Author: Rutha Editor

Journalist,Translator,avid bibliophile

ಯಕ್ಷಗಾನ ಪ್ರಿಯರಿಗೆ ಆನ್‌ಲೈನ್ ಸಾಥ್!

ಯಕ್ಷಗಾನವೆಂದರೆ ಮನಸ್ಸು ಹುಚ್ಚೆದ್ದು ಕುಣಿಯುವ ಯಕ್ಷಗಾನ ಪ್ರೇಮಿಗಳಿಗೆ ಕೋವಿಡ್ ದಿನಗಳು ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಆದರೂ, ಸಾಲು ಸಾಲು ಯಕ್ಷಗಾನ ಕಾರ್ಯಕ್ರಮಗಳು ಆನ್ಲೈನ್ನಲ್ಲೇ ‘ಲೈವ್’ ಪ್ರದರ್ಶನ ಕಂಡಿವೆ. ವೃತ್ತಿ ಮೇಳಗಳು ತಿರುಗಾಟ ನಿಲ್ಲಿಸಬೇಕಾಗಿ ಬಂದಾಗ ಯಕ್ಷಗಾನ ಪ್ರೇಕ್ಷಕರಿಗೆ ಆಸರೆಯಾಗಿದ್ದು ಆನ್ಲೈನ್. ಬಡಗುತಿಟ್ಟಿನ ಮೊದಲ ಆನ್‌ಲೈನ್ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ ಹೆಗ್ಗಳಿಕೆಯ ಬೆಂಗಳೂರಿನ ‘ಟೀಂ ಉತ್ಸಾಹಿ’, ಒಂದು ಹೆಜ್ಜೆ ಮುಂದೆ ಹೋಗಿ, ಯಕ್ಷಗಾನ ಗುರುಗಳಿಗೆ ಸನ್ಮಾನವನ್ನೂ ಏರ್ಪಡಿಸಿತ್ತು, ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದೆ. ತಿಂಗಳಿಗೆ ಕನಿಷ್ಠ ಎರಡು ಪ್ರದರ್ಶನಗಳನ್ನು ಆನ್‌ಲೈನ್‌ನಲ್ಲೇ […]

ಈ ಬಾರಿ ದಸರಾಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ….

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನ ಹಾವಳಿಯಿಂದ ಈ ಬಾರಿ ದಸರಾ ಮಹೋತ್ಸವ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡಬಾರದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಶಿಫಾರಸು ಮಾಡಿದೆ. ಅ.17ರಂದು ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆಗೆ 200 ಜನ, ಅ.26ರಂದು ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ 300 ಜನರಿಗೆ ಪ್ರವೇಶ ನೀಡಬೇಕೆಂದು ನಿರ್ಧಾರಿಸಲಾಗಿದೆ. ಗಣ್ಯರು, ಸಿಬ್ಬಂದಿ, ಕಲಾವಿದರು ಹಾಗೂ ಭದ್ರತಾ ಸಿಬ್ಬಂದಿ ಕೂಡ ಈ ಸಂಖ್ಯೆಯಲ್ಲಿ ಸೇರಿದ್ದಾರೆ. ವರ್ಚುಯಲ್ (ಆನ್‌ಲೈನ್) ಆಗಿ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಬೇಕು’ […]

ಅಡಕೆಗೆ ಹಳದಿ ಎಲೆ ರೋಗ: ಬೆಳೆಗಾರರು ಹೈರಾಣು

ಕರಾವಳಿ ಮತ್ತು ಮಲೆನಾಡಿನಲ್ಲಿ ಅಡಕೆ ಬೆಳೆಯು ಹಳದಿ ಎಲೆ ರೋಗ ಬಾಧೆÀಗೆ ತುತ್ತಾಗಿದೆ. ಕರಾವಳಿಯ ಸುಳ್ಯ ತಾಲೂಕು, ಮಲೆನಾಡಿನ ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ರೋಗ ವ್ಯಾಪಕವಾಗಿ ಹರಡಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಹಲವೆಡೆ ಕಾಣಿಸಿಕೊಂಡಿದೆ. ಸರ್ಕಾರ-ಕೃಷಿ ಇಲಾಖೆ ಈ ರೋಗಕ್ಕೆ ಶಾಶ್ವತ ಪರಿಹಾರ ನೀಡುವ ಬದಲು ಪುಡಿಗಾಸು ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತದೆ. ಇದರಿಂದಾಗಿ, ರೈತರು ಅಡಕೆ ಮರಗಗಳನ್ನು ಕತ್ತರಿಸಿ ಹಾಕುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ 2,200 ಹೆಕ್ಟೇರ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ […]

ಉಪ ನಗರ ರೈಲು: ಕೇಂದ್ರ ಸಮ್ಮತಿ

ಬೆೆಂಗಳೂರಿಗರಿಗೆ ಇದೊಂದು ಸಿಹಿ ಸುದ್ದಿ. ಜನ-ವಾಹನ ದಟ್ಟಣೆಗೆ ಸಿಲುಕಿ ನರಳುತ್ತಿರುವ ಬೆಂಗಳೂರಿಗರು ಭವಿಷ್ಯದಲ್ಲಿ ಒಂದಿಷ್ಟು ನಿರಾಳ ಆಗಬಹುದು. ವಾಹನ ದಟ್ಟಣೆ ನಿವಾರಣೆಗೆ ಯೋಜಿಸಿರುವ ಉಪನಗರ ರೈಲು ಯೋಜನೆಗೆ ಅಗತ್ಯವಿರುವ 19.000 ಕೋಟಿ ರೂ. ಅನುದಾನ ನೀಡಲು ಕೇಂದ್ರ ಸಚಿವ ಸಂಪುಟ ಸಮ್ಮತಿಸಿದೆ. ಈ ಯೋಜನೆ 148.17 ಕಿಮೀ ಇರಲಿದೆ. ಟರ್‌ಅಂತರದ ಈ ಯೋಜನೆಗೆ ಹಣಕಾಸಿನ ನೆರವು ನೀಡಲು ನಿರ್ಧರಿಸಿದೆ. ಆದರೆ, ವಿಧಾನ ಪರಿಷತ್ ಚುನಾವಣೆ ಮತ್ತು ವಿಧಾನಸಭೆಯ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿಇರುವುದರಿಂದ, ಅಧಿಕೃತ ಘೋಷಣೆ […]

ಮಹಿಳಾ ವಿಜ್ಞಾನಿಗಳಿಗೆ ನೊಬೆಲ್ ಗರಿ

ಫ್ರಾನ್ಸ್ನ ಎಮಾನ್ಯುಎಲ್ ಶೆಪೆಂತೆರ್  ಮತ್ತು ಅಮೆರಿಕದ ಜೆನ್ನಿಫೆರ್ ಡೌನಾ 2020ನೇ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ವಂಶವಾಹಿ ಸರಪಳಿಯ ತಿದ್ದುವಿಕೆ(ಜೀನೋಮ್ ಎಡಿಟಿಂಗ್) ವಿಧಾನದ ಅಭಿವೃದ್ಧಿಗಾಗಿ ಪ್ರಶಸ್ತಿ ನೀಡಲಾಗುತ್ತಿದೆ. ಎಮಾನ್ಯುಯೆಲ್ ಅವರು ಜರ್ಮನಿಯ ಬರ್ಲಿನ್‌ನ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್‌ನ ಪ್ಯಾಥೊಜೆನ್ ವಿಭಾಗದ ನಿರ್ದೇಶಕಿ. ಜೆನ್ನಿಫೆರ್ ಡೌನಾ ಅಮೆರಿಕದ ಬರ್‌ಕ್ಲೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್. ತಳಿ ತಂತ್ರಜ್ಞಾನದಲ್ಲಿ ಅತ್ಯಂತ ಪರಿಣಾಮಕಾರಿ ಸಾಧನಗಳನ್ನು ಇಬ್ಬರೂ ಅನ್ವೇಷಿಸಿದ್ದಾರೆ. ತಳಿಗುಣ ತಿದ್ದುಪಡಿಗೆ ಬಳಸಲಾಗುವ ಅತ್ಯಂತ ಸೂಕ್ಷ್ಮ ಕ್ರಿಸ್ಪರ್ ಕತ್ತರಿಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಈ […]

ಕರ್ನಾಟಕಕ್ಕೆ ಕೋವಿಡ್ ಸವಾಲು

ರಾಜ್ಯದಲ್ಲಿ ಶೇ. 60 ರಷ್ಟು ಮಂದಿ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರು ಪರೀಕ್ಷೆಗೆ ನಿರಾಕರಿಸುತ್ತಿದ್ದಾರೆ. ಆರು ಆಯ್ದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸಮಸ್ಯೆ ವ್ಯಾಪಿಸಿದೆ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ಶೇ.40, ಹಾಸನ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೇ.10 ಜನರು ಪರೀಕ್ಷೆಗೊಳಪಡಲು ಸಿದ್ಧರಿಲ್ಲ. -Courtesyg: Google

ಜಿಎಸ್‌ಟಿ ಮಾತುಕತೆ ವಿಫಲ

ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಒಮ್ಮತದ ತೀರ್ಮಾನ ಸಾಧ್ಯವಾಗಿಲ್ಲ. ಪರಿಹಾರ ನೀಡುವಲ್ಲಿ ಸಮಸ್ಯೆ ಮತ್ತು ಸಂಪೂರ್ಣ ಮೊತ್ತ ಪಾವತಿಸಬೇಕೆಂಬ 10 ಬಿಜೆಪಿಯೇತÀರ ಸರ್ಕಾರಗಳ ಒತ್ತಾಯ ಹಾಗೂ ಸುಂಕ ವಿನಾಯಿತಿಯನ್ನು 2022ರವರೆಗೆ ವಿಸ್ತರಿಸಲು ಕೇಂದ್ರ ಒಪ್ಪಿದರೂ, ರಾಜ್ಯಗಳು ಈ ಪ್ರಸ್ತಾವಕ್ಕೆ ಸಹಮತ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ೧೨ಕ್ಕೆ ಮುಂದೂಡಲಾಗಿದೆ. ಆದರೆ, ಈ ವರ್ಷ ಸಂಗ್ರಹಿಸಿದ 20,000 ರೂ. ಕೋಟಿ ಮೊತ್ತವನ್ನು ವಿತರಿಸಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಕರ್ನಾಟಕ, ಗೋವಾ ಮತ್ತು ಅಸ್ಸಾಂ ರಾಜ್ಯಗಳಿಗೆ ಸಾಲ ಎತ್ತಲು […]

ಪೇಟಿಎಂನಿಂದ ಮಿನಿ ಆ್ಯಪ್ ಸ್ಟೋರ್

ಭಾರತೀಯ ಡೆವಲಪರ್‌ಗಳಿಗೆ ನೆರವಾಗಲು ಪೇಟಿಎಂ ಮಿನಿ ಆಪ್ ಸ್ಟೋರ್‌ನ್ನು ಚಾಲನೆಗೊಳಿಸಿದೆ. ಈ ಮೂಲಕ ಗೂಗಲ್ ಜೊತೆಗೆ ಇನ್ನಷ್ಟು ಸಂಘರ್ಷಕ್ಕೆ ಅಣಿಯಾಗಿದೆ. ಕೆಲವೇ ವಾರಗಳ ಹಿಂದೆ ಗೂಗಲ್ ಪ್ಲೇ ಸ್ಟೋರ್‌ನಿಂದ ಪೇಟಿಎಂನ್ನು ನಿರ್ಬಂಧಿಸಲಾಗಿತ್ತು. ಕ್ರೀಡೆಗಳಲ್ಲಿ ಜೂಜು ಸಂಬAಧಿಸಿದ ನಿಯಮಗಳನ್ನು ಪೇಟಿಎಂ ಉಲ್ಲಂಘಿಸಿದೆ. ಬೆಟ್ಟಿಂಗ್ ಚಟುವಟಿಕೆಗಳಿಗೆ ನೆರವಾಗುತ್ತಿದೆ  ಎನ್ನುವುದು ಗೂಗಲ್ ಆರೋಪ. ಪೇಟಿಎಂ ವ್ಯಾಲೆಟ್, ಪೇಮೆಂಟ್ಸ್ ಬ್ಯಾಂಕ್, ಯುಪಿಐ, ನೆಟ್ ಬ್ಯಾಂಕಿAಗ್ ಮತ್ತು ಕಾರ್ಡ್ ಸೇವೆ ಒದಗಿಸುತ್ತಿದೆ. ನಿಷೇಧವÀನ್ನು ಸವಾಲಾಗಿ ಸ್ವೀಕರಿಸಿರುವ ಪೇಟಿಎಂ, ಗೂಗಲ್‌ಗೆ ಸಡ್ಡು ಹೊಡೆದಿದೆ. ಅದÀÄ ಆರಂಭಿಸಿರುವ […]

ಕೋವಿಡ್: ಶೇ.10 ಮಂದಿಗೆ ಸೋಕು

ಜಗತ್ತಿನ ಶೇ.10ರಷ್ಟು ಜನ ಕೋವಿಡ್ ಸೋಂಕಿಗೆ ಸಿಲುಕಿರಬಹುದು. ಈವರೆಗೆ ೩೫ ದಶಲಕ್ಷಕ್ಕಿಂತ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿವೆ ಹಾಗೂ 0.04 ದಶಲಕ್ಷ ಮಂದಿ ಮರಣ ಹೊಂದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ವೈರಸ್ ಮೊದಲು ಚೀನಾದಲ್ಲಿ ಕಾಣಿಸಿಕೊಂಡ ಬಳಿಕ ಜಗತ್ತಿನ ಒಟ್ಟು ಜನಸಂಖ್ಯೆ 7.8ಶತಕೋಟಿಯಲ್ಲಿ ಹತ್ತನೇ ಒಂದು ಭಾಗದಷ್ಟು ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇದು ಅಧಿಕೃತ ಅಂದಾಜಿಗಿತ ಇಪ್ಪತ್ತು ಒಟ್ಟು ಹೆಚ್ಚು.  ಜನಸಂಖ್ಯೆಯ ಶೇ. 10 ಮಂದಿ ವೈರಸ್ ಸೋಂಕಿಗೆ ಒಳಗಾಗಿರಬಹುದು ಎಂದು ವಿಶ್ವ ಆರೋಗ್ಯ […]

Back To Top