ಕೋವಿಡ್ ಜಾಗತಿಕ ಪಿಡುಗು: ಸುಪ್ರೀಂಕೋರ್ಟ್
ಕೋವಿಡ್ ವ್ಯಾಪಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಮಾರ್ಗಸೂಚಿ ಹಾಗೂ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್ಒಪಿ)ಗಳ ಅನುಷ್ಠಾನದ ಕೊರತೆ ಇದಕ್ಕೆ ಕಾರಣ ಎಂದು ಹೇಳಿದೆ. ಕೋವಿಡ್ ಒಂದು ಜಾಗತಿಕ ಸಮರ. ಇದರಿಂದ ಜಗತ್ತಿನ ಎಲ್ಲರೂ ಒಂದಲ್ಲ ಒಂದು ರೀತಿ ತೊಂದರೆ ಅನುಭವಿಸುತ್ತಿದ್ದಾರೆ. ಕರ್ಫ್ಯೂ ಅಥವಾ ಲಾಕ್ಡೌನ್ ಹೇರುವ ಮುನ್ನ ಪ್ರಕಟಣೆ ಹೊರಡಿಸಬೇಕು. ಆಗ ಜನರು ಜೀವನ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದು ನ್ಯಾ. ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ವೈದ್ಯರು, ಶುಶ್ರೂಶಕಿಯರು […]




