ರಾಜ್ಯದ ಜೈವಿಕ ಆರ್ಥಿಕತೆ: ೩.೭ ಲಕ್ಷ ಕೋಟಿ ರೂ. ಗುರಿ
ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಜೈವಿಕ ಆರ್ಥಿಕತೆ(ಬಯೋ ಎಕಾನಮಿ) ಕ್ಷೇತ್ರದ ಕೊಡುಗೆಯನ್ನು ೫,೦೦೦ ಕೋಟಿ ಡಾಲರ್ಗಳಿಗೆ(೩.೭ ಲಕ್ಷ ಕೋಟಿ ರೂ.) ಹೆಚ್ಚಿಸಲು ಲಸಿಕೆ, ಕೃಷಿ ತಾಂತ್ರಿಕತೆ, ಜೈವಿಕ-ತಯಾರಿಕೆ ಹಾಗೂ ಸಾಗರ ಸಂಬಂಧಿ ಜೈವಿಕ ತಾಂತ್ರಿಕತೆಯಲ್ಲಿ ಮೌಲ್ಯವರ್ಧನೆ ವಲಯಗಳಿಗೆ ಒತ್ತು ನೀಡಲಾಗುವುದು ಎಂದು ಐಟಿ–ಬಿಟಿ ಸಚಿವರು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಹೇಳಿದರು. ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಕರ್ನಾಟಕ ಜೈವಿಕ ಆರ್ಥಿಕತೆ ವರದಿ-೨೦೨೦ ಅನ್ನು ಶುಕ್ರವಾರ ಬಿಡುಗಡೆ ಮಾಡಿದ ಅವರು, ವರದಿಯು ೭ ಪ್ರಮುಖ ಶಿಫಾರಸುಗಳನ್ನು ಒಳಗೊಂಡಿದೆ ಎಂದರು. […]




