Power tariff hike to widen BWSSBs losses

The latest hike in power tariff has left the loss-making Bangalore Water Supply and Sewage Board (BWSSB) in a fix. The board, which hasn’t raised the water tariff for the past six years, is set to widen the losses due toa25-paiseperunithikein per unit hike in power tariff for water supply installations. A source in the BWSSB revealed […]

ವಿ.ವಿ, ಕಾಲೇಜು ಆರಂಭಕ್ಕೆ ಯುಜಿಸಿ ಮಾರ್ಗಸೂಚಿ

ಕಳೆದ ಮಾರ್ಚ್‌ನಿಂದ ಮುಚ್ಚಿರುವ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಪುನರಾರಂಭಕ್ಕೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಗುರುವಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಹಾಗೂ ಕೇಂದ್ರದ ಅನುದಾನದಲ್ಲಿ ನಡೆಯುತ್ತಿರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವ ಅಧಿಕಾರವನ್ನು ಆಯಾ ಕುಲಪತಿ ಹಾಗೂ ಸಂಸ್ಥೆಯ ಮುಖ್ಯಸ್ಥರಿಗೆ ನೀಡಲಾಗಿದೆ. ವಿಶ್ವವಿದ್ಯಾನಿಲಯಗಳು, ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳನ್ನು ಪ್ರಾರಂಭಿಸಲು ಆಯಾ ರಾಜ್ಯ ಸರ್ಕಾರಗಳೇ ನಿರ್ಧಾರ ಕೈಗೊಳ್ಳಬೇಕು ಎಂದು ಯುಜಿಸಿ ತಿಳಿಸಿದೆ. ನಿರ್ಬಂಧಿತ ವಲಯದ ಹೊರಗಿರುವ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳನ್ನು ಪುನರಾರಂಭಿಸಲು ಅವಕಾಶ ನೀಡಬೇಕು. ವಿದ್ಯಾರ್ಥಿಗಳು […]

ಭಾರತಕ್ಕೆ ಬಂದಿಳಿದ ಎರಡನೇ ತಂಡ 3 ರಫೇಲ್

ಭಾರತದ ಸೇನೆಪಡೆಗೆ ಎರಡನೇ ತಂಡ ರಫೇಲ್ ಯುದ್ಧವಿಮಾನಗಳು ಜಾಮ್‌ನಗರದ ವಾಯುನೆಲೆಗೆ ಬುಧವಾರ ಸಂಜೆ ಲಗ್ಗೆಇಟ್ಟಿವೆ.  ಫ್ರಾನ್ಸ್ನಿಂದ ಹೊರಟ ಮೂರು ವಿಮಾನಗಳು ಎಲ್ಲಿಯೂ ನಿಲುಗಡೆ ಮಾಡದೇ ನೇರವಾಗಿ ಭಾರತಕ್ಕೆ ಬಂದಿವೆ. ಚೀನಾ ಗಡಿ ಸಂಘರ್ಷದ ಈ ವೇಳೆ ಭಾರತಕ್ಕೆ ಬಂದಿರುವ ಈ ವಿಮಾನಗಳು ವಾಯುಪಡೆಗೆ ಬಲ ತುಂಬಿವೆ. ಎರಡನೇ ತಂಡದ ಆಗಮನದ ಬಳಿಕ ಭಾರತದಲ್ಲಿ ರಫೇಲ್ ಯುದ್ಧವಿಮಾನಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಐದು ವಿಮಾನಗಳ ಮೊದಲ ತಂಡ ಜುಲೈ 29ರಂದು ಭಾರತಕ್ಕೆ ಆಗಮಿಸಿತ್ತು. ಫ್ರಾನ್ಸ್ನ ಡಾಸೊ ಕಂಪನಿಯ ಜತೆ […]

ಬೆಂಗಳೂರಿನಲ್ಲಿ ಎಐ ಸಂಶೋಧನಾ ಕೇಂದ್ರ ಸ್ಥಾಪನೆ

ಭಾರತೀಯ ವಿಜ್ಞಾನ ಸಂಸ್ಥೆ ಸಹಭಾಗಿತ್ವದಲ್ಲ್ಲಿ ಕೃತಕ ಬುದ್ಧಿಮತ್ತೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ತಿಳಿಸಿದರು. ಮುಂಬರುವ ಸವಾಲುಗಳಿಗೆ ಪರಿಹಾರ ಕಂಡುಹಿಡಿಯಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿದರು. ವ್ಯವಸಾಯ ಕ್ಷೇತ್ರದ ಸುಧಾರಣೆಗೆ ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಲು ಒತ್ತು ನೀಡಲೇಬೇಕು. ರಾಜ್ಯದ ಸುಮಾರು ಶೇ.60 ರಷ್ಟು ಜನ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಒಂದೆಡೆ ಆರ್ಥಿಕತೆ ಬೆಳೆಯುತ್ತಿದ್ದರೆ, ಮತ್ತೊಂದೆಡೆ ಕೃಷಿ ಕ್ಷೇತ್ರದ ಕೊಡುಗೆ ಕಡಿಮೆಯಾಗುತ್ತಿರುವುದು ಆಲೋಚನೆಗೀಡು ಮಾಡುವ […]

ತಂತ್ರಜ್ಞಾನ ಶೃಂಗಸಭೆ ನ.19ರಿಂದ

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ–2020(ಬೆAಗಳೂರು ಟೆಕ್ ಸಮ್ಮಿಟ್) ಇದೇ ೧೯ ರಿಂದ 21ರವರೆಗೆ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ. ಈ ಬಾರಿಯ ಶೃಂಗಸಭೆಯ ವಿಷಯ ಭವಿಷ್ಯ ಈಗಲೇ(ನೆಕ್ಸ್ಟ್ ಈಸ್ ನೌ)ಎಂದು ನಿರ್ಧರಿಸಲಾಗಿದೆ ಎಂದು ಐಟಿ–ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು. ಕೋವಿಡ್‌ನಿಂದಾಗಿ ವರ್ಚುವಲ್ ಆಗಿ ನಡೆಸಬೇಕಾಗಿದೆ. ೨೫ಕ್ಕೂ ಹೆಚ್ಚು ದೇಶಗಳು ಈ ಸಭೆಯಲ್ಲಿ ಪಾಲ್ಗೊಳ್ಳಿದ್ದು. ವಿಜ್ಞಾನ, ತಂತ್ರಜ್ಞಾನ, ಐಟಿ ಮತ್ತು ಬಿಟಿ ಕ್ಷೇತ್ರದಲ್ಲಿ ಬೆಂಗಳೂರು ದೇಶಕ್ಕೆ ನಂಬರ್ 1  ಆಗಿದೆ. ಮುಂದಿನ […]

ಪ್ಯಾರಿಸ್ ಹವಾಮಾನ ಒಪ್ಪಂದದಿದಿಂದ ಅಮೆರಿಕ ನಿರ್ಗಮನ

ಪ್ಯಾರಿಸ್ ಹವಾಮಾನ ಒಡಂಬಡಿಕೆಯಿಂದ ಅಮೆರಿಕ ಬುಧವಾರ ಹೊರ ಬಂದಿದೆ. ಈ ಒಡಂಬಡಿಕೆಯಿಂದ ಅಮೆರಿಕ ಹೊರಗುಳಿಯಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದ ಮೂರು ವರ್ಷಗಳ ತರುವಾಯ ಈ ಬೆಳವಣಿಗೆ ನಡೆದಿದೆ. ಟ್ರಂಪ್ ಅವರು, ಈ ಒಡಂಬಡಿಕೆಯಿAದ ಹೊರಬರುವ ತೀರ್ಮಾನವನ್ನು 2017ರಲ್ಲಿಯೇ ಪ್ರಕ ಟಿಸಿದ್ದರು. ಆದರೆ, ಈ ಕುರಿತು ಕಳೆದ ವರ್ಷವಷ್ಟೇ ವಿಶ್ವಸಂಸ್ಥೆಗೆ ಅಧಿಕೃತವಾಗಿ ತಿಳಿಸಲಾಗಿತ್ತು. ಒಂದು ವರ್ಷ ಕಾಯುವ ಅವಧಿ ಬುಧವಾರ ಅಂತ್ಯಗೊAಡಿತ್ತು.  

ಪಟಾಕಿ ನಿಷೇಧ

ದೇಶದ ದೊಡ್ಡ ಹಬ್ಬವಾದ ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್‌ಜಿಟಿ), ಸೇರಿದಂತೆ 18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಮೇಲ್ಮನವಿಯ ಸಲ್ಲಿಸಿದವು, ವಿಚಾರಣೆಗೆ ಒತ್ತು ನೀಡಿರುವ ಕರ್ನಾಟಕವೂ ಸರ್ಕಾರಗಳಿಗೆ ಬುಧವಾರ ನೋಟಿಸ್ ಜಾರಿ ಮಾಡಿದೆ. ದೀಪಾವಳಿ ಪ್ರಯುಕ್ತ ಪಟಾಕಿ ನಿಷೇಧ ಕೋರಿ ಇಂಡಿಯನ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಹಸಿರು ಪೀಠ, ಗುರುವಾರದೊಳಗೇ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ನವೆಂಬರ್ […]

ಸೇವಾ ವಲಯದ ಚೇತರಿಕೆ

ದೇಶದ ಸೇವಾ ವಲಯದ ಚಟುವಟಿಕೆಗಳು ಅಕ್ಟೋಬರ್‌ನಲ್ಲಿ ಚೇತರಿಕೆಯ ಹಾದಿಗೆ ಮರಳಿವೆ. ಲಾಕ್‌ಡೌನ್ ನಿರ್ಬಂಧಗಳ ಸಡಿಲಿಕೆಯಿಂದಾಗಿ ಮಾರುಕಟ್ಟೆ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತಿದೆ. ಇದರಿಂದಾಗಿ ಸೇವಾ ವಲಯ ಚೇತರಿಸಿ ಕೊಂಡಿದೆ ಎಂದು ಐಎಚ್‌ಎಸ್ ಮರ್ಕಿಟ್ ಸಂಸ್ಥೆ ಹೇಳಿದೆ. ಸೆಪ್ಟೆಂಬರ್‌ನಲ್ಲಿ 49.8ರಷ್ಟು ಇದ್ದ ಸೇವಾ ವಲಯದ ಚಟುವಟಿಕೆಗಳ ಸೂಚ್ಯಂಕವು ಅಕ್ಟೋಬರ್‌ನಲ್ಲಿ 54.1ಕ್ಕೆ ಏರಿಕೆಯಾಗಿದೆ. ಫೆಬ್ರುವರಿ ತಿಂಗಳ ಬಳಿಕ ಸೂಚ್ಯಂಕವು ೫೦ಕ್ಕಿಂತಲೂ ಮೇಲಕ್ಕೆ ಏರಿಕೆ ಕಂಡಿರುವುದು ಇದೇ ಮೊದಲ ಬಾರಿಯಾಗಿದೆ. ತಯಾರಿಕಾ ವಲಯದ ಚೇತರಿಕೆಯು ಆಗಸ್ಟ್ನಲ್ಲಿಯೇ ಆರಂಭವಾಗಿದೆ. ಸೇವಾ ವಲಯವು ಈಗ ಚೇತರಿಕೆ […]

Back To Top