ಮಾತುಕತೆ ಪ್ರಸ್ತಾವಕ್ಕೆ ರೈತರ ತಿರಸ್ಕಾರ
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಸಿದ ಮೂರು ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಮಾತುಕತೆಗೆ ಬರುವಂತೆ ಗೃಹ ಸಚಿವ ಅಮಿತ್ ಶಾ ನೀಡಿದ್ದ ಆಹ್ವಾನವÀನ್ನು ತಿರಸ್ಕರಿಸಿದ್ದು, ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಷರತ್ತುಬದ್ಧ ಮಾತುಕತೆ ರೈತರಿಗೆ ಮಾಡಿದ ಅವಮಾನ. ಬುರಾಡಿ ಮೈದಾನ ತೆರೆದ ಬಂದೀಖಾನೆಯಾಗಿದ್ದು, ಮಾತುಕತೆಗೆ ನಾವು ಅಲ್ಲಿಗೆ ಹೋಗುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಸುರ್ಜಿತ್ ಸಿಂಗ್ ಫುಲ್ ಹೇಳಿದ್ದಾರೆ. ದೆಹಲಿಯ ಗಡಿ ಸಿಂಘುವಿನಲ್ಲಿ ರೈತರು ನಾಲ್ಕು ದಿನಗಳಿಂದ ಬೀಡು ಬಿಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ರಾಜಕೀಯ ಪಕ್ಷಗಳಿಗೆ ಅವಕಾಶ […]




