Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಭಾರತ ಗ್ರಾಮೀಣ ಅಭಿವೃದ್ಧಿಗೆ ಅರ್ಪಿಸಿಕೊಂಡ ಅಗಾಧ ಜೀವ- ಜೆ.ಸಿ.ಕುಮಾರಪ್ಪ

  –ಸಂತೋಷ ಕೌಲಗಿ, ಜನಪದ ಸೇವಾ ಟ್ರಸ್ಟ್, ಮೇಲುಕೋಟೆ-571431 ೧೯೨೯ರ ಮೇ ತಿಂಗಳಿನ ೯ ನೇ ದಿನ. ಅಹಮದಾಬಾದಿನಲ್ಲಿ ಸುಡು ಬೇಸಿಗೆ. ಮಧ್ಯಾಹ್ನ ೨.೩೦. ಸಾಬರಮತಿ ಆಶ್ರಮದ ಮರದ ಕೆಳಗೆ ಸಗಣಿ ಸಾರಿಸಿದ ನೆಲದ ಮೇಲೆ ಹಿರಿಯರೊಬ್ಬರು ಕುಳಿತು ನೂಲುತ್ತಿ ದ್ದಾರೆ. ಸುಡುಬಿಸಿಲಿನಲ್ಲೂ ಸೂಟು-ಬೂಟುಧಾರಿಯಾಗಿದ್ದ ಯುವಕನೊಬ್ಬ ಅವರು ನೂಲುವುದನ್ನೇ ದಿಟ್ಟಿಸುತ್ತ ನಿಂತಿದ್ದಾನೆ. ೨.೩೦ ಕ್ಕೆ ಸರಿಯಾಗಿ ಆ ಹಿರಿಯರು “ನೀವು ಕುಮಾರಪ್ಪ ಅವರೇ?”ಎಂದು ಕೇಳುತ್ತಾರೆ. ಅಲ್ಲಿಯವರೆಗೂ ನೂಲುತ್ತಿದ್ದ ವ್ಯಕ್ತಿ ಯಾರೆಂದು ಗೊತ್ತಿಲ್ಲದೆ, ನೂಲುವುದನ್ನೇ ನೋಡುತ್ತ ನಿಂತಿದ್ದ ಸೂಟುಬೂಟುಧಾರಿಗೆ ತನ್ನನ್ನು ಮಾತನಾಡಿಸಿದ್ದು […]

ಕರ್ನಾಟಕದಲ್ಲಿ ಕೋವಿಡ್ ಇಳಿಕೆ

ದೇಶದಲ್ಲಿ ಕೋವಿಡ್ ಪ್ರಕರಣಗಳ ಇಳಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯಸಚಿವಾಲಯತಿಳಿಸಿದೆ. ಕಳೆದ 30 ದಿನಗಳಲ್ಲಿ ದಕ್ಷಿಣದ ನಾಲ್ಕು ರಾಜ್ಯಗಳು ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳು ಅತಿ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾಗಿವೆ. ಅ. ೨೯ರಂದು ಇದ್ದ 68,180 ಸಕ್ರಿಯ ಪ್ರಕರಣಗಳು ನ.೨೯ಕ್ಕೆ 24,770ಕ್ಕೆ ಕುಸಿದಿದೆ. ಪರೀಕ್ಷೆ ವಿಧಾನದಲ್ಲಿ ಸುಧಾರಣೆ ಮಾಡಬೇಕಿದೆ.ರೋಗ ಲಕ್ಷಣ ಹೊಂದಿರುವವರನ್ನು ಪ್ರತ್ಯೇಕವಾಗಿ ಇರಿಸುತ್ತಿರುವುದರಿಂದ, ಸೋಂಕು ಹರಡುವಿಕೆ  ತಡೆಯಲು ಸಾಧ್ಯವಾಗಿದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್‌ನ ಹಿರಿಯ ಸೋಂಕು ಶಾಸ್ತ್ರಜ್ಞ ಗಿರಿಧರ್ ಬಾಬು […]

ಖಾಸಗಿ ಶಾಲೆಗಳ ಧರಣಿ ಡಿ.೨ಕ್ಕೆ

ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಡಿ.೨ರಂದು ಧಾರವಾಡ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಕೋವಿಡ್ ನೆಪವೊಡ್ಡಿ ಶಾಲೆಗಳ ಮಾನ್ಯತೆ ನವೀಕರಿಸಲು ಸರ್ಕಾರ ನಿರಾಕರಿಸುತ್ತಿದೆ. ಶಿಕ್ಷಕರಿಗೆ 21,400 ರೂ. ವೇತನ ನೀಡಬೇಕು ಎಂದು ಆದೇಶಿಸಿ ಖಾಸಗಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂದು ಸಂಘ ಆರೋಪಿಸಿದೆ. ಶಾಲೆಗಳನ್ನು ಮುಚ್ಚುವುದರಿಂದ ಲಕ್ಷಾಂತರ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಅಷ್ಟಲ್ಲದೆ, ಸುಪ್ರೀಂಕೋರ್ಟ್ನ ಕೆಲವು ಆದೇಶಗಳನ್ನು ಖಾಸಗಿ ಶಾಲೆಗಳಿಗೆ ಮಾತ್ರ ಅನ್ವಯಿಸಲಾಗುತ್ತಿದೆ. ಸರ್ಕಾರದ ಇಂತಹ […]

ಅಮೆಜಾನ್ ನೌಕರರಿಗೆ ಬೋನಸ್

ಅಮೆಜಾನ್ ಭಾರತದಲ್ಲಿ ಕೆಲಸ ಮಾಡುತ್ತಿರುವ ತನ್ನ ನೌಕರರಿಗೆ ವಿಶೇಷ ಬೋನಸ್ ನೀಡುವುದಾಗಿ  ತಿಳಿಸಿದೆ. ಅಮೆಜಾನ್ ವಿರುದ್ಧ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ #MakeAmazonPay ಅಭಿಯಾನದ ನಡುವೆಯೇ ಅಮೆಜಾನ್ ಈ ಘೋಷಣೆ ಮಾಡಿದೆ. ಅಮೆಜಾನ್ ಭಾರಿ ಲಾಭ ಮಾಡಿಕೊಳ್ಳುತ್ತಿದ್ದರೂ, ಕಂಪನಿಯ ನೌಕರರು ಹಾಗೂ ಪರಿಸರ ಇದಕ್ಕೆ ತೆರುತ್ತಿರುವ ಬೆಲೆ ಬಹಳ ದೊಡ್ಡದು ಎಂದು  ಅಭಿಯಾನ ನಡೆಸುತ್ತಿರುವವರು ದೂರಿದ್ದಾರೆ.  ಆರೋಪವನ್ನು ಅಮೆಜಾನ್ ಅಲ್ಲಗಳೆದಿದೆ. ಅ.೧೬ರಿಂದ ನ.೧೩ರವರೆಗೆ ಕಂಪನಿಯಲ್ಲಿ ಪೂರ್ಣಾವಧಿ ನೌಕರರಾಗಿದ್ದವರಿಗೆ 6,300 ರೂ. ಹಾಗೂ ಅರೆಕಾಲಿಕ ನೌಕರರಿಗೆ 3,150 ರೂ. ಬೋನಸ್ […]

ಹುಬ್ಬಳ್ಳಿ ಇಎಸ್‌ಡಿಎಂ ಎಕ್ಸ್ಚೇಂಜ್ ಉದ್ಘಾಟನೆ ನಾಳೆ

ಎಲೆಕ್ಟ್ರಾನಿಕ್ ಸಿಸ್ಟ್ಂ ಡಿಸೈನ್ ಮ್ಯಾನುಫ್ಯಾಕ್ಷರಿಂಗ್(ಇಎಸ್‌ಡಿ) ಸ್ಟಾರ್ಟ್ಅಪ್‌ನ ಹುಬ್ಬಳ್ಳಿ ಇಎಸ್‌ಡಿಎಂ ಎಕ್ಸ್ಚೇಂಜ್ ಡಿ.೨ ರಂದು ಮಧ್ಯಾಹ್ನ ೨ಕ್ಕೆ ಆನ್‌ಲೈನ್ ಮೂಲಕ ಉದ್ಘಾಟನೆಯಾಗಲಿದೆ. ಎಲೆಕ್ಟ್ರಾನಿಕ್ಸ್ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ, ಇಂಡಿಯಾ ಎಲೆಕ್ಟ್ರಾನಿಕ್ಸ್ ಆ್ಯಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಾ.ಸತ್ಯಗುಪ್ತಾ, ಕೆಎಲ್‌ಇ ತಾಂತ್ರಿಕ ವಿವಿ ಕುಲಪತಿ ಡಾ.ಅಶೋಕ ಶೆಟ್ಟರ್ ಮಾತನಾಡಲಿದ್ದಾರೆ. ಕೆಎಲ್‌ಇ ವಿಶ್ವವಿದ್ಯಾಲಯದ ನವೀನ ಉದ್ಯಮ ಮತ್ತು ತಂತ್ರಜ್ಞಾನ ಕೇಂದ್ರವು ೮೦ಕ್ಕೂ ಅಧಿಕ ಸ್ಟಾರ್ಟ್ ಅಪ್‌ಗಳ ಆರಂಭಕ್ಕೆ ನೆರವಾಗಿದೆ. ಕರ್ನಾಟಕ ಇನ್ನೋವೇಷನ್ ಆ್ಯಂಡ್ ಟೆಕ್ನಾಲಜಿ ಸರ್ವೀಸಸ್(ಕೆಐಟಿಎಸ್), ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾನಿಲಯ […]

ರಾಜ್ಯದಲ್ಲಿ ಮತ್ತೆ ಮಳೆ?

ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತದಿಂದ ಸಂಭವಿಸುವ ಬುರೇವಿ ಚಂಡಮಾರುತದಿAದ ರಾಜ್ಯದಲ್ಲಿ ಮತ್ತೆ ಮಳೆಯ ಸಾಧ್ಯತೆ ಇದೆ. ಶ್ರೀಲಂಕಾ ಹಾಗೂ ತಮಿಳುನಾಡು ಭಾಗಗಳಲ್ಲಿ ಡಿ. ೨ರಂದು ಬುರೇವಿ ಅಪ್ಪಳಿಸಲಿದೆ. ಆದರೆ, ರಾಜ್ಯದಲ್ಲಿ  ಹೆಚ್ಚು ಪರಿಣಾಮ ಬೀರುವ ಸೂಚನೆಗಳಿಲ್ಲ. ಆದರೆ, ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ದುರ್ಬಲವಾಗಿದ್ದರೂ, ತಮಿಳುನಾಡು ಹಾಗೂ ಶ್ರೀಲಂಕಾದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ. ಚಂಡಮಾರುತ ಡಿ.೨ರಂದು ಶ್ರೀಲಂಕಾದ ಕರಾವಳಿ ದಾಟಲಿದ್ದು,  ತಮಿಳುನಾಡು ಹಾಗೂ […]

ಪೇಟಿಎಂ ಮನಿ ಮೂಲಕ ಐಪಿಒ ಹೂಡಿಕೆ ಸೌಲಭ್ಯ

ಪೇಟಿಎಂ ಮನಿ ತನ್ನ ಒಡೆತನದ ನಾನಾ ಕಂಪನಿಗಳ ಐಪಿಒ(ಆರಂಭಿಕ ಸಾರ್ವಜನಿಕ ಹೂಡಿಕೆ ಅವಕಾಶ)ದಲ್ಲಿ ಹೂಡಿಕೆ ಮಾಡುವ ಸೌಲಭ್ಯವನ್ನು ಕಲ್ಪಿಸಲಿದೆ ಎಂದು ಪೇಟಿಎಂ ಹೇಳಿದೆ. ಇದರಿಂದ ರಿಟೇಲ್ ಹೂಡಿಕೆದಾರರಿಗೆ ಸಂಪತ್ತು ಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗಿಗಳಾಗುವ ಅವಕಾಶ ಸಿಗಲಿದೆ. ಐಪಿಒ ಅರ್ಜಿಯನ್ನು ಸಂಪೂರ್ಣವಾಗಿ ಡಿಜಿಟಲ್ ಮಾಡಲಾಗಿದೆ, ಸರಳಗೊಳಿಸಲಾಗಿದೆ. ವರ್ಷದೊಳಗೆ ಶೇ.೮ರಿಂದ ಶೇ.೧೦ರಷ್ಟು ಮಾರುಕಟ್ಟೆ ಪಾಲು ಹೊಂದುವ ಗುರಿ ಕಂಪನಿಗೆ ಇದೆ. ಹೂಡಿಕೆದಾರರ ಬ್ಯಾಂಕ್ ಖಾತೆಗಳಿಗೆ ಜೋಡಿಸಿರುವ ಯುಪಿಐ ಐಡಿ ಮೂಲಕ ತ್ವರಿತವಾಗಿ ಅರ್ಜಿ ಸಲ್ಲಿಸಲು ಪೇಟಿಎಂ ಮನಿ ಅವಕಾಶ ಕಲ್ಪಿಸಿದೆ.ಯಾವ […]

Market LIVE: Indices extend gains; Sensex surges 400 points, Nifty up 0.8%

Vodafone Idea Ltd (Vi) could lose 50-70 million subscribers in the next one year, after shedding 155 million customers in the past nine quarters, Fitch Ratings had said, adding that rival Reliance Jio Infocomm Ltd is expected to corner more than half of Vodafone Idea’s users while the rest could be bagged by Bharti Airtel […]

Unacademy seeks to take on byjus in K-12 education space

The success of education technology companies such as Byju’s and Unacademy has prompted investors to back emerging startups in the segment. In February, Byju’s raised $200 million from General Atlantic at a valuation of over $8 billion, while Unacademy secured $110 million from Facebook and General Atlantic at a valuation of over $500 million. GGV […]

Back To Top