Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಮಂಗಳೂರಿನಲ್ಲಿ ಎರಡು ಶಾಸನಗಳು ಪತ್ತೆ

ಮಂಗಳೂರು:ಮಂಗಳೂರಿನ ಹೊಯಿಜ್ ಬಜಾರ್‌ನಲ್ಲಿರುವ ಮೀನುಗಾರಿಕಾ ಕಾಲೇಜಿನ ತಂತ್ರಜ್ಞಾನ ವಿಭಾಗದ ಕ್ಯಾಂಪಸ್‌ನಲ್ಲಿ ಎರಡು ಶಾಸನಗಳು ದೊರೆತಿವೆ, ಶಾಸನಗಳಲ್ಲಿ ಒಂದು ಪೋರ್ಚುಗೀಸ್ ಮತ್ತು ಇನ್ನೊಂದು ಹಳೆಗನ್ನಡ (ಹಳೆಯ ಕನ್ನಡ) ದಲ್ಲಿದೆ. ಆಳವಾದ ಅಧ್ಯಯನವನ್ನು ನಡೆಸಲು ಮೈಸೂರಿನ ಶಾಸನ ತಜ್ಞರ ತಂಡವು ಶಾಸನದ ಎಸ್ಟಾಂಪೇಜ್ ಅನ್ನು ತೆಗೆದುಕೊಂಡಿದೆ. ಕನ್ನಡ ಶಾಸನವು 11 ಸಾಲುಗಳನ್ನು ಹೊಂದಿದೆ ಮತ್ತು 11 ನೇ ಶತಮಾನಕ್ಕೆ ಸೇರಿದೆ ಎಂದು ಪ್ರಾಥಮಿಕ ಅಧ್ಯಯನಗಳು ಬಹಿರಂಗಪಡಿಸಿವೆ. ಪೋರ್ಚುಗೀಸ್ ಭಾಷೆಯಲ್ಲಿನ ಶಾಸನದ ಬಗ್ಗೆ ಆಳವಾದ ಅಧ್ಯಯನವನ್ನು ನಡೆಸುವ ಅವಶ್ಯಕತೆಯಿದೆ ಎಂದು ತಜ್ಞರಾದ […]

ಹಳದಿ ರೋಗಕ್ಕೆ ಹಾಳಾದ ಅಡಿಕೆ ಬೆಳೆಗಾರರ ಬದುಕು

ಸುಳ್ಯ: ಕರಾವಳಿ ಕೃಷಿಕರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಈಗ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ ಇದೀಗ ವ್ಯಾಪಕವಾಗಿರುವ ಹಳದಿ ಎಲೆ ರೋಗ ಅಡಿಕೆಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ದ.ಕ. ಜಿಲ್ಲೆಯಲ್ಲಿ ಸಾವಿರಾರೂ ಎಕರೆ ಅಡಿಕೆ ಕೃಷಿ ಹಳದಿ ಎಲೆ ರೋಗಕ್ಕೆ ತುತ್ತಾಗಿದೆ. ಜಿಲ್ಲೆಯ ಸುಳ್ಯ ತಾಲೂಕೊಂದರಲ್ಲೇ ಸಾವಿರಾರು ಎಕರೆ ಅಡಿಕೆ ಕೃಷಿ ಈ ರೋಗ ಬಾಧೆಯಿಂದ ತತ್ತರಿಸಿದೆ. ಇದರಿಂದ ಸಾವಿರಾರು ಕೃಷಿಕರು ಕಂಗಾಲಾಗಿದ್ದಾರೆ. 25-30 ವರ್ಷಗಳ ಹಿಂದೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಕಾಣಿಸಿಕೊಂಡ ಈ ಹಳದಿ ಎಲೆ […]

ಬಮೂಲ್ ನಿಂದ ವಿವಿಧ ಫಲಾನುಭವಿಗಳಿಗೆ ಚೆಕ್ ವಿತರಣೆ

ಇಂದು ಚನ್ನಪಟ್ಟಣ ಬಮೂಲ್ ಶಿಬಿರ ಕಚೇರಿಯಲ್ಲಿ ಬಮೂಲ್ ನಿರ್ದೇಶಕರಾದ ಹೆಚ್.ಸಿ. ಜಯಮುತ್ತು ರವರು 1.62.000  ರೂಪಾಯಿಗಳ ಸದಸ್ಯರ ಮರಣದ ಚೆಕ್ ಗಳು ಮಾದರಿ ಹಸು ಕೊಟ್ಟಿಗೆಯ ಚೆಕ್ಕಗಳು ಸದಸ್ಯರ ವೈದ್ಯಕೀಯ ಮರುಪಾವತಿಯ ಚೆಕ್ ಗಳನ್ನು ವಿವಿಧ ಫಲಾನುಭವಿಗಳಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪ ವ್ಯವಸ್ಥಾಪಕರಾದ ಡಾ: ಕೆಂಪರಾಜು ರವರು ಮುಖ್ಯ ಕಾರ್ಯನಿರ್ವಾಹಕರ ಗಳಾದ ರಾಜು. ಚೆನ್ನಪ್ಪ. ರವಿಕುಮಾರ್. ಶಿವಲಿಂಗು. ಸಿದ್ದಲಿಂಗರಾಜೇ ಅರಸ್. ನೀತೀನ್. ಹಾಗೂ ಫಲಾನುಭವಿಗಳು ಹಾಜರಿದ್ದರು.  

ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು: ಕಿರು ಪರಿಚಯ

ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು: ಒಂದು ಕಿರು ಪರಿಚಯ , ಆಶಾ ಸಿದ್ದಲಿಂಗಯ್ಯ ಕರ್ನಾಟಕದ ಜಾನಪದ ಕಲೆ ಸಂಸ್ಕೃತಿ ಶ್ರೀಮಂತವಾದುದು. ನಶಿಸಿಹೋಗುತ್ತಿರುವ ಈ ಕಲಾಪ್ರಕಾರದ ಮಹತ್ವ ಹಾಗೂ ಅದರ ವಿಶೇಷತೆ, ನಮ್ಮ ಭವ್ಯ ಸಾಂಸ್ಕೃತಿಕ ಪರಂಪರೆಯ ಪರಿಚಯ ನಾಡಿನ ಪ್ರತಿಯೊಬ್ಬ ನಾಗರಿಕರಿಗೂ ಅರಿವಿರಬೇಕಾದುದು ಅಗತ್ಯ. ನಂದೀಧ್ವಜ ಕುಣಿತ: ನಂದೀಧ್ವಜವನ್ನು ನಂದೀಕಂಬ, ನಂದೀಕೋಲು, ವ್ಯಾಸಗೋಲು, ನಂದೀಪಟವೆಂದೂ ಕರೆಯುತ್ತಾರೆ. ಕೊಡಗು ಕರಾವಳಿಯಲ್ಲಿ ಬಿಟ್ಟರೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಈ ಕಲೆ ರೂಢಿಯಲ್ಲಿದೆ. ವೀರಗಾಸೆ: ಶೈವ ಸಂಪ್ರದಾಯದ ಒಂದು ಮಹತ್ವಪೂರ್ಣ […]

ಕನ್ನಡಿಗ, ಬಾಹ್ಯಾಕಾಶ ವಿಜ್ಞಾನಿ ಯು.ಆರ್‌.ರಾವ್‌ಗೆ ಗೂಗಲ್ ಗೌರವ

ಬೆಂಗಳೂರು, ಮಾರ್ಚ್ 10: ಖ್ಯಾತ ಭಾರತೀಯ ವಿಜ್ಞಾನಿ ಹಾಗೂ ಕನ್ನಡಿಗರಾಗಿರುವ ಉಡುಪಿ ರಾಮಚಂದ್ರರಾವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಡೂಡಲ್ ರಚಿಸುವ ಮೂಲಕ ಗೂಗಲ್ ಗೌರವಿಸಿದೆ. ಯುಆರ್ ರಾವ್ ಅವರು 89ನೇ ಹುಟ್ಟುಹಬ್ಬ ಇದಾಗಿದೆ. ಡಾ. ಯು. ಆರ್. ರಾವ್ ಅವರನ್ನು ಅನೇಕರು ಭಾರತದ ಸ್ಯಾಟಲೈಟ್ ಮ್ಯಾನ್ ಎಂದೇ ಕರೆಯುವುದುಂಟು. ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಅಧ್ಯಕ್ಷರಾಗಿದ್ದ ರಾವ್ ಅವರು 1975 ರಲ್ಲಿ ಭಾರತದ ಮೊದಲ ಉಪಗ್ರಹ – ‘ಆರ್ಯಭಟ’ ಉಡಾವಣೆಯ ಮೇಲ್ವಿಚಾರಣೆ ಹೊಣೆ ಹೊತ್ತಿದ್ದರು. ಯುಆರ್ […]

JEE ಮೇನ್ ಪರೀಕ್ಷೆ -2021 : ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

  ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮೇನ್ 2021ರ ನೋಂದಣಿ ಗಡುವನ್ನ ವಿಸ್ತರಿಸಿದ್ದು, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಅರ್ಜಿ ಸಲ್ಲಿಕೆಯ ವಿಂಡೋ ಮಾರ್ಚ್ 10ರವರೆಗೆ ತೆರೆದಿರುತ್ತದೆ. ಆಕಾಂಕ್ಷಿಗಳು ಅಧಿಕೃತ ವೆಬ್ ಸೈಟ್ʼಗೆ ಭೇಟಿ ನೀಡಿ ನಿಗದಿತ ಅವಧಿಯಲ್ಲಿ ಅರ್ಜಿಗಳನ್ನ ಸಲ್ಲಿಸಬಹುದಾಗಿದೆ. ಇನ್ನು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಮೊದಲು ನೋಂದಾಯಿಸಿಕೊಂಡವರೆಲ್ಲರೂ ಜೆಇಇ ಮೇನ್ 2021 ಅರ್ಜಿ ನಮೂನೆಯಲ್ಲಿ ವಿವರಗಳನ್ನ ಅಧಿಕೃತ ಸೈಟ್ jeemain.nta.nic.in ಗೆ ತೆರಳಿ ಮಾರ್ಪಡಿಸಬಹುದು. ಅಂದ್ಹಾಗೆ, ಎನ್ […]

ಕೃತಕ ನಾಟಕ: ಕೇರಲ್ ಕ್ಯಾಪೆಕ್

  ಕೊಳ್ಳೇಗಾಲ ಶರ್ಮ ಮೊನ್ನೆ ಅಂದರೆ ಫೆಬ್ರವರಿ ೨೬ರಂದು ನಮ್ಮಲ್ಲಿ ಸಂಜೆ ಆರು ಗಂಟೆ ಆಗಿದ್ದಾಗ ಯುರೋಪಿನ ಇಪ್ಪತ್ತು ಸಾವಿರ ಮಂದಿ ಒಮ್ಮೆಲೇ ಒಂದು ನಾಟಕವನ್ನು ನೋಡಿದರು. ಇಪ್ಪತ್ತು ಸಾವಿರ ಮಂದಿ ಎಂದರೆ ಅಚ್ಚರಿ ಆಗಿರಬೇಕು. ನಮ್ಮೂರಲ್ಲಿ ನಾಟಕ ನೋಡಲು ಒಂದು ಇನ್ನೂರು ಜನ ಬಂದರೆ ಅದುವೇ ಹೌಸ್‌ ಫುಲ್.‌ ಆದರೆ ಈ ನಾಟಕದ ವಿಶೇಷ ಅಷ್ಟೊಂದು ಜನ ಅದನ್ನು ನೋಡಿದರು ಅನ್ನುವುದಲ್ಲ. ಅದನ್ನು ಬರೆದದ್ದೇ ವಿಶೇಷ. ನಾಟಕವನ್ನು ಯಾವ ರನ್ನ ಪಂಪರಾಗಲಿ, ಶೇಕ್ಸ್‌ ಪಿಯರ್‌, ಕಾಳಿದಾಸನಾಗಲಿ […]

ಕೋವಿಡ್ ಲಸಿಕೆ ಪಡೆಯಲು ಸಕಾರಾತ್ಮಕ ಸ್ಪಂದನೆ; ಮಾರ್ಚ್ ಅಂತ್ಯದವರೆಗೂ ನೊಂದಣಿಯಾದ ಸ್ಲಾಟ್ ಗಳು

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 60 ವರ್ಷ ಮೇಲಿನವರು, ಬೇರೆ ಕಾಯಿಲೆ ಹೊಂದಿರುವ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರೆದಿದೆ. ಕೋವಿಡ್ ಲಸಿಕೆ ಪಡೆಯಲು ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಹೌದು.. ಕೋವಿನ್ ಪೋರ್ಟಲ್‌ನಲ್ಲಿ ಲಕ್ಷಾಂತರ ಮಂದಿ ಕೋವಿಡ್ ಲಸಿಕೆಗಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, ಪರಿಣಾಮ ಮಾರ್ಚ್ ಅಂತ್ಯದ ವರೆಗೂ ಸ್ಲಾಟ್ ಗಳು ಬುಕ್ ಆಗಿವೆ. ಏಪ್ರಿಲ್ ನಲ್ಲಷ್ಟೇ ಸ್ಲಾಟ್ ಗಳು ಖಾಲಿ ಇವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಕೋವಿನ್ ಪೋರ್ಟಲ್ ನಲ್ಲಿ ಹೆಸರು ನೊಂದಾಯಿಸಿಕೊಂಡು ಹತ್ತಿರದ […]

ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಕೆಎಸ್ ಪಿಸಿಬಿ ಹೊಸ ಮಾರ್ಗಸೂಚಿ

ಬೆಂಗಳೂರು, ಮಾರ್ಚ್.03: ರಾಜ್ಯದಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ವಿನ್ಯಾಸ ಮತ್ತು ಸ್ಥಳದ ಕುರಿತಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕದ ಅಪಾರ್ಟ್ ಮೆಂಟ್ ಮತ್ತು ವಾಣಿಜ್ಯ ಮಳಿಗೆಗಳಲ್ಲಿ ಒಳಚರಂಡಿ ಸಂಸ್ಕರಾ ಘಟಕ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮಾರ್ಚ್ 1ರಿಂದಲೇ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದ್ದು, ಈ ಬಗ್ಗೆ ಸಾರ್ವಜನಿಕರು ದೂರು ನೀಡುತ್ತಿದ್ದಾರೆ. ಅದರ ಜೊತೆಗೆ ಹೊಸ ನಿಯಮಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ಕೆರೆಯ ನೀರು ಪ್ರಾಣಿಗಳಿಗೂ ಕುಡಿಯಲು ಯೋಗ್ಯವಲ್ಲ! ರಾಜ್ಯದಲ್ಲಿ […]

Back To Top