ʻಮರಳಿ ಕೃಷಿಗೆʼ ಸಂಭ್ರಮಿಸುವ ಸಂಗತಿಯಲ್ಲ
ಕೋವಿಡ್ ನಂತರ ನಡೆದ ಉದ್ಯೋಗ ನಷ್ಟ ಪರ್ವದಲ್ಲಿ ಕೆಲಸ ಕಳೆದುಕೊಂಡವರು ಹಳ್ಳಿಗೆ ವಾಪಸಾಗಿ, ಕೃಷಿಯಲ್ಲಿ ತೊಡಗಿಸಿಕೊಂಡ ಹಲವಾರು ನಿದರ್ಶನಗಳು ವರದಿಯಾಗಿವೆ. ದೇಶದಲ್ಲಿ ಶೇ.86ರಷ್ಟು ಸಣ್ಣ ಮತ್ತು ಅಂಚಿನ ಕೃಷಿಕರಿದ್ದು, ಇವರು 2 ಎಕರೆಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ಪ್ರತಿವರ್ಷ 8ರಿಂದ 15 ದಶಲಕ್ಷ ಪದವೀಧರರು ಉದ್ಯೋಗ ಮಾರುಕಟ್ಟೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. 25 ವರ್ಷಕ್ಕಿಂತ ಕೆಳಗಿನ ಶೇ.40ರಷ್ಟು ಪದವೀದರರು ನಿರುದ್ಯೋಗಿಗಳಾಗಿದ್ದಾರೆ. ಸಂಕಷ್ಟ ಕಾಲದಲ್ಲಿ ಗ್ರಾಮೀಣ ಜನರಿಗೆ ನೆರವಾಗುತ್ತಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನು ತಿರುಚಲಾಗಿದೆ. ಇಂಥ ಸನ್ನಿವೇಶದಲ್ಲಿ ʻಮರಳಿ ಕೃಷಿಗೆʼ ಸಂಭ್ರಮಿಸುವ […]

