Category: ಉದ್ಯಮ-ವ್ಯವಹಾರ-ಬ್ಯಾಂಕಿಂಗ್

ಇಂಡಿಗೋ ಪ್ರಕರಣ: ಏಕಸ್ವಾಮ್ಯ, ದ್ವಿಸ್ವಾಮ್ಯದ ವಿಪತ್ತಿನ ನಿದರ್ಶನ

ಇಂಡಿಗೋ ವಿಮಾನಗಳ ರದ್ದುಗೊಳಿಸುವಿಕೆಯಿಂದ ದೇಶದೆಲ್ಲೆಡೆ ಪ್ರಯಾಣಿಕರು ನರಳಿದರು ಮತ್ತು ನರಳುತ್ತಿದ್ದಾರೆ. ಟಿಕೆಟ್‌ ಮೊತ್ತ ಮರುಪಾವತಿಸುವುದಾಗಿ ಮತ್ತು 10ರಿಂದ 15 ದಿನಗಳಲ್ಲಿ ಸಂಚಾರ ಸಹಜ ಸ್ಥಿತಿಗೆ ಮರಳಲಿದೆ ಎಂದು ಇಂಡಿಗೋ ಹೇಳಿಕೊಂಡಿದೆ. ದೇಶದಲ್ಲಿ ವಿಮಾನದಲ್ಲಿ ಸಂಚರಿಸುವವರ ಪ್ರಮಾಣ ಶೇ.3-4. ಆದ್ದರಿಂದ, ಇದು ಜನಸಾಮಾನ್ಯರ ಸಮಸ್ಯೆಯಲ್ಲ; ನಾವು ತಲೆ ಕೆಡಿಸಿ ಕೊಳ್ಳಬೇಕಿಲ್ಲ ಎಂದುಕೊಳ್ಳಬಾರದು. ಏಕೆಂದರೆ, ಈ ಪ್ರಕರಣ ಯಾವುದೇ ಕ್ಷೇತ್ರದಲ್ಲಿ ಏಕಸ್ವಾಮ್ಯ-ದ್ವಿಸ್ವಾಮ್ಯದಿಂದ ಆಗಬಹುದಾದ ವಿಪತ್ತಿಗೆ ಹಿಡಿದ ಕನ್ನಡಿ. 2007ರಲ್ಲಿ ಹೈಕೋರ್ಟ್‌ ಆದೇಶದ ಮೇರೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡೈರೆಕ್ಟೊರೇಟ್‌ ಜನರಲ್‌ ಆಫ್‌ […]

ಭೌಗೋಳಿಕ ಮಾನ್ಯತೆ ಮತ್ತು ಕಲಾಪ್ರಕಾರಗಳ ದುರ್ಬಳಕೆ ಸಮಸ್ಯೆ

ಇಟಲಿ ಮೂಲದ ಫ್ಯಾಷನ್‌ ಬ್ರಾಂಡ್‌ ಪ್ರಾಡಾ, ಕೊಲ್ಲಾಪುರ ಚಪ್ಪಲಿ ಮತ್ತು ಅಸ್ಸಾಂನ ಬೋಡೋಲ್ಯಾಂಡ್‌ ಟೆರಿಟೋರಿಯಲ್‌ ರೀಜನ್(ಬಿಟಿಆರ್)‌ ಮಂಡಳಿಯ ಚುನಾವಣೆ; ಈ ಮೂರನ್ನು ಒಂದೆಳೆಯಲ್ಲಿ ಪೋಣಿಸಿದ ಸಂಗತಿಯೊಂದು ಇದೆ- ಭೌಗೋಳಿಕ ಮಾನ್ಯತೆ(ಜಿಯಾಗ್ರಫಿಕಲ್‌ ಇಂಡಿಕೇಷನ್, ಜಿಐ). ಮಿಲಾನ್‌ ಫ್ಯಾಷನ್‌ ಮೇಳದಲ್ಲಿ ಕೊಲ್ಲಾಪುರಿ ಚಪ್ಪಲಿಯನ್ನು ಹೋಲುವ ವಿನ್ಯಾಸವೊಂದನ್ನು ಪ್ರಾಡಾ ಪ್ರದರ್ಶಿಸಿತ್ತು. ದೇಶಿ ಉತ್ಪನ್ನವನ್ನು ನಕಲು ಮಾಡಲಾಗಿದೆ. ಇದು ʻದೇಶದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕರಕುಶಲ ವಸ್ತುಗಳ ದುರ್ಬಳಕೆʼ ಎಂದು ವ್ಯಾಪಕ ಟೀಕೆಗೆ ಒಳಗಾಯಿತು. ʻಜಿಐ ಉಲ್ಲಂಘನೆ ಆಗಿದೆʼ ಎಂದು ಲಿಡ್ಕರ್‌(ಡಾ.ಬಾಬು ಜಗಜೀವನ್‌ರಾಂ […]

ಕಿರು ಸಾಲವೆಂಬ ಉರುಳು

ಕರ್ನಾಟಕ ಸರ್ಕಾರ ಕಿರುಸಾಲ ಸಂಸ್ಥೆ(ಮೈಕ್ರೋ ಕ್ರೆಡಿಟ್‌ ಸಂಸ್ಥೆಗಳು,ಎಂಎಫ್‌ಐ) ಗಳಿಂದ ಸಾಲ ಪಡೆದಿರುವವರ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಈ ಕಂಪನಿಗಳು ಸಕ್ಷಮ ಪ್ರಾಧಿಕಾರವಾದ ಜಿಲ್ಲಾಧಿಕಾರಿ ಬಳಿ ನೋಂದಣಿ ಮಾಡಿಸ ಬೇಕು, ಬಲವಂತವಾಗಿ ಸಾಲ ವಸೂಲಿ ಕೂಡದು ಹಾಗೂ ನೋಂದಣಿರಹಿತ ಎಂಎಫ್‌ಐಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುವಂತಿಲ್ಲ ಎಂಬೆಲ್ಲ ಅಂಶ ಗಳನ್ನು ಕರಡು ಒಳಗೊಂಡಿದೆ. ಇದರಿಂದ ಈ ಕಂಪನಿಗಳಿಂದ ಕಿರುಕುಳ ಕಡಿಮೆಯಾಗುವುದೇ ಹಾಗೂ ಸಾಲಗಾರರ ಆತ್ಮಹತ್ಯೆಗಳು ನಿಲ್ಲುತ್ತವೆಯೇ? ಬಾಂಗ್ಲಾದ ಡಾ.ಮೊಹಮ್ಮದ್‌ಯೂನುಸ್‌ ಅವರಿಂದ ಪ್ರೇರಿತವಾಗಿ 1990ರಲ್ಲಿ ದೇಶದಲ್ಲಿ ಎಂಎಫ್‌ಐಗಳು ಆರಂಭಗೊಂಡವು. ಎಂಎಫ್‌ಐಗಳಲ್ಲಿ […]

ಪಾತಾಳಕ್ಕಿಳಿದ ರೂಪಾಯಿ ಮತ್ತು ಮೂರು ಭಾರತಗಳು

ಸಂಕ್ರಾತಿ ಹಿಂದಿನ ದಿನ ರೂಪಾಯಿ 66 ಪೈಸೆ ಕುಸಿತ ಕಂಡು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ; ಡಾಲರ್‌ಗೆ 86.79 ರೂ. ಆಗಿದೆ. ಕಳೆದ 2 ವರ್ಷದಲ್ಲಿ ಕಂಡ ತೀವ್ರ ಕುಸಿತ ಇದಾಗಿದ್ದು, 2024ರಲ್ಲಿ ರೂಪಾಯಿ ಬೆಲೆ ಶೇ.3ರಷ್ಟು ಕುಸಿಯಿತು; ಡಾಲರ್‌ ಎದುರು ನಿರಂತರವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ. ಇದು ಆರಂಭಗೊಂಡಿದ್ದು-ಅಮೆರಿಕದ ಫೆಡರಲ್‌ ಬ್ಯಾಂಕ್ ಸೆಪ್ಟೆಂಬರ್‌ 18, 2024ರಂದು ಬಡ್ಡಿಯನ್ನು 50 ಬೇಸ್‌ ಪಾಯಿಂಟ್(ಬಿಪಿ ಎಸ್)ಗಳಿಂದ ಕಡಿತಗೊಳಿಸಿದ ಬಳಿಕ. ಆನಂತರ ನವೆಂಬರ್‌ 17 ಹಾಗೂ ಡಿಸೆಂಬರ್‌ 18ರಂದು ಮತ್ತೊಮ್ಮೆ 25 […]

ಒಕ್ಕೂಟ ತತ್ವ, ಹಣಕಾಸು ಆಯೋಗ ಹಾಗೂ ಜಿಎಸ್‌ಟಿ ಪಾಲಿಗೆ ಹಕ್ಕೊತ್ತಾಯ

ಸೆಪ್ಟೆಂಬರ್‌ 12ರಂದು ಕೇರಳ ಸರ್ಕಾರವು ಬಿಜೆಪಿಯೇತರ ಸರ್ಕಾರಗಳ ವಿತ್ತ ಸಚಿವರ ಶೃಂಗಸಭೆಯೊಂದನ್ನು ಆಯೋಜಿಸಿತ್ತು. ಕೇಂದ್ರ-ರಾಜ್ಯ ಹಣಕಾಸು ಸಂಬಂಧಗಳು ಮತ್ತು 16ನೇ ಹಣಕಾಸು ಆಯೋಗದ ಶಿಫಾರಸು ಕುರಿತು ಚರ್ಚಿಸುವುದು ಉದ್ದೇಶ. ಆನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ʻಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಕುರಿತು ಸಿಎಂ ಮಟ್ಟದಲ್ಲಿ ಚರ್ಚಿಸಿ, ಒಟ್ಟಾರೆ ಪ್ರಸ್ತಾವವೊಂದನ್ನು 16ನೇ ಹಣಕಾಸು ಆಯೋಗಕ್ಕೆ ನೀಡುವʼ ಮಾತನಾಡಿದ್ದರು. ಈ ಎರಡೂ ಬಹಳ […]

ಅತಿ ಶ್ರೀಮಂತರಿಗೆ ಅಧಿಕ ತೆರಿಗೆ ವಿಧಿಸಲು ಇದು ಸರಿಯಾದ ಕಾಲ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಮಂಡಿಸಿದ ಕೇಂದ್ರ ಬಜೆಟ್‌, ಜಿ-20ರ ಬ್ರೆಜಿಲ್‌ಅಧ್ಯಕ್ಷತೆಯಡಿ ಮುಂಚೂಣಿಗೆ ಬಂದಿರುವ ಐಶ್ವರ್ಯ ತೆರಿಗೆ ಹಾಗೂ ಅನಂತ್‌ಅಂಬಾನಿ ವಿವಾಹ-ಇವೆಲ್ಲವೂ ಪರಸ್ಪರ ಜೋಡಿಸಲ್ಪಟ್ಟ ಘಟನೆಗಳು. ಕಳೆದ ಸಾಲಿನ ಜಿ-20 ಸಮಾವೇಶದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿತ್ತು ಹಾಗೂ ಅದನ್ನು ಮೋದಿ ಅವರ ಅಭೂತಪೂರ್ವ ಸಾಧನೆ ಎಂಬಂತೆ ಬಿಂಬಿಸಲಾಯಿತು. ಈ ಸಂಬಂಧ ಸಮಾವೇಶದ ವೇಳೆ ಬಿಡುಗಡೆಯಾದ ದ ರಿಸರ್ಚ್‌ಅಂಡ್‌ಇನ್ಫರ್ಮೇಷನ್‌ಸಿಸ್ಟಮ್‌ಫಾರ್‌ಡೆವಲಪಿಂಗ್‌ಕಂಟ್ರೀಸ್‌ಪ್ರಕಟಿಸಿದ 171 ಪುಟಗಳ ಇ-ದಾಖಲೆ ʼದ ಗ್ರಾಂಡ್‌ಸಕ್ಸೆಸ್‌ಆಫ್‌ಜಿ-20 ಭಾರತ್‌ಪ್ರೆಸಿಡೆನ್ಸಿ: ವಿಷನರಿ ಲೀಡರ್‌ಶಿಪ್‌, ಇನ್‌ಕ್ಲೂಸಿವ್‌ಅಪ್ರೋಚ್‌ʼ ನಲ್ಲಿ ಸರ್ಕಾರಿ ಅಧಿಕಾರಿಗಳು/ಕೃಪಾಪೋಷಿತ ಲೇಖಕರು ಬರೆದ ಲೇಖನಗಳಿದ್ದು, […]

ಮಲೆನಾಡಿನ ಕಾಫಿ ಬೆಳೆಗಾರ ಸೋತದ್ದೆಲ್ಲಿ ಮತ್ತು ಬೆಲೆಗಳ ಮೇಲೆ ಸರ್ಕಾರಿ ನಿಯಂತ್ರಣ ಯಾಕೆ ಬೇಕು?

ಒಂದು ಕಾಲಕ್ಕೆ ಅತ್ಯಂತ ಪ್ರತಿಷ್ಟಿತ ಹಾಗೂ ಸಧೃಡ ಕೃಷಿಯೆಂದು ಹೆಮ್ಮೆ ಪಡುತ್ತಿದ್ದ  ಕಾಫಿ ಬೆಳೆಗಾರರೆಂದರೆ ಐಷಾರಾಮೀ ದೊರೆಗಳೆಂದು ಬೇರೆಯವರು ಹೇಳುತ್ತಿದ್ದ  ಮಲೆನಾಡಿನ ಕಾಫಿ ಬೆಳೆ ಸೋತದ್ದೆಲ್ಲಿ. ಸುಮಾರಾಗಿ ಎಂಬತ್ತರ ದಶಕದವರೆಗೂ ಕಾಫಿಯ ಸ್ಥಿತಿ ಹಾಗೇ ಇತ್ತು. ಆಂತರಿಕ ಬಳಕೆ ಬಹಳ ಕಡಿಮೆ ಇದ್ದು ಅದು ವರ್ಷಕ್ಕೆ ಐವತ್ತು ಸಾವಿರ ಟನ್ ಮೀರುತ್ತಿರಲಿಲ್ಲ. ಅದರಲ್ಲೂ ತಮಿಳುನಾಡೇ ಮುಖ್ಯ ಗ್ರಾಹಕ ರಾಜ್ಯವಾಗಿತ್ತು. ಉಳಿದ ಎಲ್ಲಾ ಕಾಫಿ ರಫ್ತಾಗುತ್ತಿತ್ತು. ಅಂದಿನ ಕಾಲಕ್ಕೆ ದೊಡ್ಡ ಮೊತ್ತವೆನ್ನಬಹುದಾದ ನಾಲ್ಕು ನೂರು ಕೋಟಿ ರುಪಾಯಿಯಷ್ಟು ವಿದೇಶೀ […]

ಎಫ್‌ಎಂಸಿಜಿ ಉತ್ಪನ್ನ ತುಟ್ಟಿ ಸಾಧ್ಯತೆ

ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಬಳಕೆ ವಸ್ತು(ಎಫ್‌ಎಂಸಿಜಿ)ಗಳ ಉತ್ಪಾದಕ ಕಂಪನಿಗಳು ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಇದಕ್ಕೆ ಕಾರಣ. ಕೊಬ್ಬರಿ, ತಾಳೆ ಎಣ್ಣೆ ಮತ್ತಿತರ ಖಾದ್ಯ ತೈಲಗಳ ಬೆಲೆ ಹೆಚ್ಚಳದ ಹೊರೆಯನ್ನು ಎಫ್‌ಎಂಸಿಜಿ ಕಂಪನಿಗಳು ತಾವೇ ಹೊತ್ತುಕೊಂಡಿದ್ದವು. ಆದರೆ, ಇದರಿಂದ ಲಾಭ ಕಡಿಮೆಯಾಗುತ್ತಿರುವುದರಿಂದ, ಹಾಲಿ ಬೆಲೆಗೆ ಮಾರಾಟ ಕಷ್ಟವಾಗುತ್ತಿದೆ. ಸಫೋಲಾ ಮತ್ತು ಪ್ಯಾರಾಚೂಟ್ ಬ್ರ್ಯಾಂಡ್  ಉತ್ಪಾದಕ ಕಂಪನಿ ಮಾರಿಕೋ ಈಗಾಗಲೇ ಬೆಲೆ ಹೆಚ್ಚಳ ಮಾಡಿದ್ದು, ಡಾಬರ್, ಪಾರ್ಲೆ, ಪತಂಜಲಿ ಮತ್ತಿತರ ಕಂಪನಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ. […]

ಎಫ್‌ಪಿಐ ಹೂಡಿಕೆ ಏರಿಕೆ

ವಿದೇಶಿ ಬಂಡವಾಳ ಹೂಡಿಕೆದಾರರು ದೇಶಿ ಮಾರುಕಟ್ಟೆಯಲ್ಲಿ ಜ.1-8ರ ಅವಧಿಯಲ್ಲಿ 5,156 ಕೋಟಿರೂ.ಹೂಡಿಕೆಮಾಡಿದ್ದು, ಇದರಲ್ಲಿ ಷೇರುಗಳಖರೀದಿಗೆ೪,೮೧೯ಕೋಟಿರೂ.ಹಾಗೂಸಾಲಪತ್ರಗಳಖರೀದಿಗೆ೩೩೭ಕೋಟಿರೂ. ತೊಡಗಿಸಿದ್ದಾರೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಇದೆ. ದೇಶಕ್ಕೆ ಬಂಡವಾಳ ಒಳಹರಿವುಹೆಚ್ಚಾಗಲುಇದುಪ್ರಮುಖಕಾರಣಎಂದುಗ್ರೋವ್ ಸಹ ಸ್ಥಾಪಕ ಹರ್ಷ್ ಜೈನ್ ತಿಳಿಸಿದ್ದಾರೆ. ಭಾರತ, ಚೀನಾ, ರಷ್ಯಾ ಮತ್ತುದಕ್ಷಿಣಕೊರಿಯಾ ದೇಶಗಳು ಎಫ್‌ಪಿಐಗೆ ಪ್ರಮುಖ ತಾಣಗಳು ಎಂದುಜಿಯೋಜಿತ್ ಹಣಕಾಸು ಸೇವೆಗಳ ಮುಖ್ಯ ಹೂಡಿಕೆತಜ್ಞ ವಿ.ಕೆ. ವಿಜಯ್‌ಕುಮಾರ್ ತಿಳಿಸಿದ್ದಾರೆ.   Courtesyg: Google (photo)

Back To Top