ಎಂಎಸ್‌ಎಂಇ ಸಾಲ: ೩೦ರವರೆಗೆ ವಿಸ್ತರಣೆ

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ(ಎಂಎಸ್‌ಎಂಇ)ಗಳಿಗೆ ಘೋಷಿಸಿರುವ ತುರ್ತು ಸಾಲ ಖಾತರಿ ಯೋಜನೆಯನ್ನು ಕೇಂದ್ರ ಸರ್ಕಾರ ನವೆಂಬರ್ 30ರವರೆಗೆ ವಿಸ್ತರಿಸಿದೆ. 3 ಲಕ್ಷ ಕೋಟಿ ರೂ. ಗುರಿ ತಲುಪಲು ಆಗದಿರುವುದರಿಂದ ಯೋಜನೆಯ ಅವಧಿಯನ್ನು ವಿಸ್ತರಿಸಲಾಗಿದೆ. ಯೋಜನೆಯನ್ನು ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಆರಂಭಿಸಲಾಗಿದೆ.   Courtesyg: Google (photo)  

ರಿಯಲ್ ಎಸ್ಟೇಟ್‌ಗೆ ಗ್ರಾಹಕ ರಕ್ಷಣಾ ಕಾಯ್ದೆ ಅನ್ವಯ: ಸುಪ್ರೀಂ

ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿಯ ಕಾಯ್ದೆ (ರೇರಾ) ಜತೆಗೆ, ಫ್ಲ್ಯಾಟ್ ಖರೀದಿದಾರರು ಸೇವೆಯಲ್ಲಿನ ಲೋಪಗಳ ವಿರುದ್ಧ ಗ್ರಾಹಕ ರಕ್ಷಣಾ ಕಾಯ್ದೆ ಅಡಿ ಪರಿಹಾರ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಫ್ಲ್ಯಾಟ್ ನೀಡಿಕೆಯಲ್ಲಿ ವಿಳಂಬದಿAದ ಗ್ರಾಹಕರು ಪಾವತಿಸಿರುವ ಹಣ ಮತ್ತು 50.000 ರೂ. ವೆಚ್ಚವನ್ನು ಹಿಂತಿರುಗಿಸಿ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ನೀಡಿದ್ದ ನಿರ್ದೇಶನದ ವಿರುದ್ಧ ಇಂಪೀರಿಯಾ ಸ್ಟ್ರಕ್ಚರ್ಸ್ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು.  ಪ್ರಾಜೆಕ್ಟ್ನ್ನು ರೇರಾ ಅಡಿ ನೋಂದಣಿ ಮಾಡಲಾಗಿದೆ. […]

ಮತ್ತೆ ಗರಿಗೆದರಿದ ಬಾಹ್ಯಾಕಾಶ ಯಾನ

ಕೋವಿಡ್ ಹಿನ್ನೆಲೆಯಲ್ಲಿ ಉಪಗ್ರಹ ಉಡಾವಣೆ ಮತ್ತು ಬಾಹ್ಯಾಕಾಶ ಯಾನ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) 11 ತಿಂಗಳ ಬಳಿಕ ನ. 7 ರಂದು ಪಿಎಸ್ಎಲ್ವಿ ಮೂಲಕ ಇಒಎಸ್–1 ಮತ್ತು ಒಂಬತ್ತು ವಿದೇಶಿ ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿಕೊಂಡಿದೆ. 2019ರ ಡಿ.11 ರಂದು ಇಸ್ರೋ ನಡೆಸಿದ ಉಪಗ್ರಹ ಉಡಾವಣೆ ಕೊನೆಯ ಉಡಾವಣೆ ಆಗಿತ್ತು. ಮಾರ್ಚ್ನಲ್ಲಿ ಉಪಗ್ರಹ ಉಡಾವಣೆಗೆ ಸಿದ್ಧತೆ ನಡೆಸಿತ್ತು. ಆದರೆ, ಕೋವಿಡ್ನಿಂದ ಉಡಾವಣೆ ಮುಂದೂಡಲಾಯಿತು. ದೇಶ ಸೇರಿದಂತೆ ಹಲವು ವಿದೇಶಿ ಉಪಗ್ರಹಗಳ ಉಡಾವಣೆಯನ್ನು ಮುಂದೂಡಿದ್ದರಿAದ, […]

ಮಹಾ ನಗರಗಳು ಜಲಕಂಟಕದ ಸುಳಿಯಲ್ಲಿ

2050ರ ವೇಳೆಗೆ ಅತಿ ಹೆಚ್ಚು ನೀರಿನ ಕಂಟಕ ಎದುರಿಸುವ ವಿಶ್ವದ ನೂರು ನಗರಗಳ ಪಟ್ಟಿಯಲ್ಲಿ ದೇಶದ 30 ನಗರಗಳು ಇರಲಿದ್ದು, ಬೆಂಗಳೂರು ಮತ್ತು ಹುಬ್ಬಳಿ-ಧಾರವಾಡ ಈ ಪಟ್ಟಿಯಲ್ಲಿ ಸೇರಿವೆ ಎಂದು ವರ್ಲ್ಡ್ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯುಡಬ್ಲ್ಯುಎಫ್) ಹೇಳಿದೆ. ಹವಾಮಾನ ವೈಪರೀತ್ಯವನ್ನು ಕಡಿಮೆ ಮಾಡುವ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳದೇ ಇದ್ದಲ್ಲಿ, ಇಂಥ ಕಠಿಣ ಪರಿಸ್ಥಿತಿ ಎದುರಿಸಬೇಕಾಗಲಿದೆ. ನೀರಿನ ಸಂಕಷ್ಟ ಎದುರಿಸಲಿರುವ ದೇಶದ ನಗರಗಳಲ್ಲಿ ರಾಜಸ್ಥಾನದ ಜೈಪುರ ಮೊದಲ ಹಾಗೂ ಕೇರಳದ ಕಣ್ಣೂರು ಕೊನೆಯ ಸ್ಥಾನದಲ್ಲಿದೆ. ಬೆಂಗಳೂರು ಹತ್ತನೆಯ […]

ಮೆಣಸಿಗನಹಳ್ಳಿ ಹಾಲು ಉತ್ಪಾದಕರ ಸಂಘಕ್ಕೆ ಲಾಭ

ಚನ್ನಪಟ್ಟಣ ತಾಲೂಕು ಮೆಣಸಿಗನಹಳ್ಳಿ ಗ್ರಾಮದ  ಹಾಲು ಉತ್ಪಾದಕರ  ಸಹಕಾರ ಸಂಘದ 2019-20ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಬಾಲೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿ ಬಮೂಲ್ ನಿರ್ದೇಶಕ ಎಚ್. ಸಿ. ಜಯಮುತ್ತು ಮಾತನಾಡಿ, ಉತ್ಪಾದಕರಿಗೆ ಒಕ್ಕೂಟದ ವತಿಯಿಂದ ನೀಡುವ ಸವಲತ್ತುಗಳ ಮಾಹಿತಿ ನೀಡಿದರು. ಗುಣಮಟ್ಟದ ಹಾಲು ಪೂರೈಸಿ ಸಂಘವನ್ನು ಏಳಿಗೆಗೆ  ಕೊಂಡೊಯ್ಯಬೇಕೆಂದು ಮನವಿ ಮಾಡಿದಲ್ಲದೆ,  ೨೦೧೯-೨೦ ನೇ ಸಾಲಿನಲ್ಲಿ ಸಂಘವು ೯,೦೬,೦೪೦ ರೂ.ನಿವ್ವಳ ಲಾಭ ಗಳಿಸಿರುವುದಕ್ಕೆ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ವಿಸ್ತರಣಾಧಿಕಾರಿ ಹೊನ್ನಪ್ಪ […]

ಕೊರೊನಾ ಪ್ರಕರಣ ಇಳಿಕೆ

ಕೋವಿಡ್ ಹೊಸ ಪ್ರಕರಣಗಳಲ್ಲಿ ಇಳಿಕೆಯಾಗಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಸಕ್ರಿಯ ಪ್ರಕರಣಗಳು50,592 ಕ್ಕೆ ಕಡಿಮೆಯಾಗಿವೆ. ಅಕ್ಟೋಬರ್ ಮೂರನೇ ವಾರದಲ್ಲಿ ಸಕ್ರಿಯ ಪ್ರಕರಣಗಳು ಲಕ್ಷದ ಆಚೀಚೆ ಇತ್ತು. ರಾಜ್ಯದಲ್ಲಿ ಭಾನುವಾರ ೩,೬೫೨ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ೮.೨೭ ಲಕ್ಷಕ್ಕೆ ಹೆಚ್ಚಿದೆ. ಇವರಲ್ಲಿ 935 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 3,652 ರ‍್ಟಿ-ಪಿಸಿಆರ್ ಸೇರಿದಂತೆ1.06 ಲಕ್ಷ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಈವರೆಗೆ 80 ಲಕ್ಷ ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. […]

ಈಕ್ವಿಟಿ ಎಂಎಫ್: ಹೂಡಿಕೆ ಹೊರಹರಿವು ಹೆಚ್ಚಳ

ಜುಲೈ-ಸೆಪ್ಟೆಂಬರ್‌ನಲ್ಲಿ ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ 7,200 ರೂ. ಕೋಟಿ ಬಂಡವಾಳ ಹಿಂಪಡೆದಿದ್ದಾರೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆಗಳ ಒಕ್ಕೂಟ ಹೇಳಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 23,874 ಕೋಟಿ ರೂ. ಹಣ ಹೂಡಿಕೆಯಾಗಿತ್ತು. ಬಂಡವಾಳ ಹೊರಹರಿವಿನ ನಡುವೆಯೂ ಎಂಎಫ್‌ಗಳ ನಿರ್ವಹಣಾ ಸಂಪತ್ತು 7.24 ಲಕ್ಷ ಕೋಟಿಯಿಂದ ೭,೬೪ ಲಕ್ಷ ಕೋಟಿ ರೂ. ಹೆಚ್ಚಿದೆ. ಹೂಡಿಕೆದಾರರು ಮ್ಯೂಚುವಲ್ ಫಂಡ್ ಬದಲು ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಕ್ವಾಂಟಮ್ ಎಎಂಸಿ ಸಹಾಯಕ ನಿಧಿ ನಿರ್ವಾಹಕ ನೀಲೇಶ್ ಶೆಟ್ಟಿ […]

ವಾಹನ ಮಾರಾಟ ಹೆಚ್ಚಳ

ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ನವರಾತ್ರಿ ವೇಳೆ ಮಾರುತಿ ಸುಜುಕಿ ಸೇರಿದಂತೆ ಕೆಲವು ಪ್ರಮುಖ ಕಂಪನಿಗಳ ರಿಟೇಲ್ ಮಾರಾಟದಲ್ಲಿ ಏರಿಕೆ ಆಗಿದೆ. ಮಾರುತಿ ಸುಜುಕಿ ಇಂಡಿಯಾದ ರಿಟೇಲ್ ಮಾರಾಟ ಶೇ.27ರಷ್ಟು ಹೆಚ್ಚಿದ್ದು, 96,700 ವಾಹನಗಳು ಮಾರಾಟವಾಗಿವೆ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.  ಕಳೆದ ವರ್ಷ ಇದೇ ಅವಧಿಯಲ್ಲಿ 76 ಸಾವಿರ ವಾಹನಗಳು ಮಾರಾಟವಾಗಿದ್ದವು. ಹುಂಡೈ ಮೋಟರ್ ಶೇ.೨೮ ರಷ್ಟು ಹೆಚ್ಚಾಗಿದೆ. ಟಾಟಾ ಮೋಟರ್ಸ್ನ ಮಾರಾಟ ಶೇ.೯೦ರಷ್ಟು ಹೆಚ್ಚಾಗಿದೆ. ಹೊಸ […]

GST receipts, UPI data show economic revival is on track

Goods and services tax (GST) collections in October crossed the ₹1 trillion mark for the first time this fiscal, signalling economic revival. The surge in tax collections comes as consumers bought items such as smartphones, automobiles and consumer durables during the festive season. GST receipts of the central and state governments touched ₹1.05 trillion in […]

Back To Top