HPCL surges 8% as Co announces Rs 2,500-cr buyback, Q2 profit jumps twofold

Shares of Hindustan Petroleum Corp (HPCL) gained 8.64 per cent to Rs 202.90 on the BSE on Thursday after the company announced it will buy back up to 100 million shares for no more than Rs 250 apiece. The company’s management said it felt the share price was lower than the value it deserves. Besides, […]

ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆ ನಿಷೇಧಕ್ಕೆ ಚಿಂತನೆ

ದೇಶದ ಕೆಲ ಸೂಕ್ಷ್ಮ ಪರಿಸರ ವಲಯದಿಂದ 50 ಕಿ.ಮೀ. ವ್ಯಾಪ್ತಿ ಪ್ರದೇಶಗಳಲ್ಲಿ ಗಣಿಗಾರಿಕೆಗೆ ನಿಷೇಧ ಹೇರುವ ನಿರ್ದೇಶನ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.  ಕಲ್ಲಿದ್ದಲು ಗಣಿಗಾರಿಕೆ ಹರಾಜು ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ಜಾರ್ಖಂಡ್ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ, ಅರಣ್ಯಗಳ ಆರ್ಥಿಕ ಮೌಲ್ಯವನ್ನು ಸರ್ಕಾರಗಳು ಪರಿಗಣಿಸದೇ ಇರುವ ಕಾರಣ ಇಂಥ ಸಮಸ್ಯೆಗಳು ಉದ್ಭವಿಸುತ್ತದೆ. ದೇಶದಲ್ಲಿರುವ ಅಭಿ ವೃದ್ಧಿ ಯೋಜನೆಗಳನ್ನು ನಿಲ್ಲಿಸಲು ನಾವು ಬಯಸುವುದಿಲ್ಲ. ಆದರೆ ಇದಕ್ಕಾಗಿ ನೈಸರ್ಗಿಕ ಸಂಪನ್ಮೂಲ […]

ವಾಯು ಗುಣಮಟ್ಟ ಸುಧಾರಣೆಗೆ ಬಿಬಿಎಂಪಿ ಕಾರ್ಯಯೋಜನೆ

ರಾಜಧಾನಿಯ ರಸ್ತೆಗಳು ವಾಹನಗಳಿಂದ ಕಿಕ್ಕಿರಿದಿದ್ದು, ವಾಯುಮಾಲಿನ್ಯ ಅಧಿಕಗೊಂಡಿದೆ. ವಾಯುಮಾಲಿನ್ಯದ ಮೇಲೆ ನಿಗಾ ಇರಿಸಲು ಪಾಲಿಕೆ ೨೭೯ ಕೋಟಿ ರೂ. ವೆಚ್ಚದ ಕಾರ್ಯಯೋಜನೆಯನ್ನು ಸಿದ್ಧಗೊಳಿಸಿದೆ. ಕೇಂದ್ರ ಹಣಕಾಸು ಸಚಿವಾಲಯ ಯೋಜನೆಗೆ ಮೊದಲ ಕಂತು ೧೩೯ ರೂ.ಕೋಟಿ ಅನುದಾನ ಮಂಜೂರು ಮಾಡಿದೆ. ವಾಯು ಗುಣಮಟ್ಟಕ್ಕೆ ಸಂಬAಧಿಸಿದ ಸಮಗ್ರ ದತ್ತಾಂಶದ ಮೇಲೆ ನಿಗಾ ಇಡಲು ೪೪ ಕೋಟಿ ರೂ. ಹಾಗೂ ಕಸ ವಿಲೇವಾರಿಗೆ ೨೨.೨೨ ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಕೇಂದ್ರೀಕೃತ ನಿಯಂತ್ರಣ ಮತ್ತು ನಿರ್ವಹಣೆ ಕೇಂದ್ರ(ಸಿಸಿಸಿ)ಗಳ ಸ್ಥಾಪನೆ ಯೋಜನೆ ಉದ್ದೇಶ. […]

ಸಂಚಾರ ನಿಯಮ ಉಲ್ಲಂಘನೆಗೆ ತರಬೇತಿ ಶಿಕ್ಷೆ 

ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಾಹನ ಜಪ್ತಿ ಮಾಡುವುದಲ್ಲದೆ, ನಿಯಮಗಳ ಬಗ್ಗೆ ತರಬೇತಿ ಕೊಡಿಸಲು ಪೊಲೀಸರು ಮುಂದಾಗಿದ್ದಾರೆ. ೧೦ ಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘನೆ ಮಾಡಿದವರನ್ನು ಪತ್ತೆ ಮಾಡಿ, ಅವರ ವಾಹನ ಜಪ್ತಿ ಮಾಡಲಾಗುತ್ತಿದೆ. ಇವರಿಗೆ ಥಣಿಸಂದ್ರದಲ್ಲಿರುವ ಸಂಚಾರ ತರಬೇತಿ ಮತ್ತು ರಸ್ತೆ ಸುರಕ್ಷತಾ ಸಂಸ್ಥೆಯಲ್ಲಿ ತರಬೇತಿ ಕೊಡಲಾಗುತ್ತಿದೆ. ೧೦೦ಕ್ಕೆ ೬೦ ಅಂಕ ಪಡೆದವರನ್ನು ಮಾತ್ರ ಉತ್ತೀರ್ಣಗೊಳಿಸಿ, ವಾಹನ ಬಿಡುಗಡೆ ಮಾಡುತ್ತಿದ್ದಾರೆ. ತರಬೇತಿ ಪಡೆದ ಬಗ್ಗೆ ಪ್ರಮಾಣಪತ್ರ ನೀಡಲಾಗುತ್ತಿದೆ. ಕಳೆದ ಒಂದು ವಾರದಲ್ಲಿ೧೮೦ ಜನರಿಗೆ ತರಬೇತಿ […]

ವೊಡಾಫೋನ್ ಐಡಿಯಾ ಸಂಕಷ್ಟದಲ್ಲಿ

ವೊಡಾಫೋನ್ ಐಡಿಯಾ(ವಿಐ) ಕಂಪನಿ ಚಂದಾದಾರರನ್ನು ಕಳೆದುಕೊಳ್ಳುತ್ತಿದ್ದು, ನೆಟ್‌ವರ್ಕ್ ಗುಣಮಟ್ಟ ವರ್ಧನೆಗೆ ಹೆಚ್ಚು ಹೂಡಿಕೆ ಮಾಡಲು ಆಗುತ್ತಿಲ್ಲ. ಜತೆಗೆ, ಕಂಪನಿ ಸಾಲದ ಹೊರೆ ಯಿಂದ ಬಳಲಿದ್ದು, ಉಳಿದ ಕಂಪನಿಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿ ೭,೨೧೮ ಕೋಟಿ ರೂ. ನಷ್ಟ ಅನುಭವಿಸಿದೆ. ೧,೧೫,೯೪೦ ಕೋಟಿ ರೂ. ಸಾಲ ಇದೆ. ವೊಡಾಫೋನ್ ಐಡಿಯಾ ಹೊಂದಾಣಿಕೆ ಮಾಡಿದ ವರಮಾನ(ಎಜಿಆರ್)ದ ಒಟ್ಟು ಬಾಕಿ ೬೫,೪೪೦ ಕೋಟಿ ರೂ. ದೂರಸಂಪರ್ಕ ಇಲಾಖೆಗೆ ನೀಡಬೇಕಿದೆ. ಈ ಬಾಕಿ […]

ಕಿಂಬರ‍್ಲಿ ವಜ್ರದ ಗಣಿ ಸ್ಥಗಿತ

ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದಲ್ಲಿದ್ದ ಆರ್ಗೈಲ್ ಎನ್ನುವ ಹೆಸರಿನ ವಿಶ್ವದ ಅತ್ಯಂತ ದೊಡ್ಡ ನಸುಗೆಂಪು ಬಣ್ಣದ ವಜ್ರ(ಪಿಂಕ್ ಡೈಮಂಡ್)ದ ಗಣಿಯನ್ನು ಮುಚ್ಚಲಾಗಿದೆ ಎಂದು ಪ್ರವರ್ತಕ ಕಂಪನಿ ರಿಯೊ ಟಿಂಟೊ ಹೇಳಿದೆ. ವಜ್ರದ ಹರಳುಗಳ ಸಂಪನ್ಮೂಲ ಖಾಲಿಯಾಗಿರುವುದು ಗಣಿಯನ್ನು ಮುಚ್ಚಲು ಕಾರಣ. ವಿಶ್ವದಲ್ಲಿ ಉತ್ಪತ್ತಿಯಾಗುತ್ತಿರುವ ನಸುಗೆಂಪು ಬಣ್ಣದ ವಜ್ರದ ಶೇ.೯೦ ರಷ್ಟನ್ನು ಆರ್ಗೈಲ್ ಗಣಿಯಿಂದ ತೆಗೆಯಲಾಗುತ್ತಿತ್ತು. ೧೯೭೯ರಲ್ಲಿ ಇಲ್ಲಿ ವಜ್ರದ ಪದರ ಪತ್ತೆಯಾಗಿತ್ತು. ನಾಲ್ಕು ವರ್ಷದ ಬಳಿಕ ಕಂಪನಿ ಇಲ್ಲಿ ಉತ್ಖನನ ಆರಂಭಿಸಿತ್ತು. ಈವರೆಗೆ  ೮೬.೫೦ ಕೋಟಿ ಕ್ಯಾರೆಟ್ […]

ಭೂ ಸುಧಾರಣೆ ಸುಗ್ರೀವಾಜ್ಞೆ ಗೆ ಅಂಕಿತ

ಕರ್ನಾಟಕ ಭೂ ಸುಧಾರಣೆ (ಎರಡನೇ ತಿದ್ದುಪಡಿ) ಸುಗ್ರೀವಾಜ್ಞೆ-೨೦೨೦ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ಕೃಷಿ ಭೂಮಿಯ ಗರಿಷ್ಠ ಮಿತಿಯನ್ನು೧೦೮ ಎಕರೆಗೆ ಇಳಿಸುವುದಾಗಿ ಹೇಳಿದ್ದ ಕಂದಾಯ ಸಚಿವರ ಭರವಸೆ ಸುಗ್ರೀವಾಜ್ಞೆಯಲ್ಲಿ ಉಲ್ಲೇಖವಾಗಿಲ್ಲ. ಕರ್ನಾಟಕ ಭೂ ಸುಧಾರಣೆ ಕಾಯ್ದೆ೧೯೬೧ರ ಕಲಂ ೬೩ರ ಅಡಿ ಕೃಷಿ ಭೂಮಿ ಹೊಂದುವ ಗರಿಷ್ಠ ಮಿತಿಯನ್ನು೧೦೮ ಎಕರೆಗೆ ಇಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ ಅವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದರು. ಅದರ ಪ್ರಸ್ತಾಪ ಸುಗ್ರೀವಾಜ್ಞೆಯಲ್ಲಿ ಇಲ್ಲ. ಕಳೆದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಗೆ ವಿಧಾನಸಭೆ ಸಮ್ಮತಿ ನೀಡಿದ್ದರೂ, ವಿಧಾನಪರಿಷತ್ತಿನಲ್ಲಿ ಮಂಡನೆಯಾಗಿರಲಿಲ್ಲ. […]

ಶೀಘ್ರವೇ ಇನ್ನೊಂದು ಆರ್ಥಿಕ ಪ್ಯಾಕೇಜ್

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶೀಘ್ರದಲ್ಲೇ ಇನ್ನೊಂದು ಸುತ್ತಿನ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಘೋಷಿಸಲಿದ್ದಾರೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಮಂಗಳವಾರ ತಿಳಿಸಿದ್ದಾರೆ. ಅರ್ಥ ವ್ಯವಸ್ಥೆಯ ವಿವಿಧ ಭಾಗಗಳ ಮನವಿ/ಸಲಹೆಗಳನ್ನು ಹಣಕಾಸು ಸಚಿವಾಲಯ ಪರಿಶೀಲಿಸುತ್ತಿದೆ. ಹೊಸ ಪ್ಯಾಕೇಜ್ ಶೀಘ್ರವೇ ಘೋಷಣೆ ಆಗಲಿದೆ. ಹಣಕಾಸು ಸಚಿವೆ ಈ ಬಗ್ಗೆ ವಿವರ ನೀಡಲಿದ್ದಾರೆ ಎಂದು ಬಜಾಜ್ ಹೇಳಿದರು. ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಹಾಗೂ ಬಂಡವಾಳ ವೆಚ್ಚ ಹೆಚ್ಚು ಮಾಡಲು ಕೇಂದ್ರ ಸರ್ಕಾರ ಹಲವು ಕ್ರಮ ಕೈಗೊಂಡಿತ್ತು. […]

Automakers agree to offer discount

The automobile industry has agreed to a government proposal to give a discount of 1 % on purchasing new vehicles if, correspondingly, an old one is scrapped. The government wants to incentivise scrapping old vehicles because of apprehensions of a backlash from the transporter lobby.Union Minister of Road Transport and Highways Nitin Gadkari had a […]

Back To Top