ಭೂಮಿ ಮೇಲಿನ ಯಾವುದೇ ಪ್ರಚಾರದಿಂದ ಪ್ಯಾಲೆಸ್ತೀನ್ನ ಗಾಯವನ್ನು ಮರೆಮಾಡಲು ಸಾಧ್ಯವಿಲ್ಲ: ಅರುಂಧತಿ ರಾಯ್
ಲೇಖಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಅರುಂಧತಿ ರಾಯ್ ಅವರಿಗೆ 2024 ರ PEN ಪಿಂಟರ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ನೆನಪಿನಲ್ಲಿ ನೀಡುವ ವಾರ್ಷಿಕ ಪ್ರಶಸ್ತಿ ಇದಾಗಿದ್ದು, ಬಹುಮಾನದ ಮೊತ್ತವನ್ನು ಪ್ಯಾಲೇಸ್ಟಿನಿನ ಮಕ್ಕಳ ಪರಿಹಾರ ನಿಧಿಗೆ ನೀಡುವುದಾಗಿ ರಾಯ್ ಹೇಳಿದ್ದಾರೆ. ಬ್ರಿಟಿಷ್-ಈಜಿಪ್ಟಿಯನ್ ಬರಹಗಾರ ಮತ್ತು ಕಾರ್ಯಕರ್ತ ಅಲಾ ಅಬ್ದ್ ಎಲ್-ಫತಾ ಅವರೊಂದಿಗೆ ಪ್ರಶಸ್ತಿಯನ್ನು ಹಂಚಿಕೊಳ್ಳು ವುದಾಗಿ ಹೇಳಿದ ರಾಯ್, ಅಕ್ಟೋಬರ್ 10, 2024 ರ ಸಂಜೆ ಬ್ರಿಟಿಷ್ ಲೈಬ್ರರಿಯಲ್ಲಿ ಮಾಡಿದ ಸ್ವೀಕಾರ ಭಾಷಣದ […]
ಇಲ್ಲಿ ಸಾವಿರಾರು ಅನ್ನಾ ಪೆರಾಯಿಲ್ ಹಾಗೂ ತರುಣ್ ಸಕ್ಸೇನಾಗಳು
ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಮತ್ತು ತರುಣ್ ಸಕ್ಸೇನಾ ಅವರ ಸಾವು ಅನ್ಯಾಯ ಮಾತ್ರವಲ್ಲ; ಇಂಥ ಸಾವಿಗೆ ಕಾರಣರಾದವರಿಗೆ ಕ್ಷಮೆ ಇರಬಾರದು. ಆದರೆ, ದೇಶದಲ್ಲಿ ವರ್ಷಕ್ಕೆ 2 ಲಕ್ಷ ಇಂಥ ಸಾವು ಸಂಭವಿಸುತ್ತದೆ. ಇವರ ಸಾವಿಗೆ ಕಾರಣರಾದವರಿಗೆ ಏನು ಶಿಕ್ಷೆ ಆಗಿದೆ? ಅನ್ನಾ ಸಾವಿನ ಬಳಿಕ ಜಗತ್ತಿನೆಲ್ಲೆಡೆಯ ದಪ್ಪ ಗಾಜು, ಮೃದು ಸೋಫಾ-ಕುರ್ಚಿಗಳ ಕಚೇರಿಗಳು ಸ್ವಲ್ಪ ಕಂಪಿಸಿದವು. ಅಷ್ಟೆ. ಆನಂತರ ʻವ್ಯವಹಾರ ಎಂದಿನಂತೆʼ ಸ್ಥಿತಿ ಮುಂದುವರಿಯಿತು. ಅನ್ನಾ(26), 120ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಜಾಗತಿಕ ಕಂಪನಿ ಅರ್ನ್ಸ್ಟ್ […]
ಕುಲಾಂತರಿ ಬೆಳೆ: ಆಡಿಸುವಾತನ ಮಾತೇ ಅಂತಿಮವೇ?
ಸುಪ್ರೀಂ ಕೋರ್ಟ್ ಇತ್ತೀಚೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ(ಎಂಒಇಎಫ್ಸಿ) ಮಂತ್ರಾಲಯಕ್ಕೆ ಎಲ್ಲ ಭಾಗಿದಾರರನ್ನು ಒಳಗೊಂಡು ಕುಲಾಂತರಿ(ಜಿಎಂ, ಜೈವಿಕವಾಗಿ ಬದಲಿಸಿದ ಬೆಳೆಗಳು) ಕುರಿತು ರಾಷ್ಟ್ರೀಯ ಕಾರ್ಯನೀತಿಯೊಂದನ್ನು ರೂಪಿಸಬೇಕೆಂದು ಹೇಳಿದೆ. ಈ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರವನ್ನು ಒಳಗೊಳ್ಳಬೇಕು; ಕೃಷಿ ಸೇರಿದಂತೆ ಕೆಲವು ವಿಷಯಗಳು ರಾಜ್ಯ ಪಟ್ಟಿಗೆ ಸೇರುವುದರಿಂದ, ಸಂವಿಧಾನದ ಚೌಕಟ್ಟಿನಲ್ಲಿ ಇದು ಅಗತ್ಯ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹಾಗೂ ಸಂಜಯ್ ಕರೋಲ್ ಅವರ ಪೀಠ ಹೇಳಿದೆ. ಕುಲಾಂತರಿಗಳಿಗೆ ಸಂಬಂಧಿಸಿದಂತೆ ರೈತರು, ಬಳಕೆದಾರರು, ವಿಜ್ಞಾನಿಗಳು ಮತ್ತು ಉತ್ಪಾದಕ ಕಂಪನಿಗಳೊಂದಿಗೆ […]
ಒಕ್ಕೂಟ ತತ್ವ, ಹಣಕಾಸು ಆಯೋಗ ಹಾಗೂ ಜಿಎಸ್ಟಿ ಪಾಲಿಗೆ ಹಕ್ಕೊತ್ತಾಯ
ಸೆಪ್ಟೆಂಬರ್ 12ರಂದು ಕೇರಳ ಸರ್ಕಾರವು ಬಿಜೆಪಿಯೇತರ ಸರ್ಕಾರಗಳ ವಿತ್ತ ಸಚಿವರ ಶೃಂಗಸಭೆಯೊಂದನ್ನು ಆಯೋಜಿಸಿತ್ತು. ಕೇಂದ್ರ-ರಾಜ್ಯ ಹಣಕಾಸು ಸಂಬಂಧಗಳು ಮತ್ತು 16ನೇ ಹಣಕಾಸು ಆಯೋಗದ ಶಿಫಾರಸು ಕುರಿತು ಚರ್ಚಿಸುವುದು ಉದ್ದೇಶ. ಆನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ʻಕೇಂದ್ರದಿಂದ ರಾಜ್ಯಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಕುರಿತು ಸಿಎಂ ಮಟ್ಟದಲ್ಲಿ ಚರ್ಚಿಸಿ, ಒಟ್ಟಾರೆ ಪ್ರಸ್ತಾವವೊಂದನ್ನು 16ನೇ ಹಣಕಾಸು ಆಯೋಗಕ್ಕೆ ನೀಡುವʼ ಮಾತನಾಡಿದ್ದರು. ಈ ಎರಡೂ ಬಹಳ […]
ʻಲಡಾಖಿನಲ್ಲಿ ಎಲ್ಲವೂ ಚೆನ್ನಾಗಿಲ್ಲʼ
ಸೂಪರ್ ಹಿಟ್ ಸಿನೆಮಾ ʼತ್ರಿ ಈಡಿಯಟ್ಸ್ʼ ಸಿನೆಮಾದಲ್ಲಿ ಆಮಿರ್ ಖಾನ್ ಅವರ ಪಾತ್ರದ ನಿಜರೂಪ- ಲಡಾಖಿನ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣತಜ್ಞ ಸೋನಂ ವಾಂಗ್ಚುಕ್. ಜನವರಿ 26, 2023 ರಿಂದ ಲಡಾಖಿನ ತೆರೆದ ಬಯಲಿನಲ್ಲಿ ಶೂನ್ಯಕ್ಕಿಂತ ಕಡಿಮೆ ಉಷ್ಣಾಂಶದಲ್ಲಿ 5 ದಿನ ನಿರಶನ ಮಾಡಿದ್ದ ವಾಂಗ್ಚುಕ್, ಈಗ ʻದೆಹಲಿ ಚಲೋʼ ಆರಂಭಿಸಿದ್ದಾರೆ. ಅವರ ತಂಡದ ಪಾದಯಾತ್ರೆಯು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದೆಹಲಿಯ ರಾಜ್ಘಾಟಿನಲ್ಲಿ ಕೊನೆಗೊಳ್ಳಲಿದೆ. ಅವರ ಬೇಡಿಕೆ ಇದು-ಲಡಾಖಿಗೆ ರಾಜ್ಯದ ಸ್ಥಾನಮಾನ, ಹೆಚ್ಚುವರಿ ಲೋಕಸಭೆ ಸ್ಥಾನ, […]
ಪೇಟೆಂಟ್: ದಕ್ಷಿಣ ಆಫ್ರಿಕ ತೋರಿಸಿದ ಮಾರ್ಗ
ಭಾರತದಲ್ಲಿ ಅಮೆರಿಕದ ಅತಿ ದೊಡ್ಡ ಔಷಧ ಕಂಪನಿ ಜಾನ್ಸನ್ ಆಂಡ್ ಜಾನ್ಸನ್(ಜೆ ಆಂಡ್ ಜೆ) ಮತ್ತು ಅದರ ಅಂಗಸಂಸ್ಥೆ ಜಾನ್ಸನ್ ಫಾರ್ಮಾಸ್ಯೂಟಿಕಾದ ಉತ್ಪನ್ನವಾದ ಔಷಧ ಪ್ರತಿರೋಧವಿರುವ ಕ್ಷಯಕ್ಕೆ ಬಳಸುವ ಮುಖ್ಯ ಔಷಧ ಬೆಡಾಕ್ವಿಲಿನ್ನ ಎವರ್ಗ್ರೀನಿಂಗ್(ಅಂದರೆ, ಔಷಧದ ಸ್ವಲ್ಪ ಮಟ್ಟಿನ, ನಾವೀನ್ಯತೆ ಅಗತ್ಯವಿಲ್ಲದ ಬದಲಾವಣೆ ಮೂಲಕ ಪೇಟೆಂಟ್ ಅವಧಿ ವಿಸ್ತರಿಸುವಿಕೆ) ವಿರುದ್ಧದ ಚರಿತ್ರಾರ್ಹ ಗೆಲುವನ್ನು ಸಂಭ್ರಮಿಸ ಲಾಯಿತು. ರೋಗಿಗಳ ಕಾರ್ಯಜಾಲಗಳು ದಾಖಲಿಸಿದ ದೂರು ಆಧರಿಸಿ, ಬೆಡಾಕ್ವಿಲಿನ್ನ ಮಕ್ಕಳಿಗೆ ನೀಡುವ ಸೂತ್ರಕ್ಕೆ ಪೇಟೆಂಟ್ ನಿರಾಕರಿಸಲಾಯಿತು. ಒಂದುವೇಳೆ ಪೇಟೆಂಟ್ ಲಭ್ಯವಾಗಿದ್ದಲ್ಲಿ, ಕಂಪನಿಗೆ […]
ಲ್ಯಾಟರಲ್ ಎಂಟ್ರಿಯೂ, ಐಎಎಸ್ ವ್ಯವಸ್ಥೆಯೂ………..
ಕ್ರೋನಾಲಜಿ ಇಂತಿದೆ: ಆಗಸ್ಟ್ 17ರಂದು ಕೇಂದ್ರ ನಾಗರಿಕ ಸೇವೆಗಳ ಆಯೋಗ(ಯುಪಿಎಸ್ಸಿ) ವಿವಿಧ ಮಂತ್ರಾಲಯಗಳ 45 ಜಂಟಿ ಕಾರ್ಯದರ್ಶಿ, ನಿರ್ದೇಶಕ ಹಾಗೂ ಉಪ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಜಾಹೀರಾತು ಪ್ರಕಟಿಸಿತು. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ʻಇದು ರಾಷ್ಟ್ರವಿರೋಧಿ ಹೆಜ್ಜೆಯಾಗಿದ್ದು, ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿ-ವರ್ಗ ಹಾಗೂ ಒಬಿಸಿಗಳ ಮೀಸಲು ಕಿತ್ತುಕೊಳ್ಳುವ ಪ್ರಯತ್ನʼ ಎಂದು ಟೀಕಿಸಿದರು. ಎನ್ಡಿಎ 3.0ಯ ಮೈತ್ರಿ ಪಕ್ಷಗಳಾದ ಲೋಕ ಜನಶಕ್ತಿ ಪಾರ್ಟಿಯ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಮತ್ತು ಜೆಡಿಯು ಕೂಡ ಪ್ರಸ್ತಾವವನ್ನು […]
ಹಳಿ ತಪ್ಪುತ್ತಿರುವ ರೈಲುಗಳಿಗೆ ದಾರಿ ಯಾವುದು?
ಇತ್ತೀಚೆಗೆ ಕಾನ್ಪುರದ ಬಳಿ ಸಬರಮತಿ ಎಕ್ಸ್ಪ್ರೆಸ್ನ 20 ಬೋಗಿಗಳು ಹಳಿ ತಪ್ಪಿದವು. ಅದಕ್ಕಿಂತ ಮೊದಲು ಜುಲೈ 18ರಂದು ಉತ್ತರಪ್ರದೇಶದ ಗೊಂಡಾದಲ್ಲಿ ಚಂಡೀಗಢ-ದಿಬ್ರೂಗಢ ಎಕ್ಸ್ಪ್ರೆಸ್(ಇಬ್ಬರು ಸಾವು, ಹಲವರಿಗೆ ಗಾಯ), ಜುಲೈ 29ರಂದು ಜಾರ್ಖಂಡದಲ್ಲಿ ಹೌರಾ-ಮುಂಬೈ ಎಕ್ಸ್ಪ್ರೆಸ್(ಇಬ್ಬರು ಸಾವು, 20 ಮಂದಿಗೆ ಗಾಯ) ಹಾಗೂ ಜುಲೈ 31ರಂದು ಪಶ್ಚಿಮ ಬಂಗಾಳದ ರಂಗಪಾನಿ ರೈಲ್ವೆ ನಿಲ್ದಾಣದ ಬಳಿ ಸರಕು ಸಾಗಣೆ ರೈಲಿನ ಎರಡು ವ್ಯಾಗನ್ಗಳು ಹಳಿ ತಪ್ಪಿ ಉರುಳಿದವು. 2024ರ ಮೊದಲ 7 ತಿಂಗಳಿನಲ್ಲಿ ರೈಲು ಹಳಿ ತಪ್ಪಿದ 19 ಪ್ರಕರಣಗಳು(ಜನವರಿಯಲ್ಲಿ […]
ನೀಟ್ ಎನ್ನುವುದು ಒಂದು ರಾಜಕೀಯ ಕಾರ್ಯಕ್ರಮ
2017ರಲ್ಲಿ ತಮಿಳುನಾಡು ಪಿಯು ಪರೀಕ್ಷೆಯಲ್ಲಿ 1,176(1,200) ಅಂಕ ಗಳಿಸಿದ ಎಸ್.ಅನಿತಾ ವೈದ್ಯೆಯಾಗುವ ಕನಸು ಕಂಡವರು. ಆದರೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಪಾಸ್ ಆಗಲಿಲ್ಲ. ಸಾಕಷ್ಟು ಹೋರಾಟದ ಬಳಿಕ ಆತ್ಮಹತ್ಯೆ ಮಾಡಿಕೊಂಡರು. ನೀಟ್ 720 ಅಂಕಗಳ 3 ಗಂಟೆ ಅವಧಿಯ ಪರೀಕ್ಷೆ. ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ. ಮೇ 5 ರಂದು ನಡೆದ ನೀಟ್ ಪರೀಕ್ಷೆಯಲ್ಲಿ 24,06,079 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಫಲಿತಾಂಶ ಬಂದಾಗ 67 ಮಂದಿ 720/720 ಅಂಕ ಗಳಿಸಿದರು. […]