Micro irrigation programme under Parlimentary panel radar

The Parliamentary committee on water resources is looking at how to conserve water in farming with a focus on micro-irrigation programme ‘Per Drop, More Crop’ and crop diversification. Members of the committee who met on Monday also voiced their concern on the impact of depleting ground water on the implementation of the MGNREG Act. According […]

Tata hike stake in AirAsia India

In a major step to consolidate the group’s aviation business, Tata Sons, the holding company has increased its stake in AirAsia India to 83.67% from 51%. The Tata group bought 32.67 % stake from AirAsiaBerhad at Rs 276.29 crore, the Malaysian airline told the Kuala Lumpur-based exchange Bursa on Tuesday. Tata Sons also has a […]

ಕೋವಿಶೀಲ್ಡ್ ಜನವರಿಯಲ್ಲಿ ಬಿಡುಗಡೆ?

ಸ್ವದೇಶದಲ್ಲಿ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆ, ಕೋವಿಶೀಲ್ಡ್ ಜನವರಿಯಲ್ಲಿ ಬಿಡುಗಡೆ ಆಗಲಿದೆ ಎಂದು ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಹೇಳಿದೆ. ಸುಮಾರು 4 ರಿಂದ 5 ಕೋಟಿ ಡೋಸ್ ಲಸಿಕೆ ಸಿದ್ಧವಾಗಿದ್ದು, ವೈದ್ಯಕೀಯ ಪ್ರಯೋಗದ ಫಲಿತಾಂಶದ ವಿವರಗಳನ್ನು ಭಾರತ ಮತ್ತು ಬ್ರಿಟನ್ ಸರ್ಕಾರಗಳಿಗೆ ಸಲ್ಲಿಸಲಾಗಿದೆ. ಔಷಧ ನಿಯಂತ್ರಕರ ಅನುಮೋದನೆಗಾಗಿ ಕಾಯುತ್ತಿದ್ದು, ಕೆಲವೇ ದಿನಗಳಲ್ಲಿ ಒಳ್ಳೆಯ ಸುದ್ದಿ ನಿರೀಕ್ಷಿಸುತ್ತಿದ್ದೇವೆ ಎಂದು ಸಂಸ್ಥೆಯ ಸಿಸಿಒ ಅದಾರ್ ಪೂನಾವಾಲಾ ತಿಳಿಸಿದರು. ಮಾರ್ಚ್ಗೆ ಉತ್ಪಾದನಾ ಸಾಮರ್ಥ್ಯ 10 ಕೋಟಿ ಹಾಗೂ ಜೂನ್ ವೇಳೆಗೆ 30ಕೋಟಿ ಡೋಸ್ […]

ಸುಸ್ಥಿರ ಕರಾವಳಿ: ಬ್ಲೂ ಫ್ಲ್ಯಾಗ್ ಅನಾವರಣ

ಹೊನ್ನಾವರ ತಾಲೂಕಿನ ಕಾಸರಕೋಡು ಸೇರಿದಂತೆ ದೇಶದ ಎಂಟು ಕಡಲ ತೀರಗಳಲ್ಲಿ ಪ್ರತಿಷ್ಠಿತ ಬ್ಲೂಫ್ಲ್ಯಾಗ್‌ನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ ಜಾವಡೇಕರ್ ಅನಾವರಣಗೊಳಿಸಿದರು. ಮುಂಬರುವ 3-4 ವರ್ಷಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಅಭಿವೃದ್ಧಿಪಡಿಸಲು 100 ಕಡಲ ತೀರಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಎಂಟು ಕಡಲತೀರಗಳಲ್ಲಿ ಬ್ಲೂಫ್ಲ್ಯಾಗ್ ಅನಾವರಣಗೊಳಿಸಲಾಗಿದೆ ಎಂದು ವರ್ಚುವಲ್ ಕಾರ್ಯಕ್ರಮದಲ್ಲಿ ಹೇಳಿದರು. ಕಡಲತೀರದ ಗುಣಮಟ್ಟ ಕಾಪಾಡಲು ಕೈಗೊಂಡ ಕ್ರಮಗಳು ಮತ್ತು ಸುಸ್ಥಿರ ಅಭಿವೃದ್ಧಿ ಉಪಕ್ರಮಗಳಿಗೆ ಅಂತರರಾಷ್ಟ್ರೀಯ ಮನ್ನಣೆ ಸಂದಿದೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ […]

ಡಬ್ಬಿ, ಕಡ್ಡಿ ಮೆಣಸಿನಕಾಯಿ ಬೆಲೆ ಹೆಚ್ಚಳ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಡಬ್ಬಿ ಮೆಣಸಿನಕಾಯಿಗೆ 50,111ರೂ. ಹಾಗೂ ಕಡ್ಡಿ ಮೆಣಸಿನಕಾಯಿಗೆ 38.009 ರೂ. ದಾಖಲೆ ಬೆಲೆ ದೊರೆತಿದೆ. ಗದಗ ಜಿಲ್ಲೆ ಬೆಟಗೇರಿಯ ರೈತ ಮಲ್ಲಿಕಾರ್ಜುನ ಕರೆಮಸ್ಟಿ ಅವರ ಡಬ್ಬಿ ಮೆಣಸಿನಕಾಯಿಗೆ ಆರ್.ಆರ್.ಆಲದಗೇರಿ ಎಂಬುವರು ದಾಖಲೆ ಬೆಲೆ ನೀಡಿ ಖರೀದಿಸಿದ್ದಾರೆ. ಇದು ಡಬ್ಬಿ ಮೆಣಸಿನಕಾಯಿಗೆ ದೊರೆತ ಅತ್ಯಂತ ಅಧಿಕ ಬೆಲೆ ಎನ್ನಲಾಗಿದೆ. Courtesyg: Google (photo)

ಭತ್ತ ಖರೀದಿ ಪ್ರಮಾಣ ಹೆಚ್ಚಳ

ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯಡಿ 86 ಸಾವಿರ ಕೋಟಿ ರೂ. ವೆಚ್ಚದಲ್ಲಿ 456 ಲಕ್ಷ ಟನ್ ಭತ್ತವನ್ನು ಖರೀದಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಖರೀದಿ ಪ್ರಮಾಣ ಶೇ.೨೫ರಷ್ಟು ಹೆಚ್ಚಳಗೊಂಡಿದೆ. 2020-21ನೇ ಸಾಲಿನ ದವಸ ಧಾನ್ಯ ಖರೀದಿ ಮುಂದುವರಿದಿದೆ. ಪಂಜಾಬ್, ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಕರ್ನಾಟಕ, ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ಹತ್ತಿ ಖರೀದಿ ಚಾಲ್ತಿಯಲ್ಲಿದೆ. ಡಿ.27ರವರೆಗೆ 19 ಸಾವಿರ ಕೋಟಿ ರೂ ಮೌಲ್ಯದ 67 ಲಕ್ಷ ಹತ್ತಿ ಅಂಡಿಗೆಗಳನ್ನು […]

ಎಪಿಎಂಸಿ ಸೆಸ್ ಪಾಲು ಇಳಿಕೆ

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಸೆಸ್‌ನಲ್ಲಿ ದೊರೆಯುತ್ತಿದ್ದ ಪಾಲನ್ನು ಶೇ.1ರಿಂದ ಶೇ.0.60ಕ್ಕೆ ಇಳಿಸಲು ಸಂಪುಟ ಸಭೆ ನಿರ್ಧರಿಸಿದೆ. ಶೇ.೨ರಷ್ಟು ಸೆಸ್‌ನಲ್ಲಿ ತಲಾ ಶೇ.1ರಷ್ಟನ್ನು ವರ್ತಕರಿಗೆ ಮತ್ತು ಎಪಿಎಂಸಿಗಳಿಗೆ ಹಂಚಿಕೆ ಮಾಡಲಾಗಿತ್ತು. ಶೇ.೧ರಷ್ಟು ಸೆಸ್‌ನಿಂದ ವಹಿವಾಟು ನಿರ್ವಹಣೆ ಕಷ್ಟ ಎಂದು ರಾಜ್ಯದ ಹಲವೆಡೆ ವರ್ತಕರು ಎಪಿಎಂಸಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ಮೊದಲು ಎಪಿಎಂಸಿಗಳಿಗೆ ಸೆಸ್‌ನಲ್ಲಿ ಶೇ.1.50 ಮೊತ್ತ ಸಿಗುತ್ತಿತ್ತು. ಕಾಯ್ದೆ ತಿದ್ದುಪಡಿ ನಂತರ ಮೊತ್ತವನ್ನು ಶೇ.೦.35 ಕ್ಕೆ ಇಳಿಸಲಾಯಿತು. ಆದರೆ, ಆದಾಯ ಕುಸಿತದಿಂದ […]

ವಿಷಮಶೀತ ಜ್ವರಕ್ಕೆ ದೇಶಿ ಲಸಿಕೆ

ವಿಷಮಶೀತ ಜ್ವರಕ್ಕೆ ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ದ್ವಿಪ್ರತಿ ಕಾಯದ ಲಸಿಕೆಯನ್ನು ಸೀರಂ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿದೆ. ಸೀರಂ ಇನ್‌ಸ್ಟಿಟ್ಯೂಟ್, ಪಿಎಟಿಎಚ್, ಬಿಲ್ ಮತ್ತು ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಸಹಯೋಗದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದ್ದು, ಇದಕ್ಕೆ 10 ವರ್ಷ ತೆಗೆದುಕೊಂಡಿದೆ. ಕೇಂದ್ರದ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಆನ್‌ಲೈನ್ ಕಾರ್ಯಕ್ರಮದಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಿದರು. ಎರಡು ಪ್ರತಿಕಾಯಗಳನ್ನು ಹೊಂದಿರುವ ಈ ಲಸಿಕೆ ಪಡೆದವರಲ್ಲಿ ವಿಷಮಶೀತ ಜ್ವರಕ್ಕೆ ರೋಗನಿರೋಧಕ ಶಕ್ತಿ ಹೆಚ್ಚಲಿದೆ. ಮಧ್ಯಮ ಮತ್ತು ಕಡಿಮೆ ಆದಾಯದ ದೇಶಗಳಿಗೆ ಕೈಗೆಟಕುವ […]

ಕಸ್ತೂರಿರಂಗನ್ ವರದಿಗೆ ವಿರೋಧ

ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದಂತೆ ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ಈಗಿರುವ ಸ್ಥಿತಿಯಲ್ಲಿ ಜಾರಿಗೊಳಿಸದಂತೆ ಆಗ್ರಹಿಸಿ, ಅರಣ್ಯ ಸಚಿವ ಆನಂದ್ ಸಿಂಗ್ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದೆ. ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ, ಕಸ್ತೂರಿ ರಂಗನ್ ವರದಿ ವಿರೋಧಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ವರದಿಯನ್ನು ಯಥಾವತ್  ಜಾರಿ ಮಾಡದಂತೆ ಆಗ್ರಹಿಸಿ ಕೇಂದ್ರ ಪತ್ರ ಬರೆಯಲಾಗುತ್ತದೆ ಎಂದರು. ಡಿ.೩೧ರಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಪ್ರಕರಣ ವಿಚಾರಣೆಗೆ […]

Back To Top