ಜವಾವ್ದಾರಿಯುತ ಗ್ರಾಹಕರಾಗುವುದು ತುರ್ತು.
ಅಕ್ಟೋಬರ್ ಮೊದಲ ವಾರ ಪಶ್ಚಿಮ ಮರಾವಳಿಯಲ್ಲಿ ಮೀನು,ಏಡಿ, ಸೀಗಡಿಗಳ ಮಹಾಪೂರ. ರಾಜ್ಯದ ಕರಾವಾರ, ಮಹಾರಾಷ್ಟçದ ಆಲಿಬಾಗ್, ಕೇರಳದ ವರ್ಕಳದಲ್ಲಿ ಏಕಕಾಲದಲ್ಲಿ ಸಂಭವಿಸಿದ ಈ ಮಹಾಬೇಟೆಗೆ ವಿಜ್ಞಾನಿಗಳು ಹಲವು ಕಾರಣ ನೀಡುತ್ತಾರೆ. ಪಶ್ಚಿಮ ಘಟ್ಟದಂತೆ ಕರಾವಳಿಯೂ ನಮ್ಮ ದೇಶದ ಮುಕುಟ ಮಣಿ. ಪಶ್ಚಿಮ ಘಟ್ಟಕ್ಕೆ ಸಮಾನಾಂತರವಾಗಿ ಹರಡಿರುವ ಕರಾವಳಿ, ಗುಕರಾತ್ನಿಂದ ಆರಂಭವಾಗಿ ಕನ್ಯಾಕುಮಾರಿಯ ಮೂಲಕ ಹಾಯ್ದು ಪಶ್ಚಿಮ ಬಂಗಾಳದ ಸುಂದರಬನದವರೆಗೆ ವ್ಯಾಪಿಸಿದೆ. – 01 ನವೆಂಬರ್ 2017 ಸಂಚಿಕೆ-10 ಪುಟ-66
ಗಿರ್ನ ಘನತೆ ಸಿಂಹ.
ಭಾರತೀಯರಿಗೊಂದು ಜಾಡ್ಯವಿದೆ, ಎಲ್ಲ ಅಪಸವ್ಯಗಳಿಗೂ ಬ್ರಿಟಿಷರನ್ನು ದೂರುವುದು. ಆದರೆ, ಬ್ರಿಟಿಷ್ ಅಧಿಕಾಯೊಬ್ಬರ ನಿಶಿತಮತಿಯಿಂದಲೇಈಗ ದೇಶ ಹೆಮ್ಮೆ ಎನಿಸಿಕೊಂಡಿರುವ ಪ್ರಾಣಿಯೊಂದು ಉಳಿದುಕೊಂಡಿತು ಎಂಬುದು ಸತು. ೧೯ನೇ ಶತಮಾನದ ಅಂತ್ಯದ ಹೊತ್ತಿಗೆ ವಾಯವ್ಯ ಭಾರತ, ಬಿಹಾರ ಮತ್ತು ನರ್ಮದಾ ನದಿಯವರೆಗಿನ ಪ್ರದೇಶದಲ್ಕಿ ಸಿಂಹಗಳು ಕಣ್ಮರೆಯಾಗಿದ್ದವು. ಉಳಿದಿದ್ದು ಮಲೇರಿಯಾಪೀಎಇತ ಕಥಿಯಾವಾಡದಲ್ಲಿ ಮಾತ್ರ. – 16ಅಕ್ಟೋಬರ್ 2017 ಸಂಚಿಕೆ-9 ಪುಟ-66
ಕಾಳಿ ಹುಲಿ ಕಾಡಿಗೆ ಕುತ್ತು.
ರಾಜ್ಯವನ್ನು ಬರಪೀಡಿತವಾಗಿರುವುದು ಹೇಗೆ ಎಂಬ ಚಿಂತನೆ ಎಲ್ಲೆಡೆ ನಡೆದಿರುವಾಗಲೇ, ಪರಿಸರ ವಿರೋಧಿ ಕೃತ್ಯಗಳು ನಡೆದಿರುವುದು ವಿಷಾದನೀಯ. ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಪ್ರೊ. ಮಾಧವ್ ಗಾಡ್ಗೀಳ್ ಅವರ ಅಮಿತಿ ನೀಡಿದ್ದ ವರದಿಯನ್ನು ನಾನಾ ಒತ್ತಡಗಳಿಂದ ತಳ್ಳಿ ಹಾಕಿದ್ದು, ಮೂರ್ಖತನದ ಪರಮಾವಧಿ. ಆನರಿಗೆ ನಾನಾ ಒತ್ತಡಗಳಿಂದ ತಳ್ಳಿ ಹಾಕಿದ್ದು, ಮೂರ್ಖತನದ ಪರಮಾನಧಿ. ಜನರಿಗೆ ವರದಿ ಬಗ್ಗೆ ಅರಿವು – 01ಸೆಪ್ಟೆಂಬರ್ 2017 ಸಂಚಿಕೆ-6 ಪುಟ-56
ಹಿಮಾಲಯದ ಉಳಿವಿಗೆ ಚಂಡಿ ಹಿಡಿದ ಭಟ್-
ಸಂಚಿಕೆ-೦5 ಪುಟ-36 to 47
ಸಾವಿಲ್ಲದ ಪ್ಲಾಸ್ಟಿಕ್ಗಾಗಿ ಸತ್ತ!…
ನೆಲದಲ್ಲಿ ನೀರು ಕೆಳಗೆ ಇನ್ನಷ್ಟು ಕೆಳಗೆ ಇಳಿಯುತ್ತಿದೆ. ಆದರೆ, ಸಾವಿಲ್ಲದ, ರೂಹಿಲ್ಲದ ಪದಾರ್ಥದಂತೆ ಪ್ಲಾಟಿಕ್ ಎಂಬುದು ನೆಲ, ಜಲ, ಆಕಾಶ ಸೇರಿದಂತೆ ಎಲ್ಲೇಡೆ ಸರ್ವವ್ಯಾಪಿಯಾಗಿದೆ. ಕೃತಕ ಇಲ್ಲದೇ ಅರೆ ಕೃತಕ ಸಾವಯವ ಸಂಯುಕ್ತಗಳು, ಸುಲಭವಾಗಿ ದ್ರವ ಇಲ್ಲವೇ ಘನ ವಸ್ತುವಾಗಿ ಪರಿವರ್ತಿಸಬಹುದು, ಅಚ್ಚು ಹಾಕಬಹುದು. ಈ ಗುಣವೇ ಪ್ಲಾಸ್ಟಿಕ್ ಎಲ್ಲೆಡೆ ತುಂಬಲು ಕಾರಣವಾಗಿದೆ. -15 ಆಗಸ್ಟ್. 2017 ಸಂಚಿಕೆ-5 ಪುಟ-66
ಅರಣ್ಯ ಸಂಪತ್ತಿನ ಘಟ್ಟ ಹತ್ತಿಸಲಿದೆ ರೈಲು…
೧೯೫೧ರಲ್ಲಿ ಪ್ರಸ್ತಾವ ಸಲ್ಲಿಕೆಯಾಗಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಮತ್ತೆ ಜೀವ ಬಂದಿದೆ. ಜುಲೈ ೧೦ರಂದು ನಡೆದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾದವಣೆ ಮಂತ್ರಾಲಯ(ಎAಒಇಫ್ಸಿಸಿ)ದ ಪ್ರಾಂತೀಯ ಉನ್ನತಾಧಿಕಾರ ಸಮಿತಿ(ಆರ್ಸಿಇ)ಯು ಹಲವು ಶರತ್ತು ವಿಧಿಸಿ ಯೋಜನೆಯ ಮೊದಲ ಹಂತಕ್ಕೆ ಅನುಮತಿ ನೀಡಿದೆ. -01ಆಗಸ್ಟ್ 2017 ಸಂಚಿಕೆ-4 ಪುಟ-26
ಮಾಡೋಕೆ ಬೇರೆ ಕೆಲಸ ಇಲ್ಲ..
ನಮ್ಮದು ಯುವಜನರು ಹೆಚ್ಚು ಸಂಖ್ಯೆಯಲ್ಲರುವ ದೇಶ. ಆದರೆ, ಈ ಡೆಮಾಗ್ರಫಿಕ್ ಡಿವಿಡೆಂಡ್ನ ಪ್ರಯೋಜನ ದೇಶಕ್ಕೆ ಇಲ್ಲವೇ ಯುವಜನರಿಗೆ ಸಿಗುತ್ತಿದೆಯೇ ಎಂಬ ಪ್ರಶ್ನೇಗೆ ಉತ್ತರ ಆಶಾದಾಯಕವಾಗಿಲ್ಲ. ಆಗಸ್ಟ್1. 2017 ಸಂಚಿಕೆ-4 ಪುಟ-62
ಮೇಘರಾಜನೇ ನುಡಿ ನುಡಿ..
ನೀವು ಮಗುವಾಗಿದ್ದಾಗ, ಆಕಾಶದಲ್ಲಿ ಓಡುವ ಮೋಡಗಳನ್ನು ನೋಡುತ್ತಾ, ಇದು ಆನೆಯ ಹಾಗೆಯ , ಇದು ಕರಡಿಯ ಹಾಗಿದೆ ಎಂದೆಲ್ಲ ಗೆಳೆಯ ಗೆಳತಿಯರೊಡನೆ ಬೆಟ್ ಕಟ್ಟಿದ್ದು ನಡನಪಿರಬಹುದು. ಇದು ಒಣದು ಕಾಲದಲ್ಲಿ ಮಕ್ಕಳ ಫೇವರೆಟ್ ಪಾಸ್ಟೈಮ್ ಆಗಿತ್ತು. – ಸಂಚಿಕೆ-3 ಪುಟ-14. 15 July 2017
ಸರೋವರದಲ್ಲಿ ಮುಳುಗುತ್ತಲೇ ಇದೆ ಬದುಕು.
ಭಾಕ್ರಾ ನಂಗಲ್ ಅಣೆಕಟ್ಟುನ್ನು ಉದ್ಘಾಟಿಸುತ್ತ ಪ್ರಧಾನಿ ಪಂಡಿತ್ ನೆಹರು ಅವರು ಅಣೆಕಟ್ಟುಗಳು ಆಧುನಿಕ ದೇಗುಲಗಳು ಎಂದು ಹೊಗಳಿದ್ದಂತೆ. ಪ್ರಾತ: ಸ್ಮರಣೀಯ ಸರ್ ಎಂ. ವಿಶ್ವೇಶ್ವರಯ್ಯ ಅವರ ಜೋಗ ಜಲಪಾತದಿಂದ ನೀರು ಧುಮುಕುತ್ತಿದ್ದುದನ್ನು ಕಂಡು ವಾಟ್ ಎ ವೇಸ್ಟ್ ಎಂದಿದ್ದರು ಎಂಬ ಪ್ರತಿತಯಿದೆ. […]

