ಕೋವಿಶೀಲ್ಡ್ ಬಳಕೆಗೆ ಅನುಮತಿ

ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ತುರ್ತುಸಂದರ್ಭದಲ್ಲಿ ಬಳಸಲು ತಜ್ಞರ ಸಮಿತಿ ಅನುಮತಿ ನೀಡಿದೆ. ಲಸಿಕೆಗೆ ಸಂಬಂಧಿಸಿದ ಅಂತಿಮ ತೀರ್ಮಾನವನ್ನು ಔಷಧ ಮಹಾ ನಿಯಂತ್ರಕರು ತೆಗೆದುಕೊಳ್ಳಬೇಕಿದೆ. ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಈ ಲಸಿಕೆ ತಯಾರಿಸುತ್ತಿದೆ. ಎಸ್‌ಐಐ ಹಾಗೂ ಭಾರತ್ ಬಯೋಟೆಕ್(ಕೊವ್ಯಾಕ್ಸಿನ್ ತಯಾರಕ) ತಾವು ಅಭಿವೃದ್ಧಿಪಡಿಸಿದ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ನಿಯಂತ್ರಿತ ಬಳಕೆಗೆ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಸಂಸ್ಥೆಗಳು ಸಲ್ಲಿಸಿದ್ದ ದತ್ತಾಂಶ ಹಾಗೂ ಇನ್ನಿತರ ಮಾಹಿತಿಗಳನ್ನು ಪರಿಶೀಲಿಸಿದ ತಜ್ಞರ ಸಮಿತಿ, ಕೋವಿಶೀಲ್ಡ್  […]

ಬೆಂಗಳೂರಿನ 3 ಕೇಂದ್ರಗಳಲ್ಲಿ ಲಸಿಕೆ ತಾಲೀಮು

ಕೋವಿಡ್ ಲಸಿಕೆಗೆ ಸಂಬಂಧಿಸಿದಂತ ಇಂದು ತಾಲೀಮು ನಡೆಯಲಿದ್ದು, ಬಿಬಿಎಂಪಿ ವ್ಯಾಪ್ತಿಯ ಎರಡುಆರೋಗ್ಯ ಕೇಂದ್ರಗಳು ಹಾಗೂ ನಗರ ಹೊರವಲಯದ ಒಂದು ಕೇಂದ್ರವನ್ನು ಗುರುತಿಸಲಾಗಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ತಿಳಿಸಿದ್ದಾರೆ. ಇದೇ ಹೊತ್ತಿನಲ್ಲಿ ಶಿವಮೊಗ್ಗ, ಮೈಸೂರು, ಕಲಬುರ್ಗಿ, ಬೆಳಗಾವಿಯಲ್ಲೂ ಲಸಿಕೆ ವಿತರಣೆ ಅಣಕು ಅಭಿಯಾನ ನಡೆಸಲು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಅಧಿಕೃತ ಲಸಿಕೆಯ ವಿತರಣೆಗೆ ಮುನ್ನ ಸಿದ್ಧತೆ ಸಮರ್ಪಕವಾಗಿದೆಯೇ ಎಂಬುದನ್ನು ನೋಡಬೇಕು. ಲೋಪವಿದ್ದರೆ ಸರಿಪಡಿಸಿಕೊಳ್ಳಬಹುದು. ಅದಕ್ಕಾಗಿಅಣಕುಅಭಿಯಾನ ಅಗತ್ಯವಿದೆ. ಡ್ರೈ […]

ನೂತನ ವಿಜ್ಞಾನ ನೀತಿ

ಕೇಂದ್ರ ಸರ್ಕಾರ ವಿಜ್ಞಾನ/ತಂತ್ರಜ್ಞಾನದಲ್ಲಿ ಸ್ವಾವಲಂಬನೆ  ಹಾಗೂ ಆವಿಷ್ಕಾರಕ್ಕೆ ಹೆಚ್ಚು ಅನುದಾನ ನೀಡುವ ನೂತನ ವಿಜ್ಞಾನ ನೀತಿ-೨೦೨೦ ಕರಡು ಸಿದ್ಧಪಡಿಸಿದೆ.   ಮುಂದಿನ ದಶಕದಲ್ಲಿ ದೇಶವನ್ನು ಪ್ರಪಂಚದ ಮೂರು ವೈಜ್ಞಾನಿಕ ಸೂಪರ್ ಪವರ್‌ಗಳಲ್ಲಿ ಒಂದಾಗಿಸುವುದು ಇದರ ಉದ್ದೇಶ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜಾಲತಾಣದಲ್ಲಿ ಎಸ್ಟಿಐಪಿ ಕರಡು ಅಳವಡಿಸಲಾಗಿದ್ದು, ಜನರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ. ಜ.೨೫ರೊಳಗಾಗಿ ಸಲಹೆ-ಸೂಚನೆ ನೀಡಬಹುದು.   Courtesyg: Google (photo)

ನೌಕಾಪಡೆಗೆ ಎಲ್‌ಸಿಯು ಬಲ

ರಕ್ಷಣಾ ವಲಯದ ಸರ್ಕಾರಿ ಸ್ವಾಮ್ಯದ ಉದ್ಯಮವಾದ ಗಾರ್ಡನ್‌ರೀಚ್ ಶಿಪ್ ಬಿಲ್ಡರ್ಸ್ ಆ್ಯಂಡ್ ಎಂಜಿನಿಯರ್ಸ್(ಜಿಆರ್‌ಎಸ್‌ಇ) ನೌಕಾಪಡೆಗೆ ಎಂಟನೇ ಲ್ಯಾಂಡಿಂಗ್‌ ಕ್ರಾಫ್ಟ್ ಯುಟಿಲಿಟಿ(ಎಲ್‌ಸಿಯು) ನೌಕೆಯನ್ನು ಹಸ್ತಾಂತರಿಸಿದೆ. ದಕ್ಷಿಣ ಚೀನಾ ಸಮುದ್ರಕ್ಕೆ ತೆರಳುವ ಮಾರ್ಗದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪದ ಸಮೀಪ ನೌಕೆಯನ್ನು ನಿಯೋಜಿಸಲಾಗಿದೆ. ಕರಾವಳಿ ತೀರದಲ್ಲೂ ಕಾರ್ಯಾಚರಣೆ ನಡೆಸಲು ಸಾಧ್ಯವಾಗುವಂತೆ ಹಡಗನ್ನು ವಿನ್ಯಾಸಗೊಳಿಸಲಾಗಿದೆ ಎಂದು ಜಿಆರ್‌ಎಸ್‌ಇ ಮುಖ್ಯಸ್ಥ ನಿವೃತ್ತ ರಿಯರ್ ಅಡ್ಮಿರಲ್ ವಿ.ಕೆ.ಸಕ್ಸೇನಾ ಹೇಳಿದರು. ನೌಕೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಶೇ.90ರಷ್ಟು ಭಾಗಗಳು ಸ್ವದೇಶದಲ್ಲೇ ತಯಾರಾಗಿವೆ. ಯೋಧರ ಜೊತೆಗೆ ಯುದ್ಧ ಟ್ಯಾಂಕ್, […]

ಎಂಪಿಎಂ ನೆಡುತೋಪು ಗುತ್ತಿಗೆ ವಿಸ್ತರಣೆ: ಹೋರಾಟ ಆರಂಭ

ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ನೀಡಿದ್ದ 20 ಸಾವಿರ ಹೆಕ್ಟೇರ್ ನೆಡುತೋಪುಗಳ ಗುತ್ತಿಗೆಅವಧಿಯನ್ನು 40 ವರ್ಷ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಪರಿಸರ ಕರ‍್ಯಕರ್ತರಿಂದ ಪ್ರತಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರ 1976ರಲ್ಲಿ ಕಾಗದ ತಯಾರಿಕೆಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಬೆಳೆಸಲು ಎಂಪಿಎAಗೆ 30 ಸಾವಿರ ಹೆಕ್ಟೇರ್ ಭೂಮಿ ನೀಡಿತ್ತು. 1980ರ ಅರಣ್ಯ ಸಂರಕ್ಷಣೆ ಕಾಯ್ದೆ ಹಾಗೂ ಪರಿಸರ ಸೂಕ್ಷ್ಮ ವಲಯ, ಜೀವ ವೈವಿಧ್ಯ ತಾಣ ಮತ್ತಿತರ ಕಾರಣಗಳಿಂದ ಅಭಯಾರಣ್ಯದ ವ್ಯಾಪ್ತಿಯಲ್ಲಿನ 3,250 ಹೆಕ್ಟೇರ್ ಒಳಗೊಂಡ 109 ನೆಡುತೋಪುಗಳನ್ನು […]

Covid-19 vaccine: Minister visits GTB hospital

Union Health Minister Dr. Harsh Vardhan visited Guru TegBahadur (GTB) hospital here to review the dry run of administering the COVID-19 vaccine. The dry run will be conducted by all the States and Union Territories governments from Saturday. According to the Ministry of Health and Family Welfare (MoHFW), the objective of the dry run for […]

Delhi: Chilly winter morning, light showers

Light rains shower in the pockets of the national capital on Saturday morning which brought down the temperature even further adding to the biting cold prevailing over North India. According to the India Meteorological Department (IMD), the impact of Western Disturbance has begun over Northwest India including Delhi. Palam has reported 0.4 mm rainfall. Ridge, […]

LPG cylinder booking: Single number introduced

Booking a cooking gas LPG refill cylinder is just a missed call away for Indane Gas consumers. Indian Oil LPG customers anywhere in the country can use a single missed call number — 8454955555 — for refill booking, an official statement said on Friday.Booking refills via missed calls is a faster way to book with […]

ಬ್ಯಾಂಕ್ ಸಾಲ, ಠೇವಣಿ ಸಂಗ್ರಹ ಹೆಚ್ಚಳ

ಬ್ಯಾಂಕ್‌ಗಳಲ್ಲಿ ಸಾಲ ನೀಡಿಕೆ ಮತ್ತು ಠೇವಣಿ ಸಂಗ್ರಹ ಡಿಸೆಂಬರ್ ೫ರಿಂದ ೧೮ರ ಅವಧಿಯಲ್ಲಿ ಹೆಚ್ಚಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಬ್ಯಾಂಕ್ ಸಾಲ ನೀಡಿಕೆಯಲ್ಲಿ ಶೇ.೬.೦೫ ಹೆಚ್ಚಳವಾಗಿದ್ದು, ೧೦೫.೪೯ ಲಕ್ಷ ಕೋಟಿ ರೂ. ತಲುಪಿದೆ. ಠೇವಣಿ ಸಂಗ್ರಹ ಶೇ.೧೧.೩೩ ಹೆಚ್ಚಾಗಿದ್ದು, ೧೪೪.೮೨ ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ೨೦೧೯ರ ಡಿಸೆಂಬರ್‌ನ ಇದೇ ಅವಧಿಯಲ್ಲಿ ಸಾಲ ನೀಡಿಕೆ  ೯೯.೪೭ ಲಕ್ಷ ಕೋಟಿ ರೂ. ಹಾಗೂ ಠೇವಣಿ ಸಂಗ್ರಹ ೧೩೦.೦೯ ಲಕ್ಷ ಕೋಟಿ ರೂ. ಇತ್ತು. ಕೃಷಿ ಮತ್ತು ಅದಕ್ಕೆ ಸಂಬAಧಿಸಿದ […]

Back To Top