ಉದ್ಯಾನ ಕಾಯಿದೆ: ನಗರದ ನಾಶಕ್ಕೆ ಮುನ್ನುಡಿ
ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳು ನಡೆಸಿದ ಪ್ರತಿಭಟನೆ ನಡುವೆಯೇ ಸರ್ಕಾರ ರಾಜ್ಯದ ಉದ್ಯಾನಗಳ ನಾಶಕ್ಕೆ ಮುನ್ನುಡಿ ಬರೆಯುವ ಕರ್ನಾಟಕ ಸರ್ಕಾರಿ ಉದ್ಯಾನ ಗಳ(ಸಂರಕ್ಷಣೆ) ಕಾಯಿದೆ 1975ರ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದೆ. ಜೊತೆಗೆ, ಬೆಂಗಳೂರು ಮೆಟ್ರೋಪಾಲಿಟನ್ ಲ್ಯಾಂಡ್ ಟ್ರಾನ್ಸ್ಪೋರ್ಟ್ ಅಥಾರಿಟಿ (ತಿದ್ದುಪಡಿ) ಕಾಯಿದೆ 2026ರ ಮೂಲಕ ಅಧಿಕ ವೆಚ್ಚದ ಮೂಲಸೌಲಭ್ಯ ಯೋಜನೆಗಳಿಗೆ ವಿನಾಯಿತಿ ನೀಡಲು ಮುಂದಾಗಿದೆ; ಮೂರು ಸುರಂಗ ಯೋಜನೆ, 9 ಫ್ಲೈಓವರ್ ಹಾಗೂ 2 ಎತ್ತರದ ಕಾರಿಡಾರ್ ಯೋಜನೆಗಳಿಗೆ ಈ ಕಾಯಿದೆಯಿಂದ ವಿನಾಯಿತಿ ದೊರೆಯಲಿದೆ. […]




