ಕೆನ್-ಬೆಟ್ವಾ ಯೋಜನೆ ಮತ್ತು ಹನೂರಿನ ಹತ್ಯೆಗಳು

ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಯ ಸಂತ್ರಸ್ಥರಿಗೆ ಸಮರ್ಪಕ ಪರಿಹಾರ ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿದ ಬಳಿಕ ಪ್ರತಿಭಟನೆಕಾರರು ನಿರಶನ ಅಂತ್ಯಗೊಳಿಸಿದ್ದಾರೆ. ಅತ್ಯಂತ ಪ್ರಗತಿಪರ ಕಾನೂನು ಎಂಬ ಶ್ಲಾಘನೆಗೊಳಗಾದ ಪರಿಶಿಷ್ಟ ವರ್ಗಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ(ಅರಣ್ಯ ಹಕ್ಕುಗಳ ಗುರುತಿಸುವಿಕೆ) ಕಾಯಿದೆ 2006 ಅಥವಾ ಎಫ್‌ಆರ್‌ಎಯನ್ನು ನ್ಯಾಯಾಲಯಗಳು ಸಮರ್ಪಕವಾಗಿ ವ್ಯಾಖ್ಯಾನಿಸದೆ ಇರುವುದರಿಂದ ಅರಣ್ಯವಾಸಿಗಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಅರಣ್ಯವಾಸಿಗಳು ಮತ್ತು ಕಾ ಡಂಚಿನಲ್ಲಿ ವಾಸಿಸುವ ಜನರ ಕುರಿತ ನಿರ್ಲಕ್ಷ್ಯದ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮೂವರು ಬಲಿಯಾಗಿದ್ದಾರೆ. ಏನಿದು ನದಿ […]

ಅನ್ನದ ಬಟ್ಟಲಿಗೆ ಕೈ ಹಾಕುವ ಇ20

ಕೇಂದ್ರ ಸಚಿವ ನಿತಿನ್‌ ಗಡ್ಕರಿ ವಾಹನಗಳಲ್ಲಿ ಶೇ.100ರಷ್ಟು ಎಥನಾಲ್‌ ಬಳಕೆಗೆ ಅನುಮತಿ ನೀಡುವುದಾಗಿ ಜೂನ್‌ 13, 2026ರಂದು ಘೋಷಿಸಿದರು; ಆನಂತರ, ಎಥನಾಲ್‌ನ್ನು ಜೈವಿಕ ಇಂಧನ, ಐಸೋಬ್ಯುಟನಾಲ್‌ ಆಗಿ ಪರಿವರ್ತಿಸಿ, ಡೀಸೆಲ್‌ ಜೊತೆಗೆ ಮಿಶ್ರಗೊಳಿಸುವ ಯೋಜನೆ ಚಾಲ್ತಿಯಲ್ಲಿದೆ ಎಂದು ಜುಲೈನಲ್ಲಿ ಹೇಳಿದರು. ಜೂನ್‌ 2, 2026ರಂದು ಸಚಿವ ಹರ್ದೀಪ್‌ ಸಿಂಗ್‌ ಪುರಿ ದಿಲ್ಲಿಯಲ್ಲಿ ಇ85 ಇಂಧನ ಬಳಕೆಗೆ ಚಾಲನೆ ನೀಡಿದರು. ಅಷ್ಟಲ್ಲದೆ, ಎಥನಾಲ್‌ ಎಲ್‌ಪಿಜಿ ಮತ್ತು ಪಿಎನ್‌ಜಿಗೆ ಪರ್ಯಾಯವಾಗಿ ಅಡುಗೆ ಮನೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಎಥನಾಲ್‌ ಮಿಶ್ರಿತ […]

ವಸ್ತೆಗುನೆ ಹೋಯಾ, ಕೈಸಿ ಸರ್ಕಾರ್‌ ಹೈ ಯೆ ಮತ್ತು ಸಾಂಸ್ಥಿಕ ವೈಫಲ್ಯ

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಬಳಸಿದ ʻಜಿರಳೆಗಳುʼ ಎಂಬ ಪದದಿಂದ ಜಂತರ್‌ಮಂತರ್‌ನಲ್ಲಿ ಆರಂಭಗೊಂಡ ಆಂದೋಲನವು ಶಿಕ್ಷಣ ಸಚಿವ ಪ್ರಧಾನ್‌ ಅವರ ರಾಜೀನಾಮೆಯಿಂದ ಒಂದು ಹಂತ ತಲುಪಿದೆ. ಪ್ರತಿಭಟನೆ ವೇಳೆ ಪ್ರಧಾನಿಯನ್ನು ಟೀಕಿಸಿದ ಬಾಲಕಿ ರುಚಿಕಾ ಸಿಂಗ್‌ಳನ್ನು ಬೆದರಿಸಿ ತಪ್ಪೊಪ್ಪಿಗೆ ಪಡೆದಿರುವುದಲ್ಲದೆ, ರಾಜೀನಾಮೆ ಬಳಿಕ ಸದನಕ್ಕೆ ಆಗಮಿಸಿದ ಧರ್ಮೇಂದ್ರ ಪ್ರಧಾನ್‌ ಅವರಿಗೆ ಹಾರ ಹಾಕಿ ಸಂಭ್ರಮಿಸಲಾಗಿದೆ. ಪ್ರತಿಭಟನೆಗೆ ಕಾರಣವಾದ ಶಿಕ್ಷಣದ ವ್ಯಾಪಾರೀಕರಣ, ಬಡತನ ಹಾಗೂ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಯಾವುದೇ ಪ್ರಾಯೋಗಿಕ ಕಾರ್ಯನೀತಿ ರೂಪಿಸಿಲ್ಲ; ಸುಳ್ಳು ಹಾಗೂ […]

ವಿದೇಶಿ ದೇಣಿಗೆ ನಿಯಂತ್ರಣ ಕಾನೂನು 2026: ಎನ್‌ಜಿಒಗಳಿಗೆ ಅಂಕುಶ

ವಿದೇಶಿ ದೇಣಿಗೆ ನಿಯಂತ್ರಣ ಮಸೂದೆ 2026 ಅನುದಾನ ಪಡೆಯಲು ಪಾಲಿಸಬೇಕಾದ ನಿಯಮಗಳನ್ನು ಬಿಗಿಗೊಳಿಸಿದೆ. ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್‌ಎ)ದ ಹೊಸ ನಿಯಮ ಗಳ ಪ್ರಕಾರ, ದೇಣಿಗೆಯನ್ನು 16 ಧಾರ್ಮಿಕ, 22 ಶೈಕ್ಷಣಿಕ, 19 ಆರ್ಥಿಕ, 18 ಸಾಂಸ್ಕೃತಿಕ ಹಾಗೂ ಸಾಮಾಜಿಕ ಉದ್ದೇಶದ 30 ಸೇರಿದಂತೆ 105 ಚಟುವಟಿಕೆಗಳಿಗೆ ಮಾತ್ರ ಬಳಸಬೇಕು. ನಿಯಮ ಗಳನ್ನು ಜೂನ್‌ 23, 2026ರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರವು ಮಾರ್ಚ್‌ 25, 2026ರಂದು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಿತು. ಬಲವಂತದ ಮತಾಂತರ ಹಾಗೂ ಸಂವಿಧಾನದ […]

ಪಂಜಾಬಿನ ಹಳೆಯ ಗಾಯಗಳನ್ನು ತೆರೆದ ʻಸಟ್ಲಜ್‌ʼ

ಜುಲೈ 5,2026ರಂದು ಜೀ5 ತನ್ನ ಒಟಿಟಿ ವೇದಿಕೆಯಿಂದ ʻಸಟ್ಲಜ್‌ʼ ಚಲನಚಿತ್ರವನ್ನು ತೆಗೆದುಹಾಕಿತು. ಸರ್ಕಾರ ಹೇಳಿದ್ದರಿಂದ ತೆಗೆಯಲಾಗಿದೆ ಎಂದು ಚಿತ್ರನಿರ್ಮಾಪಕರು ಹೇಳಿದರು. ಕೆಲವೊಮ್ಮೆ ಚಲನಚಿತ್ರಗಳು ಸುದ್ದಿಯಾಗುವುದಿಲ್ಲ; ಬದಲಾಗಿ, ಅವುಗಳ ಹಿಂದಿನ ರಾಜಕೀಯ, ಜನರ ಪೂರ್ವಗ್ರಹಗಳು ಮತ್ತು ಸಮಾಜದಲ್ಲಿನ ಗಾಯಗಳನ್ನು ಕೆದಕುವ ಮೂಲಕ ಸುದ್ದಿಯಾಗುತ್ತವೆ. ಸಿದ್ಧಾಂತ/ಹಿಂಸೆ/ನಾಯಕನನ್ನು ವೈಭವೀಕರಿಸುವ ಸಾವಿರಾರು ಸಿನೆಮಾಗಳು ಬಂದಿವೆ; ಮುಂದೆಯೂ ಬರಲಿವೆ. ಆದರೆ, ʻಸಟ್ಲಜ್‌ʼನಂಥ ಚಿತ್ರಗಳು ಸಾಮಾಜಿಕ/ರಾಜಕೀಯ ಕಾರಣದಿಂದಾಗಿ ಮುಖ್ಯವಾಗುತ್ತವೆ. ಸಟ್ಲಜ್‌ ಪ್ರದರ್ಶನ ಜುಲೈ 3ರಿಂದ ಆರಂಭಗೊಂಡಿತು. ಹನಿ ಟ್ರೆಹಾನ್ ನಿರ್ದೇಶನ, ಆರ್‌ಎಸ್‌ವಿಪಿ ಮೂವೀಸ್ ಮತ್ತು ಮ್ಯಾಕ್‌ಗಫಿನ್ […]

ಯುಎಪಿಎ; ಜಾಮೀನು ಇಲ್ಲವೇ ಸೆರೆವಾಸದ ದ್ವಂದ್ವ

ಅಕ್ರಮ ಚಟುವಟಿಕೆ ತಡೆ ಕಾಯಿದೆ(ಯುಎಪಿಎ) ಅಡಿ ಬಂಧಿತರಿಗೆ ಜಾಮೀನು ನೀಡಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟಿನ ಎರಡು ಪೀಠಗಳು ವಿಭಿನ್ನ ತೀರ್ಪು ನೀಡಿರುವುದರಿಂದ, ಆದೇಶದ ಪರಾಮರ್ಶನಕ್ಕೆ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ. ಸಯೀದ್‌ ಅಹ್ಮದ್‌ ಅಬ್ದುಲ್‌ ವಾಹಿದ್‌ ಚೌಧರಿ ವಿ/ಎಸ್‌ ಮಹಾರಾಷ್ಟ್ರ ಸರ್ಕಾರ(2026) ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ನ್ಯಾ.ಮಾಧವ ಜಾಮದಾರ ಅವರು ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರಿಗೂ ಸಂವಿಧಾನ ನೀಡಿರುವ ಹಕ್ಕು; ಪೊಲೀಸರು ಪ್ರಜೆಗಳ ಸೇವಕರೇ ಹೊರತು ಸರ್ಕಾರದ ಉನ್ನತ ಅಧಿಕಾರಿಗಳ ಸೇವಕರಲ್ಲ ಎಂದು ಜುಲೈ 3, 2026ರಂದು ಹೇಳಿದ್ದಾರೆ. […]

ನೀಟ್‌-ಯುಜಿ: ಸರ್ಕಾರದ ಲೋಪಕ್ಕೆ ಟೆಲಿಗ್ರಾಂಗೆ ಬರೆ

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಬಳಿಕ ಮರುಪರೀಕ್ಷೆ ನಡೆದಿದೆ. ಸರ್ಕಾರ ಪರೀಕ್ಷೆಗೆ ಮುನ್ನ ಟೆಲಿಗ್ರಾಂಗೆ ತಾತ್ಕಾಲಿಕ ನಿಷೇಧ ಹೇರಿತು; ಆನಂತರ ವಾಟ್ಸ್‌ಆಪ್‌ ತರಲು ಯೋಜಿಸಿದ್ದ ʻಯೂಸರ್‌ನೇಮ್‌ʼ ಸೌಲಭ್ಯದ ವಿವರ ನೀಡುವಂತೆ ನೋಟಿಸ್‌ ನೀಡಿತು. ಸದ್ಯಕ್ಕೆ ಜಾರಿಗೊಳಿಸುವುದಿಲ್ಲ ಎಂದು ಬೀಸುವ ದೊಣ್ಣೆಯಿಂದ ವಾಟ್ಸ್‌ಆಪ್‌ ತಪ್ಪಿಸಿಕೊಂಡಿದೆ. ಇಂಥದ್ದೇ ನೋಟಿಸ್‌ ಮೆಟಾ, ಅರಟ್ಟೈ ಹಾಗೂ ಸಿಗ್ನಲ್‌ಗೂ ರವಾನೆಯಾಗಿದೆ. ದೆಹಲಿ ಹೈಕೋರ್ಟ್‌ ಕಾಕ್ರೋಚ್‌ ಜನತಾ ಪಕ್ಷದ ಎಕ್ಸ್‌ ಖಾತೆಗೆ ಹೇರಿದ್ದ ನಿರ್ಬಂಧ ತೆರವುಗೊಳಿಸಿದೆ. ಗೋದಿ ಮಾಧ್ಯಮಗಳ ಯುಗದಲ್ಲಿ ಜನಸಾಮಾನ್ಯರು ಸಂವಹನಕ್ಕೆ ಬಳಸುತ್ತಿರುವ ಸಾಮಾಜಿಕ ಮಾಧ್ಯಮಗಳ […]

ತಿನ್ನುವ ಆಹಾರ, ಎದೆ ಹಾಲಿನಲ್ಲಿ ನಂಜು

ಕೇರಳ ಈ ಕೀಟನಾಶಕವನ್ನು 2011ರಲ್ಲಿ ನಿಷೇಧಿಸಿತ್ತು. ಆದರೆ, ಕೇರಳ ಹೈಕೋರ್ಟ್‌ ಫೆಬ್ರವರಿ 2022ರಲ್ಲಿ ನಿಷೇಧವನ್ನು ತೆಗೆದುಹಾಕಿತು. ಆನಂತರ ಒಡಿಷಾ ಅಕ್ಟೋಬರ್‌ 2023ರಲ್ಲಿ, ಬಳಿಕ ತೆಲಂ ಗಾಣ ಏಪ್ರಿಲ್‌ 1, 2026ರಲ್ಲಿ ಹಾಗೂ ಆಂಧ್ರಪ್ರದೇಶ ಜೂನ್‌ 2026ರಲ್ಲಿ ನಿಷೇಧಿಸಿದವು. ಅದೇ ಜಗತ್ತಿನಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಮತ್ತು ತೀವ್ರ ವಿಷಕರ ಕಳೆನಾಶಕ ಪ್ಯಾರಕ್ವಾಟ್‌ ಡೈ ಕ್ಲೋರೈಡ್‌(ರಸಾಯನಿಕ ಹೆಸರು-1,1 ಡೈಮೀಥೈಲ್‌ 4,4 ಬೈಪಿರಿಡಿನಿಯಂ ಡೈಕ್ಲೋರೈಡ್‌ ಅಥವಾ ಮೀಥೈಲ್‌ ವಯಲೋಜೆನ್). 2013ರಲ್ಲಿ ಕೃಷಿ ಸಚಿವಾಲಯ ನೇಮಿಸಿದ ಅನುಪಮ್ ವರ್ಮಾ ನೇತೃತ್ವದ ಪರಿಣತ ಪರಿಶೀಲನಾ […]

Back To Top