ನೀರು, ವಿದ್ಯುತ್ ಕಸಿಯುವ ದತ್ತಾಂಶ ಕೇಂದ್ರಗಳು
ಕರ್ನಾಟಕಕ್ಕೆ ಡೇಟಾ ಸೆಂಟರ್(ದತ್ತಾಂಶ ಕೇಂದ್ರ)ಗಳು ಕೈತಪ್ಪಿಹೋಗಿ, ಆಂಧ್ರಪ್ರದೇಶದ ಪಾಲಾಗಿದ್ದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಯಿತು. ಕರಾವಳಿ ಜಿಲ್ಲೆಯಲ್ಲಿ ಇವುಗಳ ಸ್ಥಾಪನೆಗೆ ಅತ್ಯುತ್ಸಾಹ ವ್ಯಕ್ತವಾಗಿತ್ತು. ಇದು ಮಾಹಿತಿ ತಂತ್ರಜ್ಞಾನ ಮೇಲುಗೈ ಸಾಧಿಸಿರುವ, ದತ್ತಾಂಶವು ಚಿನ್ನ ಆಗಿರುವ ಯುಗ. ಕಟ್ಟು ಜಾಣ್ಮೆ(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್)ಯ ಉಬ್ಬರದ ಈ ಕಾಲಮಾನದಲ್ಲಿ ದತ್ತಾಂಶ ಕೇಂದ್ರಗಳು ಅತ್ಯವಶ್ಯ. ಆದರೆ, ವಿದ್ಯುತ್ ಹಾಗೂ ನೀರಿನ ತೀವ್ರ ಕೊರತೆ ಇರುವಲ್ಲಿ ಇವು ಅಗತ್ಯವೇ? ರಾಜಸ್ಥಾನ ಹೊರತುಪಡಿಸಿದರೆ, ಕರ್ನಾಟಕ ಬರಕ್ಕೆ ತುತ್ತಾಗಬಲ್ಲ ಸಾಧ್ಯತೆ ಹೆಚ್ಚು ಇರುವ ಮತ್ತು ನೀರಿನ ತೀವ್ರ ಕೊರತೆ […]

