Category: ಋತ ಮೀಡಿಯಾ

ಋತ ಮೀಡಿಯಾ, ಕೃಷಿ-ಗ್ರಾಮೀಣಾಭಿವೃದ್ಧಿ, ಪರಿಸರಜೀವಿಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಹಸಿರು ಉದ್ಯಮ, ಬ್ಯಾಂಕಿಂಗ್-ವಿಮೆ-ಹಣಕಾಸು ಮಾರುಕಟ್ಟೆ ಇತ್ಯಾದಿ ಕ್ಷೇತ್ರಗಳನ್ನು ಆದ್ಯತೆಯಾಗುಳ್ಳ ಸುದ್ದಿ ಮಾಧ್ಯಮ. ಈ ಸಂಬಂಧಿತ ಸುದ್ದಿ, ಪಾಡ್, ವಿಡಿಯೋ, ಡಾಕ್ಯುಮೆಂಟರಿ ಇತ್ಯಾದಿ ಪ್ರಕಟಣೆ ನಮ್ಮ ಉದ್ದೇಶ.

ಬ್ರಹ್ಮೋಸ್ ಯಶಸ್ವಿ ಪರೀಕ್ಷಾರ್ಥ ಉಡಾವಣೆ

ಭಾರತೀಯ ನೌಕಾಪಡೆ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ಡಿ.೨ರಂದು ಪ್ರಾಯೋಗಿಕ ಉಡಾವಣೆ ನಡೆಯಿತು. ಭಾರತೀಯ ನೌಕಾಪಡೆ ಆರು ವಾರಗಳ ಹಿಂದೆ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ನಡೆಸಿತ್ತು. ಭಾರತ ಮತ್ತು ರಷ್ಯಾ ಸಹಭಾಗಿತ್ವದ ಉದ್ಯಮವಾದ ಬ್ರಹ್ಮೋಸ್ ಏರೊಸ್ಪೇಸ್‌ನಲ್ಲಿ ಈ ಸೂಪರ್ ಸಾನಿಕ್ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಇವನ್ನು ಜಲಾಂತರ್ಗಾಮಿ ನೌಕೆ, ಹಡಗು, ವಿಮಾನ ಹಾಗೂ ಭೂಮಿಯಿಂದ ಉಡಾವಣೆ ಮಾಡಬಹುದು. ಭಾರತ ಲಡಾಖ್ ಮತ್ತು ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ […]

ಬಾಟಾಕ್ಕೆ ಭಾರತೀಯ ಸಿಇಒ

ಪಾದರಕ್ಷೆ ತಯಾರಿಕೆ ಕ್ಷೇತ್ರದ ಜಾಗತಿಕ ಸಂಸ್ಥೆ ಬಾಟಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ)ಯಾಗಿ ಸಂದೀಪ್ ಕಟಾರಿಯಾ ನೇಮಕಗೊಂಡಿದ್ದಾರೆ. ಬಾಟಾದ ಜಾಗತಿಕ ಸಿಇಒ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಕಟಾರಿಯಾ, 2017ರಲ್ಲಿ ಬಾಟಾ ಇಂಡಿಯಾದ ಸಿಇಒ ಆಗಿ ಕಂಪನಿ ಸೇರಿದ್ದರು. ಅದಕ್ಕೂ ಮೊದಲು ಯುನಿಲಿವರ್, ಎಮ್  ಬ್ರ್ಯಾಂಡ್ಸ್, ವೊಡಾಫೋನ್ ಮತ್ತಿತರ ಕಂಪನಿಗಳಲ್ಲಿ ಕೆಲಸ ಮಾಡಿದ್ದರು. Courtesyg: Google (photo)

ಜಿಎಸ್‌ಟಿ ಸಂಗ್ರಹ ಹೆಚ್ಚಳ

ನವೆಂಬರ್ ತಿಂಗಳಲ್ಲಿ 1.04 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯ ಸಂಗ್ರಹಆಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಅಕ್ಟೋಬರ್‌ನಲ್ಲಿ 1.05 ಲಕ್ಷ ಕೋಟಿ ರೂ.ಆದಾಯ ಸಂಗ್ರಹವಾಗಿತ್ತು. ಪ್ರಸ್ತುತ ಹಣಕಾಸು ವರ್ಷದಲ್ಲಿ ಎರಡು ತಿಂಗಳಿನಿಂದ ಸತತವಾಗಿ ಒಂದು ಲಕ್ಷ ಕೋಟಿ ರೂ.ಗಿಂತ ಅಧಿಕ ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ಏಪ್ರಿಲ್ ನಲ್ಲಿ ಕೇವಲ 32,172 ಕೋಟಿ ರೂ.ಸಂಗ್ರಹವಾಗಿತು.   Courtesyg: Google (photo)

ತಯಾರಿಕೆ ವಲಯದಲ್ಲಿ ಕುಸಿತ

ದೇಶದ ತಯಾರಿಕೆ ವಲಯದ ಚಟುವಟಿಕೆ ನವೆಂಬರ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಇದಕ್ಕೆ ಕೋವಿಡ್ ಕಾರಣ. ಬೇಡಿಕೆ ಕಡಿಮೆ ಆಗಿರುವುದರಿಂದ ತಯಾರಿಕೆ ತಗ್ಗಿಸಿದೆ ಎಂದು ಐಎಚ್‌ಎಸ್ ಮರ್ಕಿಟ್ ಸಂಸ್ಥೆ ಹೇಳಿದೆ.ಅಕ್ಟೋಬರ್‌ನಲ್ಲಿ ಐಎಚ್‌ಎಸ್ ಮರ್ಕಿಟ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ ೫೮.೯ ಇದ್ದದ್ದು, ನವೆಂಬರ್‌ನಲ್ಲಿ ೫೬.೩ಕ್ಕೆ ಇಳಿದಿದೆ. ಇದು ಮೂರು ತಿಂಗಳ ಕನಿಷ್ಠ ಮಟ್ಟ. ಆದರೆ,  ಪಿಎಂಐ ೫೦ಕ್ಕಿಂತ ಹೆಚ್ಚು ಇರುವುದು ಸಕಾರಾತ್ಮಕ ಬೆಳವಣಿಗೆ ಎನ್ನಲಾಗುವುದರಿಂದ, ತಯಾರಿಕೆ ವಲಯದ ಬೆಳವಣಿಗೆ ಉತ್ತಮವಾಗೇ ಇದೆ ಎಂದು ಐಎಚ್‌ಎಸ್ […]

ಎಲ್ಲರಿಗೂ ಲಸಿಕೆ ಬೇಡ: ಕೇಂದ್ರ

ಎಲ್ಲರಿಗೂ ಕೋವಿಡ್ ಲಸಿಕೆ ಹಾಕಲೇಬೇಕು ಎಂದು ಹೇಳಿಲ್ಲವೆಂದು ಕೇಂದ್ರ ಸರ್ಕಾರ ತಿಳಿಸಿದೆ. ನಿರ್ಣಾಯಕವಾದ ಒಂದಷ್ಟು ಜನರಿಗೆ ಲಸಿಕೆ ಹಾಕುವ ಮೂಲಕ ವೈರಾಣು ಹರಡುವಿಕೆಯ ಸರಪಣಿ ತಡೆಬಹುದು. ಎಲ್ಲರಿಗೂ ಲಸಿಕೆ ಹಾಕಲೇಬೇಕು ಎಂದು ಯಾವತ್ತೂ ಹೇಳಿಲ್ಲ. ಸೀರಂ ಸಂಸ್ಥೆಯ ಕ್ಲಿನಿಕಲ್ ಟ್ರಯಲ್‌ನಲ್ಲಿ ವ್ಯಕ್ತಿಯೊಬ್ಬರಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡಿರುವುದರಿAದ ಜನರಿಗೆ ಲಸಿಕೆ ನೀಡುವಿಕೆ ವಿಳಂಬಗೊಳ್ಳವುದಿಲ್ಲ ಎಂದು ತಿಳಿಸಿದೆ. ಲಸಿಕೆ ಸುರಕ್ಷಿತ: ಆಸ್ಟಾç ಜೆನೆಕಾದ ಉತ್ಪನ್ನ ಕೋವಿಶೀಲ್ಡ್ನ್ನು ಕ್ಲಿನಿಕಲ್ ಟ್ರಯಲ್ ವೇಳೆ ಪಡೆದಿದ್ದ ಚೆನ್ನೈನ ಸ್ವಯಂಸೇವಕನ ಆರೋಗ್ಯದಲ್ಲಿ ಏರುಪೇರಾಗಿರುವ ವಿವಾದ ತೀವ್ರ […]

Logistics co’s witness big growth

Logistics startups like Delhivery,LetsTransport and Ecom Express have seen a spike in business led by online sales of e-commerce firms and large offline retail brands moving online and tapping new age Logistics  platforms to fulfill shipments. The shift to digital methods of buying due to the pandemic has further contributed to the growth of the […]

Back To Top