Category: ಋತ

ಋತ, ರಾಜಕೀಯ-ಸಾಂಸ್ಕøತಿಕ ನಿಯತಕಾಲಿಕವಾಗಿದ್ದು, ಸಮಕಾಲೀನ ಕನ್ನಡ ಪ್ರಮುಖ ಪ್ರಕಟಣೆಗಳಲ್ಲೊಂದು. ಇಂಗ್ಲಿಷ್ ಕೇಂದ್ರಿತವಾದ ಜ್ಞಾನಧಾರೆಯನ್ನು ಸವಿ ಕನ್ನಡದಲ್ಲಿ ಪ್ರಕಟಿಸುವುದು ನಮ್ಮ ಗುರಿ. ಕನ್ನಡಕ್ಕೆ ಜಗತ್ತಿನ ಎಲ್ಲ ಜ್ಞಾನಧಾರೆಗಳು ಬರಬೇಕು ಎನ್ನುವ ಆಶಯವನ್ನು ಆಗುಮಾಡುವ ಪ್ರಯತ್ನ. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಪರಿಸರ-ಜೀವಿಶಾಸ್ತ್ರ, ಆಟೋಟ, ಕಲೆ-ಸಂಸ್ಕøತಿ, ಶಿಕ್ಷಣ ಸೇರಿದಂತೆ ದೈನಂದಿನ ಬದುಕನ್ನು ಪ್ರಭಾವಿಸುವ-ಭಾಗವಾಗಿರುವ ಎಲ್ಲ ಜ್ಞಾನಶಾಖೆಗಳ ವಿಮರ್ಶೆ, ವಿಶ್ಲೇಷಣೆ, ವಿಚಾರ, ಸಂವಾದ ನಮ್ಮ ಉದ್ದೇಶ. ಪ್ರತಿ ಸಂಚಿಕೆ ಒಬ್ಬ ಚಿಂತಕ, ಒಂದು ಸಮಸ್ಯೆ ಇಲ್ಲವೇ ಒಂದು ತತ್ತ್ವ-ಸಿದ್ಧಾಂತದ ಬಗ್ಗೆ ಇರುತ್ತದೆ. ಆ ಕುರಿತ ಎಲ್ಲ ದೃಷ್ಟಿಕೋನಗಳನ್ನು ಪರಿಚಯಿಸುವುದು, ಸಂವಾದ ಹಾಗೂ ಚರ್ಚೆಗೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ.

ಜಾಗತಿಕ ಪರಿಸರ ಚರಿತ್ರೆ-ರಾಮಚಂದ್ರ ಗುಹಾ. ಅನುವಾದ:ಮಾಧವ ಐತಾಳ್

01. ಹಸಿರಿನೆಡೆಗೆ(10) ಪರಿಸರ ಆಂದೋಲನ ೧೯೬೦ರ ಕೂಸು. ಇದು ಇನ್ನೂ ಕಾವು, ಚಲನೆ ಕಳೆದುಕೊಂಡಿಲ್ಲ. ಈ ಪ್ರತಿಭಟನೆಯ ದಶಕದ  ಬೇರೆಲ್ಲ ಹೋರಾಟಗಳು- ಯುದ್ಧವಿರೋಧವಾದ, ಪ್ರತಿ ಸಂಸ್ಕಿçತಿ ಮತ್ತು ನಾಗರಿಕ ಹಕ್ಕು ಹೋರಾಟ-ಇವೆಲ್ಲ ಈಗ ಕಳೆದುಹೋಗಿವೆ ಇಲ್ಲವೇ ದಾರಿ ಕಾಣದಂತಾಗಿವೆ. ಹೀಗಿದ್ದರೂ, ಪರಿಸರ ಆಂದೋಲನ ಬೆಳೆಯುತ್ತಲೇ ಇದೆ, ನಿರ್ಗಮನವನ್ನು ತಡೆಹಿಡಿದಿದೆ, ನಾಶವಾಗುವುದುನ್ನು ಪ್ರತಿರೋಧಿಸಿದೆ. 02. ಮರಳಿ ಮಣ್ಣಿಗೆ(14) 18 ಮತ್ತು 19ನೇ ಶತಮಾನದಲ್ಲಿ ಇಂಗ್ಲೆಂಡ್ ಭೂ ರಚನೆ ಬದಲಾಯಿತು. ಕಲ್ಲಿದ್ದಲು ಗಣಿಗಳು, ಗಿರಿಣಿಗಳು, ರೈಲು ಹಳಿಗಳು, ಬಂದರುಗಳು ಹಾಗೂ […]

ಒಕ್ಕೂಟ ವ್ಯವಸ್ಥೆ

01.ಭಾರತಕ್ಕೆ ಇಪ್ಪತ್ತೊಂದನೆಯ ಶತಮಾನದ ಒಪ್ಪುಕೂಟ ವ್ಯವಸ್ಥೆ(06) ನಡವಳಿಕೆಯ ನೆಲೆಯಲ್ಲಿ ನೋಡಿದಾಗ ಎರಡು ಬಗೆಯ ಒಪ್ಪುಕೂಟಗಳನ್ನು ಕಾಣಬಹುದು ೧.ಸಡಿಲ ಒಪ್ಪುಕೂಟ ೨. ಸದೃಢ ಒಪ್ಪುಕೂಟ ಸಡಿಲ ಒಪ್ಪುಕೂಟದಲ್ಲಿ ನಾಡುಗಳು ಕಾಲಕಾಲಕ್ಕೆ ತಮ್ಮ ಜನರ ಆಶಯಗಳಿಗೆ ತಕ್ಕಂತೆ ಕೂಟವನ್ನು ಸೇರುವ ಅಥವ ಬಿಡುವ ತೀರ್ಮಾನಗಳನ್ನು ಕಯ್ಗೊಳ್ಳಬಹುದು. 02. ರಾಷ್ಟ್ರೀಯತೆ ಮತ್ತು ಅಭಿವೃದ್ಧಿ(13) ನಾನಾ ರಾಜರ ಆಡಳಿತ ಹಾಗೂ ಅನುಕೂಲಕ್ಕೆ ತಕ್ಕ ಹಾಗೆ ಭಿನ್ನವಾಗಿದ್ದ ಈ ಎಲ್ಲ ಭೂ ಪ್ರದೇಶಗಳನ್ನೂ ಒಟ್ಟುಗುಡಿಸಿ, ಸಮಗ್ರತೆಯ ರೂಪ ಕೊಟ್ಟಿದ್ದು ಬ್ರಿಟಿಷರು. ಅದಾಗಲೇ ಯುರೋಪ್ ಹಾಗೂ […]

ಋತ 1 ವಿಜ್ಞಾನ, ಪ್ರಜಾಪ್ರಭುತ್ವ ಮತ್ತು ಇಕಾಲಜಿ

  ಖ್ಯಾತ ಪರಿಸರ ವಿಜ್ಞಾನಿ ಪ್ರೊ.ಮಾಧವ ಗಾಡ್ಗೀಳ್‌ ಅವರ ಲೇಖನಗಳ ಗುಚ್ಛ.ಪ್ರೊ.ಟಿ ಎಸ್‌ ವೇಣುಗೋಪಾಲ್‌, ಸುಷ್ಮಾ ಕಶ್ಯಪ್‌, ಅಪೂರ್ವ ಯರಬಹಳ್ಳಿ, ಡಾ.ದಿವ್ಯಮಣಿ ಬಿ ಜಿ., ಮತ್ತಿತರರು ಅನುವಾದಿಸಿದ ಲೇಖನಗಳಿವೆ. ಪುಟ 72 ಬೆಲೆ: ರೂ.100  

Back To Top