ಕೊರೊನಾ ಪ್ರಕರಣ ಇಳಿಕೆ
ಕೋವಿಡ್ ಹೊಸ ಪ್ರಕರಣಗಳಲ್ಲಿ ಇಳಿಕೆಯಾಗಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳು50,592 ಕ್ಕೆ ಕಡಿಮೆಯಾಗಿವೆ. ಅಕ್ಟೋಬರ್ ಮೂರನೇ ವಾರದಲ್ಲಿ ಸಕ್ರಿಯ ಪ್ರಕರಣಗಳು ಲಕ್ಷದ ಆಚೀಚೆ ಇತ್ತು. ರಾಜ್ಯದಲ್ಲಿ ಭಾನುವಾರ ೩,೬೫೨ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ೮.೨೭ ಲಕ್ಷಕ್ಕೆ ಹೆಚ್ಚಿದೆ. ಇವರಲ್ಲಿ 935 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 3,652 ರ್ಟಿ-ಪಿಸಿಆರ್ ಸೇರಿದಂತೆ1.06 ಲಕ್ಷ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈವರೆಗೆ 80 ಲಕ್ಷ ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. […]
ಕೋವಿಡ್ ಲಸಿಕೆ ಅಭಿಯಾನ: ಸಿದ್ಧತೆಗೆ ಕೇಂದ್ರ ಸೂಚನೆ
ಕೋವಿಡ್ ಲಸಿಕೆ ನೀಡುವ ಆಂದೋಲನವನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಮೇಲುಸ್ತುವಾರಿಗೆ ಸಮಿತಿ ರಚಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ಆರೋಗ್ಯ ಸೇವೆಯ ಇನ್ನಿತರ ಕಾರ್ಯಗಳಿಗೆ ತೊಡಕು ಉಂಟಾಗದಂತೆ ನೋಡಿಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲಿ ಗೊಂದಲಮಯ ಮಾಹಿತಿ ಹರಿದಾಡದಂತೆ ನೋಡಿಕೊಳ್ಳುವುದು ಅಗತ್ಯ. ಕೋವಿಡ್–19 ಲಸಿಕೆ ನೀಡುವ ಪ್ರಕ್ರಿಯೆ ಒಂದು ವರ್ಷ ನಡೆಯಬಹುದು. ಆರೋಗ್ಯ ಸೇವೆ ಕಾರ್ಯಕರ್ತರ ಮೂಲಕ ಆರಂಭಿಸಿ, ವಿವಿಧ ಗುಂಪುಗಳಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ಸಮಿತಿ ರಚಿಸಬೇಕು. ಲಸಿಕೆ ದಾಸ್ತಾನಿಡಲು ಶೀತಲಗೃಹ ಸಜ್ಜುಗೊಳಿಸುವುದು, ನಿರ್ವಹಣೆ […]
Recovered Patients Retain Antibodies for At Least 5 Months
A majority of individuals recovering from mild or moderate Covid-19 develop a robust antibody response that lasts for at least five months, according to a study published in the journal Science. While most studies so far have found that antibodies to the novel corona virus go away quickly, this new study conducted at the Icahn […]
ಸಸ್ಯಗಳಲ್ಲಿ ಕೋವಿಡ್ ರೋಗನಿರೋಧಕ ಶಕ್ತಿ
ಕೋವಿಡ್ಗೆ ಲಸಿಕೆ ಕಂಡುಹಿಡಿಯಲು ಭಾರಿ ಸ್ಪರ್ಧೆ ಏರ್ಪಟ್ಟಿದೆ. ಸಾಮೂಹಿಕವಾಗಿ ಲಸಿಕೆ ನೀಡಬೇಕಿರುವುದರಿಂದ, ಯಶಸ್ವಿ ಲಸಿಕೆ ಕಂಡು ಹಿಡಿಯುವ ಕಂಪನಿ ಹಣ ಕೊಳ್ಳೆ ಹೊಡೆಯಲಿದೆ. ಅಮೃತಬಳ್ಳಿ ಇನ್ನಿತರ ಔಷಧ ಗುಣಗಳುಳ್ಳ ಸಸ್ಯಗಳ ಎಲೆ, ಕಾಂಡ ಮತ್ತಿತರ ಭಾಗಗಳು ಹಾಗೂ ಅವುಗಳಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಮದು ಆಯುಷ್ ಇಲಾಖೆ ಹೇಳಿದೆ. ವೈರಾಣುವನ್ನು ಎದುರಿಸಲು ಅರಿಶಿನ, ಜೀರಿಗೆ, ಬೆಳ್ಳುಳ್ಳಿ ಮತ್ತಿತರ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡಬೇಕು. ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಇದ್ದಲ್ಲಿ ರೋಗ ಹರಡುವಿಕೆ […]
ಆರೋಗ್ಯ ಸೇತು ಆ್ಯಪ್: ಕೇಂದ್ರ ಸರ್ಕಾರಕ್ಕೆ ನೋಟಿಸ್
ಆರೋಗ್ಯ ಸೇತು ಆ್ಯಪ್ ಅಭಿವೃದ್ಧಿಪಡಿಸಿದವರು ಯಾರು ಎನ್ನುವ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಆಯೋಗವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ನ್ಯಾಯಾಲಯಗಳು ಆ್ಯಪ್ನ್ನು ಕಡ್ಡಾಯಗೊಳಿಸಬಾರದು ಎಂದು ಸೂಚನೆ ನೀಡಿದ್ದರೂ, ಕೋವಿಡ್ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿ ಆರೋಗ್ಯ ಸೇತು ಆ್ಯಪ್ ಬಳಸಲಾಗಿತ್ತು.ಸುತ್ತಮುತ್ತ ಇರಬಹುದಾದ ಸೋಂಕಿತರ ಪತ್ತೆ ಹಾಗೂ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದೇವೆಯೇ ಎನ್ನುವುದನ್ನೂ ತಿಳಿದುಕೊಳ್ಳಲು ನೆರವಾಗಲಿದೆ ಎಂದುಕೊಂಡು ಲಕ್ಷಾಂತರ ಜನರು ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದರು. ರೈಲು, ಮೆಟ್ರೊ, ಪಾಸ್ಪರ್ಟ್ ಕಚೇರಿ ಮತ್ತಿತರ […]
Dr Reddy’s good performance
Healthy growth in key markets helped Dr Reddy’s Laboratories to post strong operating performance in the September quarter. Though Q2 numbers were lower on a year-on-year basis, the corresponding quarter last year had seen one-off gains. The reported numbers, however, came in ahead of analyst expectations. Improved traction in the US was evident from North […]
ಘನ ತ್ಯಾಜ್ಯ ನಿರ್ವಹಣೆ ನೀತಿಗೆ ಸಮ್ಮತಿ
ರಾಜ್ಯದ ಎಲ್ಲ ನಗರ ಪ್ರದೇಶಗಳಲ್ಲಿ ಡಿಸೆಂಬರ್ ೨೦೨೧ರ ಅಂತ್ಯದ ವೇಳೆಗೆ ಶೇ.೧೦೦ರಷ್ಟು ಘನ ತ್ಯಾಜ್ಯವನ್ನು ಮನೆಗಳ ಹಂತದಲ್ಲೇ ವಿಂಗಡಿಸಿ, ಸಂಗ್ರಹಿಸಿ, ವಿಲೇವಾರಿ ಮಾಡುವ ಗುರಿ ಹೊಂದಿರುವ ನೀತಿಗಳಿಗೆ ಸಮ್ಮತಿ ನೀಡಲಾಗಿದೆ. ಕರ್ನಾಟಕ ನಗರ ಘನ ತ್ಯಾಜ್ಯ ನಿರ್ವಹಣೆ ನೀತಿ-೨೦೨೦ ಮತ್ತು ಕರ್ನಾಟಕ ನಗರ ಘನ ತ್ಯಾಜ್ಯ ನಿರ್ವಹಣೆ ಕಾರ್ಯತಂತ್ರ- ೨೦೨೦ಕ್ಕೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ಜೈವಿಕವಾಗಿ ಕರಗಬಹುದಾದ ಘನ ತ್ಯಾಜ್ಯವನ್ನು ಸಂಪೂರ್ಣವಾಗಿ ಸಂಸ್ಕರಿಸುವ ಗುರಿಯನ್ನು ಈ ನೀತಿ ಹೊಂದಿದೆ. ಅಲ್ಲದೆ, ಭೂಮಿಯಲ್ಲಿ ಹೂಳುವ ಘನ ತ್ಯಾಜ್ಯದ […]
ಕೋವಿಡ್ಗೆ ಅಗ್ಗದ ಕಿಟ್ ಅಭಿವೃದ್ಧಿ
ಕೋವಿಡ್ ಪರೀಕ್ಷೆಯನ್ನು ಜನರಿಗೆ ಎಟಕುವಂತೆ ಮಾಡಲು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಹಾಗೂ ಐಐಟಿ-ಖರಗಪುರದ ವಿಜ್ಞಾನಿಗಳು ಕಡಿಮೆ ಬೆಲೆಯ ಕಿಟ್ ಅಭಿವೃದ್ಧಿ ಪಡಿಸಿದ್ದಾರೆ. ಕೋವಿರಾಪ್ ಎಂಬ ಹೆಸರಿನ ಈ ಕಿಟ್, ಆರ್ಟಿ-ಪಿಸಿಆರ್ ತಪಾಸಣೆಯಷ್ಟೇ ನಿಖರ ಫಲಿತಾಂಶ ನೀಡಲಿದ್ದು, ಶೀಘ್ರವೇ ಮಾರುಕಟ್ಟೆಗೆ ಬರುವ ನಿರೀಕ್ಷೆಇದೆ. ಕಿಟ್ ಬೆಲೆ ೧೦ ಸಾವಿರ ರೂ. ಇದ್ದು, ಬಳಸಲು ಪ್ರಯೋಗಾಲಯ ಮತ್ತು ಪರಿಣತ ಸಿಬ್ಬಂದಿ ಬೇಕಿಲ್ಲ. ಆರ್ಟಿ-ಪಿಸಿಆರ್ನಂತೆ ಗಂಟಲ ದ್ರವದ ಮಾದರಿ ಬಳಸಿಕೊಂಡೇ ಈ ಕಿಟ್ ತಪಾಸಣೆ ನಡೆಸುತ್ತದೆ. ಕಿಟ್ನ್ನು ಸಣ್ಣ ಟೇಬಲ್ […]
ಕೋವಿಡ್ ಇದ್ದರೂ ಉದ್ಯೋಗ ಸೃಷ್ಟಿ
ಕೋವಿಡ್ ನಿಂದ ದೇಶದ ಎಲ್ಲೆಡೆ ನಿರುದ್ಯೋಗ ಹೆಚ್ಚಾಗಿದೆ. ಆದರೆ, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟವು ವೇಗವಾಗಿ ನಿರುದ್ಯೋಗದ ಹಿಡಿತದಿಂದ ಹೊರಬರುತ್ತಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(ಸಿಎಂಐಇ) ತಿಳಿಸಿದೆ. ದೇಶದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭವಾದ ನಂತರ ಆಗಸ್ಟ್ನಲ್ಲಿ ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣವು ಶೇ.೦.೫ಕ್ಕೆ ಇಳಿಕೆಯಾಗಿತ್ತು. ಸೆಪ್ಟೆಂಬರ್ನಲ್ಲಿ ಅದು ಶೇ. ೨.೪ರಷ್ಟಿತ್ತು. ಆದರೆ, ಮಹಾರಾಷ್ಟ್ರದಲ್ಲಿ ನಿರುದ್ಯೋಗ ಪ್ರಮಾಣ ಶೇ. ೪.೫೫, ಗುಜರಾತ್ನಲ್ಲಿ ಶೇ. ೩.೪ ಹಾಗೂ ತಮಿಳುನಾಡಿನಲ್ಲಿ ಶೇ. ೫ ಇತ್ತು. ರಾಷ್ಟç ಮಟ್ಟದಲ್ಲಿನ ನಿರುದ್ಯೋಗ […]

