ಮುದಗೆರೆಯಲ್ಲಿ ಹಾಲು ಉತ್ಪಾದಕರ ವಾರ್ಷಿಕ ಮಹಾಸಭೆ
ಚನ್ನಪಟ್ಟಣ ತಾಲೂಕಿನ ಮುದಗೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ೨೦೧೯-೨೦ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆ.೨೭ರಂದು ನಡೆಯಿತು. ಮುಖ್ಯ ಅತಿಥಿ ಬಮೂಲ್ ನಿರ್ದೇಶಕ ಎಚ್. ಸಿ. ಜಯಮುತ್ತು ಉತ್ಪಾದಕರಿಗೆ ಒಕ್ಕೂಟದ ವತಿಯಿಂದ ನೀಡುವ ಸವಲತ್ತುಗಳ ಮಾಹಿತಿ ನೀಡಿದರು.ಗುಣಮಟ್ಟದ ಹಾಲು ಪೂರೈಸಿ ಸಂಘವನ್ನು ಏಳಿಗೆಗೆ ಕೊಂಡೊಯ್ಯಬೇಕೆಂದು ಮನವಿ ಮಾಡಿದರು. ಸಂಘ ೧೩,೫೮.೯೯೦ ರೂ. ನಿವ್ವಳ ಲಾಭ ಗಳಿಸಿರುವುದಕ್ಕೆ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಅಧ್ಯಕ್ಷ ಎಂ.ಅರ್ಕೇಶ್, ಉಪ ವ್ಯವಸ್ಥಾಪಕ ಕೆಂಪರಾಜು, ಕೃಷಿ ಅಧಿಕಾರಿ […]




