ಋತ 1 ವಿಜ್ಞಾನ, ಪ್ರಜಾಪ್ರಭುತ್ವ ಮತ್ತು ಇಕಾಲಜಿ
ಖ್ಯಾತ ಪರಿಸರ ವಿಜ್ಞಾನಿ ಪ್ರೊ.ಮಾಧವ ಗಾಡ್ಗೀಳ್ ಅವರ ಲೇಖನಗಳ ಗುಚ್ಛ.ಪ್ರೊ.ಟಿ ಎಸ್ ವೇಣುಗೋಪಾಲ್, ಸುಷ್ಮಾ ಕಶ್ಯಪ್, ಅಪೂರ್ವ ಯರಬಹಳ್ಳಿ, ಡಾ.ದಿವ್ಯಮಣಿ ಬಿ ಜಿ., ಮತ್ತಿತರರು ಅನುವಾದಿಸಿದ ಲೇಖನಗಳಿವೆ. ಪುಟ 72 ಬೆಲೆ ರೂ.100
ಋತ, ರಾಜಕೀಯ-ಸಾಂಸ್ಕøತಿಕ ನಿಯತಕಾಲಿಕವಾಗಿದ್ದು, ಸಮಕಾಲೀನ ಕನ್ನಡ ಪ್ರಮುಖ ಪ್ರಕಟಣೆಗಳಲ್ಲೊಂದು. ಇಂಗ್ಲಿಷ್ ಕೇಂದ್ರಿತವಾದ ಜ್ಞಾನಧಾರೆಯನ್ನು ಸವಿ ಕನ್ನಡದಲ್ಲಿ ಪ್ರಕಟಿಸುವುದು ನಮ್ಮ ಗುರಿ. ಕನ್ನಡಕ್ಕೆ ಜಗತ್ತಿನ ಎಲ್ಲ ಜ್ಞಾನಧಾರೆಗಳು ಬರಬೇಕು ಎನ್ನುವ ಆಶಯವನ್ನು ಆಗುಮಾಡುವ ಪ್ರಯತ್ನ. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಿಜ್ಞಾನ-ತಂತ್ರಜ್ಞಾನ, ಪರಿಸರ-ಜೀವಿಶಾಸ್ತ್ರ, ಆಟೋಟ, ಕಲೆ-ಸಂಸ್ಕøತಿ, ಶಿಕ್ಷಣ ಸೇರಿದಂತೆ ದೈನಂದಿನ ಬದುಕನ್ನು ಪ್ರಭಾವಿಸುವ-ಭಾಗವಾಗಿರುವ ಎಲ್ಲ ಜ್ಞಾನಶಾಖೆಗಳ ವಿಮರ್ಶೆ, ವಿಶ್ಲೇಷಣೆ, ವಿಚಾರ, ಸಂವಾದ ನಮ್ಮ ಉದ್ದೇಶ. ಪ್ರತಿ ಸಂಚಿಕೆ ಒಬ್ಬ ಚಿಂತಕ, ಒಂದು ಸಮಸ್ಯೆ ಇಲ್ಲವೇ ಒಂದು ತತ್ತ್ವ-ಸಿದ್ಧಾಂತದ ಬಗ್ಗೆ ಇರುತ್ತದೆ. ಆ ಕುರಿತ ಎಲ್ಲ ದೃಷ್ಟಿಕೋನಗಳನ್ನು ಪರಿಚಯಿಸುವುದು, ಸಂವಾದ ಹಾಗೂ ಚರ್ಚೆಗೆ ವೇದಿಕೆ ಕಲ್ಪಿಸುವುದು ನಮ್ಮ ಉದ್ದೇಶ.
ಖ್ಯಾತ ಪರಿಸರ ವಿಜ್ಞಾನಿ ಪ್ರೊ.ಮಾಧವ ಗಾಡ್ಗೀಳ್ ಅವರ ಲೇಖನಗಳ ಗುಚ್ಛ.ಪ್ರೊ.ಟಿ ಎಸ್ ವೇಣುಗೋಪಾಲ್, ಸುಷ್ಮಾ ಕಶ್ಯಪ್, ಅಪೂರ್ವ ಯರಬಹಳ್ಳಿ, ಡಾ.ದಿವ್ಯಮಣಿ ಬಿ ಜಿ., ಮತ್ತಿತರರು ಅನುವಾದಿಸಿದ ಲೇಖನಗಳಿವೆ. ಪುಟ 72 ಬೆಲೆ ರೂ.100