್ಲಿ ಸೇವೆ ನೀಡಲಿರುವ ಪ್ರಥಮ […]

ಕಪ್ಪೆಯ ಹೊಸ ಪ್ರಭೇದ ಪತ್ತೆ

ಬೆಂಗಳೂರಿನ ಪ್ರಾಣಿ ವಿಜ್ಞಾನಿಗಳು ಹೊಸ ಪ್ರಭೇದದ ಬಿಲಗಪ್ಪೆಯೊಂದನ್ನು ಪತ್ತೆ ಹಚ್ಚಿದ್ದು, ಸ್ಫೇರೊಥೆಕಾ ಬೆಂಗಳೂರು (Sphaerotheca bengaluru) ಎಂದು ನಾಮಕರಣ ಮಾಡಿದ್ದಾರೆ. ದಕ್ಷಿಣ ಏಷ್ಯಾದಲ್ಲಿ ಕಂಡುಬರುವ ಸ್ಫೇರೊಥೆಕಾ ವಂಶದ ಕಪ್ಪೆಗಳ ಬಾಹ್ಯ ವಿಜ್ಞಾನ ಮತ್ತು ಆನುವಂಶಿಕ ವ್ಯತ್ಯಾಸಗಳ ಆಧಾರದ ಮೇಲೆ ಹೊಸ ಪ್ರಬೇಧವನ್ನು ವಿವರಿಸಲಾಗಿದೆ. ಈ ಕುರಿತು ನ್ಯೂಜಿಲೆಂಡ್‌ನಿಂದ ಪ್ರಕಟವಾಗುವ ಪ್ರಾಣಿ ವಿಜ್ಞಾನದ ಅಂತಾರಾಷ್ಟ್ರೀಯ ನಿಯತಕಾಲಿಕೆ ಜೂಟ್ಯಾಕ್ಸಾದಲ್ಲಿ ಸಂಶೋಧನಾ ಪ್ರಬಂಧ ಪ್ರಕಟವಾಗಿದೆ. ಭಾರತದಲ್ಲಿ ಇತ್ತೀಚೆಗೆ ಉಭಯವಾಸಿಗಳ ಆವಿಷ್ಕಾರಗಳು ಹೆಚ್ಚುತ್ತಿವೆ. ಜೀವವೈವಿಧ್ಯದ ಅತಿಸೂಕ್ಷ್ಮ ತಾಣಗಳಲ್ಲಿ(ಹಾಟ್‌ಸ್ಪಾಟ್) ಅಥವಾ ಹಸಿರು ಹೊದಿಕೆಯುಳ್ಳ ಅರಣ್ಯಗಳಲ್ಲೇ […]

Egyptian Inventor Trials Robot that can Test for covid

With Egypt facing a second coronavirus wave, an inventor is trialing a remote-control robot that can test for Covid-19, take the temperature of patients, and warn them if they don’t wear masks at a private hospital north of Cairo. Mahmoud el-Komy, who designed the robot, called Cira-03, says it can help limit exposure to infection […]

India bans 43 Chinese apps

The Union electronics and information technology ministry on Tuesday banned another 43 Chinese mobile application including popular online shopping app AliExpress, video sharing app Snack Video, and business card reader CamCard. This is the third such move by the Indian government. The apps were banned under Section 69A of the IT Act. This action was […]

ಚಂದ್ರನ ಮೇಲ್ಮೈಯಿಂದ ಕಲ್ಲು ತರಲು ಸಿದ್ಧವಾದ ಚೀನಾ

ಚಂದ್ರನ ಮೇಲ್ಮೈಯಿಂದ ಕಲ್ಲುಗಳನ್ನು ತರಲು ಮಾನವರಹಿತ ನೌಕೆಯೊಂದನ್ನು ಚೀನಾ ನ.25ರಂದು ಉಡಾವಣೆಗೊಳಿಸಲಿದೆ. ಕಳೆದ ನಾಲ್ಕು ದಶಕಗಳ ಬಳಿಕ ಚಂದ್ರನ ಮೇಲ್ಮೈಯಿಂದ ಮಾದರಿಗಳನ್ನು ತರುವ ಮೊದಲ ಯೋಜನೆ ಇದಾಗಿದೆ.  2022ರೊಳಗಾಗಿ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸುವ ಗುರಿ ಹೊಂದಿರುವ ಚೀನಾ ಮಾನವಸಹಿತ ಚಂದ್ರಯಾನದ ಯೋಜನೆಯನ್ನೂ ಹಾಕಿಕೊಂಡಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚುಮಾಡಿದೆ. ಚಂದ್ರನ ಮೇಲ್ಮೈಯಲ್ಲಿರುವ ಜ್ವಾಲಾಮುಖಿಯ ಚಟುವಟಿಕೆ, ಚಂದ್ರನ ರಚನೆಯನ್ನು ಅಧ್ಯಯನ ನಡೆಸುವ ಉದ್ದೇಶದಿಂದ ಮೇಲ್ಮೈಯಲ್ಲಿರುವ ಕಲ್ಲುಗಳು, ಮಣ್ಣನ್ನು(ಎರಡು ಕೆ.ಜಿ) ಚಾಂಗ್‌ಇ–5 ಪ್ರೊಬ್ ಹೊತ್ತು ತರಲಿದೆ. ಮಂಗಳವಾರ ಬೆಳಿಗ್ಗೆ ಸ್ಥಳೀಯ […]

Growth in tractor sales likely to continue next Year

The robust growth momentum recorded by the tractor industry this year is expected to sustain growth during the next fiscal as well, top executives from leading tractor and farm equipment manufacturers told Mint. The sustained growth in tractor demand for another year is seen on strong fundamentals such as robust kharif sowing now leading up […]

ರಾಜ್ಯದ ಜೈವಿಕ ಆರ್ಥಿಕತೆ: ೩.೭ ಲಕ್ಷ ಕೋಟಿ ರೂ. ಗುರಿ

ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಜೈವಿಕ ಆರ್ಥಿಕತೆ(ಬಯೋ ಎಕಾನಮಿ) ಕ್ಷೇತ್ರದ ಕೊಡುಗೆಯನ್ನು ೫,೦೦೦ ಕೋಟಿ ಡಾಲರ್‌ಗಳಿಗೆ(೩.೭ ಲಕ್ಷ ಕೋಟಿ ರೂ.) ಹೆಚ್ಚಿಸಲು ಲಸಿಕೆ, ಕೃಷಿ ತಾಂತ್ರಿಕತೆ, ಜೈವಿಕ-ತಯಾರಿಕೆ ಹಾಗೂ ಸಾಗರ ಸಂಬಂಧಿ ಜೈವಿಕ ತಾಂತ್ರಿಕತೆಯಲ್ಲಿ ಮೌಲ್ಯವರ್ಧನೆ ವಲಯಗಳಿಗೆ ಒತ್ತು ನೀಡಲಾಗುವುದು ಎಂದು ಐಟಿ–ಬಿಟಿ ಸಚಿವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು. ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಕರ್ನಾಟಕ ಜೈವಿಕ ಆರ್ಥಿಕತೆ ವರದಿ-೨೦೨೦ ಅನ್ನು ಶುಕ್ರವಾರ ಬಿಡುಗಡೆ ಮಾಡಿದ ಅವರು, ವರದಿಯು ೭ ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ ಎಂದರು.  […]

ಡಿಜಿಟಲ್ ಇಂಡಿಯಾದಿಂದ ಜೀವನ ಶೈಲಿ ಬದಲು

ಡಿಜಿಟಲ್ ಇಂಡಿಯಾ ದೇಶದ ಜೀವನವಿಧಾನವಾಗಿ ಬದಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ೨೩ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಮಾತನಾಡಿ, ಐದು ವರ್ಷಗಳ ಹಿಂದೆ ಆರಂಭವಾದ ಡಿಜಿಟಲ್ ಇಂಡಿಯಾ, ಬಡವರು ಹಾಗೂ ನಿರ್ಲಕ್ಷಿತ ವರ್ಗದವರ ಜೀವನದಲ್ಲಿ ಪರಿವರ್ತನೆ ತಂದಿದೆ. ಭೀಮ್ ಪಾವತಿ ಆ್ಯಪ್ ಇದಕ್ಕೊಂದು ಸಾಕ್ಷಿ. ಡಿಜಿಟಲ್ ಇಂಡಿಯಾ ಮಾನವ ಕೇಂದ್ರಿತ ಯೋಜನೆಯಾಗಿದ್ದು, ಮನುಷ್ಯರ ಘನತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಜನರ ಜೀವನದಲ್ಲಿ ಆಮೂಲಾಗ್ರ ಬದಲಾವಣೆ ಮಾಡಿದ್ದಲ್ಲದೆ, ಸರ್ಕಾರದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪಿಸುತ್ತಿದೆ. ಕೋವಿಡ್ […]

ಎಲ್ಲಿಂದಲಾದರೂ ಕೆಲಸಕ್ಕೆ ಶೀಘ್ರವೇ ಅವಕಾಶ: ಸಚಿವ

ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ವರ್ಕ್ ಫ್ರಮ್ ಹೋಂ ಮಾತ್ರವಲ್ಲ; ವರ್ಕ್ ಫ್ರಂ ಎನಿವೇರ್(ಮನೆಯಿಂದ ಅಲ್ಲದೆ ಎಲ್ಲಿಂದಲಾದರೂ) ಅನುಕೂಲ ಕಲ್ಪಿಸಲು ಕಾನೂನು ಜಾರಿಗೆ ತರಲಾಗುವುದು ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. ೨೩ ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಮಾತನಾಡಿ, ಲಾಕ್‌ಡೌನ್ ವೇಳೆ ಸಂದರ್ಭದಲ್ಲಿ ಐಟಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿ, ಶೇ.೭ ರಷ್ಟು ಅಭಿವೃದ್ಧಿ ಸಾಧಿಸಿ ತೋರಿಸಿದ್ದಾರೆ. ಎಲ್ಲಿ ್ಲಂದಲಾದರೂ ಕೆಲಸ ಮಾಡುವುದಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ […]

Back To Top