ಕಿರು ಸಾಲವೆಂಬ ಉರುಳು

ಕರ್ನಾಟಕ ಸರ್ಕಾರ ಕಿರುಸಾಲ ಸಂಸ್ಥೆ(ಮೈಕ್ರೋ ಕ್ರೆಡಿಟ್‌ ಸಂಸ್ಥೆಗಳು,ಎಂಎಫ್‌ಐ) ಗಳಿಂದ ಸಾಲ ಪಡೆದಿರುವವರ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಈ ಕಂಪನಿಗಳು ಸಕ್ಷಮ ಪ್ರಾಧಿಕಾರವಾದ ಜಿಲ್ಲಾಧಿಕಾರಿ ಬಳಿ ನೋಂದಣಿ ಮಾಡಿಸ ಬೇಕು, ಬಲವಂತವಾಗಿ ಸಾಲ ವಸೂಲಿ ಕೂಡದು ಹಾಗೂ ನೋಂದಣಿರಹಿತ ಎಂಎಫ್‌ಐಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುವಂತಿಲ್ಲ ಎಂಬೆಲ್ಲ ಅಂಶ ಗಳನ್ನು ಕರಡು ಒಳಗೊಂಡಿದೆ. ಇದರಿಂದ ಈ ಕಂಪನಿಗಳಿಂದ ಕಿರುಕುಳ ಕಡಿಮೆಯಾಗುವುದೇ ಹಾಗೂ ಸಾಲಗಾರರ ಆತ್ಮಹತ್ಯೆಗಳು ನಿಲ್ಲುತ್ತವೆಯೇ? ಬಾಂಗ್ಲಾದ ಡಾ.ಮೊಹಮ್ಮದ್‌ಯೂನುಸ್‌ ಅವರಿಂದ ಪ್ರೇರಿತವಾಗಿ 1990ರಲ್ಲಿ ದೇಶದಲ್ಲಿ ಎಂಎಫ್‌ಐಗಳು ಆರಂಭಗೊಂಡವು. ಎಂಎಫ್‌ಐಗಳಲ್ಲಿ […]

ಈಡೇರದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ ಅವರ ವಾಗ್ದಾನ

ʻಪ್ರತಿಯೊಂದು ಕ್ಷಣವೂ ಕ್ರಿಯೆಯ ಸಮಯ. ಸುರಂಗದ ಕೊನೆಯಲ್ಲಿ ಕಂಡುಬರುವ ಬೆಳಕು ನಮಗೆ ದಕ್ಕದೆ ಇರಬಹುದು; ಆದರೆ, ಅದರ ಮಿನುಗುವಿಕೆ ಮತ್ತು ಪ್ರತಿಫಲನಗಳಿಂದ ನಮ್ಮ ದಾರಿ ಕಂಡುಕೊಳ್ಳಬಹುದುʼ   ದೇಶ ತನ್ನ 75ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದೆ. ಅಮೆರಿಕದಲ್ಲಿ ಟ್ರಂಪ್‌ 2.0 ಆರಂಭಗೊಂಡಿದೆ. ಭಾರತದಲ್ಲಿ ಪ್ರಗತಿಪರ ಚಳವಳಿಗಳು ಮಕಾಡೆ ಮಲಗಿವೆ. ಎರಡೂ ದೇಶಗಳು ಪ್ರಜಾಪ್ರಭುತ್ವದ ಆದರ್ಶಗಳನ್ನು ವಾಸ್ತವಕ್ಕೆ ಪರಿವರ್ತಿಸಲು ಹೆಣಗಾಡುತ್ತಿವೆ; ಅದರಲ್ಲಿ ಎಡವುತ್ತಿವೆ. ಇಂಥ ಸಂದರ್ಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌(ಎಂಎಲ್‌ಕೆ) ಅವರ ಬದುಕಿನಿಂದ ನಾವು ಕಲಿಯಬೇಕಿದೆ. 1963 ರಲ್ಲಿ […]

ಮೆಟಾ ಸತ್ಯಾಂಶ ಪರಿಶೀಲಕರನ್ನು ನಿವಾರಿಸುತ್ತಿರುವುದೇಕೆ?

ಜನವರಿ 7, 2025ರಂದು ಮೆಟಾ ಸಿಇಇ ಮಾರ್ಕ್‌ ಎಲಿಯಟ್‌ ಜುಕರ್‌ಬರ್ಗ್‌, ʻಮೆಟಾ ಸತ್ಯಾಂಶ ಪರಿಶೀಲಕ(ಫ್ಯಾಕ್ಟ್‌ ಚೆಕರ್‌)ರನ್ನು ತೆಗೆದುಹಾಕಲಿದೆ. ಅವರು ರಾಜಕೀಯ ಪಕ್ಷಪಾತ ತೋರುತ್ತಿದ್ದು, ನಂಬಿಕೆ ಹುಟ್ಟಿಸುವ ಬದಲು ಅದನ್ನು ನಾಶಮಾಡುತ್ತಿದ್ದಾರೆ. ಮೆಟಾ ಮುಖ್ಯವಾಹಿನಿ ಸಂವಾದವನ್ನು ಸ್ಪರ್ಶಿಸದ ವಿಷಯಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಿದೆ,ʼ ಎಂದು 5 ನಿಮಿಷಗಳ ವಿಡಿಯೋದಲ್ಲಿ ಹೇಳಿದರು. ಸತ್ಯಾಂಶ ಪರಿಶೀಲಕರ ಬದಲು ಎಲಾನ್‌ ಮಸ್ಕ್‌ ಅವರ ʻಎಕ್ಸ್‌ʼ ಅಳವಡಿಸಿಕೊಂಡಿರುವ ʻಕಮ್ಯುನಿಟಿ ನೋಟ್ಸ್‌ʼ ವ್ಯವಸ್ಥೆ ಅಳವಡಿಕೆಗೆ ಮೆಟಾ ಮುಂದಾಗಿದೆ. ಇದರಲ್ಲಿ ಕೇಂದ್ರೀಕೃತ ವ್ಯವಸ್ಥೆಯೊಂದರ ಬದಲು ಗ್ರಾಹಕರು ಸುಳ್ಳಿನ […]

ಪಾತಾಳಕ್ಕಿಳಿದ ರೂಪಾಯಿ ಮತ್ತು ಮೂರು ಭಾರತಗಳು

ಸಂಕ್ರಾತಿ ಹಿಂದಿನ ದಿನ ರೂಪಾಯಿ 66 ಪೈಸೆ ಕುಸಿತ ಕಂಡು, ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದಿದೆ; ಡಾಲರ್‌ಗೆ 86.79 ರೂ. ಆಗಿದೆ. ಕಳೆದ 2 ವರ್ಷದಲ್ಲಿ ಕಂಡ ತೀವ್ರ ಕುಸಿತ ಇದಾಗಿದ್ದು, 2024ರಲ್ಲಿ ರೂಪಾಯಿ ಬೆಲೆ ಶೇ.3ರಷ್ಟು ಕುಸಿಯಿತು; ಡಾಲರ್‌ ಎದುರು ನಿರಂತರವಾಗಿ ಮೌಲ್ಯ ಕಳೆದುಕೊಳ್ಳುತ್ತಿದೆ. ಇದು ಆರಂಭಗೊಂಡಿದ್ದು-ಅಮೆರಿಕದ ಫೆಡರಲ್‌ ಬ್ಯಾಂಕ್ ಸೆಪ್ಟೆಂಬರ್‌ 18, 2024ರಂದು ಬಡ್ಡಿಯನ್ನು 50 ಬೇಸ್‌ ಪಾಯಿಂಟ್(ಬಿಪಿ ಎಸ್)ಗಳಿಂದ ಕಡಿತಗೊಳಿಸಿದ ಬಳಿಕ. ಆನಂತರ ನವೆಂಬರ್‌ 17 ಹಾಗೂ ಡಿಸೆಂಬರ್‌ 18ರಂದು ಮತ್ತೊಮ್ಮೆ 25 […]

ಭೂಸ್ವಾಧೀನ ವಿರುದ್ಧದ ಹೋರಾಟಕ್ಕೆ ಸಾವಿರ ದಿನ

ರೈತ ಮುಖಂಡ ಜಗಜೀತ್‌ ಸಿಂಗ್‌ ದಲ್ಲೇವಾಲ್‌ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ಸೇರಿದಂತೆ ನಾನಾ ಕಾಯಿದೆಗಳ ಜಾರಿಗೆ ಆಗ್ರಹಿಸಿ ನವೆಂಬರ್‌ 26, 2024 ರಿಂದ ನಿರಶನ ನಡೆಸುತ್ತಿದ್ದಾರೆ. ಅವರನ್ನು ಸುಪ್ರೀಂ ಕೋರ್ಟ್‌ ನೇಮಿಸಿದ ಉನ್ನತಾಧಿಕಾರ ಸಮಿತಿ ಭೇಟಿ ಮಾಡಿ, ವೈದ್ಯಕೀಯ ನೆರವು ಪಡೆಯಲು ಕೋರಿದೆ. ಆದರೆ, ಅವರು ನಿರಾಕರಿಸಿದ್ದು, ಅವರ ಆರೋಗ್ಯ ಹದಗೆಡುತ್ತಿದೆ. ಇದೇ ಹೊತ್ತಿನಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾ ಭಿವೃದ್ಧಿ ಮಂಡಳಿ(ಕೆಐಎಡಿಬಿ)ಗೆ ಭೂಮಿ ಕೊಡುವುದಿಲ್ಲ ಎಂದು ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ ರೈತರು ನಡೆಸುತ್ತಿರುವ […]

ʻಒಂದು ದೇಶ, ಒಂದು ಚಂದಾʼ ಎಂಬುದು ಕ್ರಾಂತಿಕಾರ ನಡೆಯೇ?

ʻಒಂದು ದೇಶ, ಒಂದು ಚುನಾವಣೆʼ ಮಸೂದೆಯು ಜಂಟಿ ಸಂಸದೀಯ ಸಮಿತಿಯ ಅವಗಾಹನೆಗೆ ಹೋಗಿದೆ. ಇಂಥದ್ದೇ ಹಲವು ಹರಾಕಿರಿಗಳನ್ನು ಮಾಡಿರುವ ಎನ್‌ಡಿಎ 3.0 ಸರ್ಕಾರದ ಇನ್ನೊಂದು ಉಪಕ್ರಮ ʻಒಂದು ದೇಶ, ಒಂದು ಚಂದಾʼ(ಒನ್‌ ನೇಷನ್‌, ಒನ್‌ ಸಬ್‌ಸ್ಕ್ರಿಪಕ್ಷನ್; ಒಎನ್‌ಒಎಸ್‌). ಶೈಕ್ಷಣಿಕ ಕ್ಷೇತ್ರಕ್ಕೆ ಆಯವ್ಯಯ ಬೆಂಬಲ ವರ್ಷೇವರ್ಷೇ ಕಡಿಮೆಯಾಗುತ್ತಿರುವ, ಶೈಕ್ಷಣಿಕ ರಂಗದ ಎಲ್ಲ ಹಂತಗಳಲ್ಲಿ (ಪ್ರಾಥಮಿಕದಿಂದ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣ, ಶ್ರೇಷ್ಠತಾ ಸಂಸ್ಥೆಗಳು) ಬೋಧಕರು ಸೇರಿದಂತೆ ಮಾನವ ಸಂಪನ್ಮೂಲ ಕಡಿಮೆಯಾಗುತ್ತಿರುವ ಹಾಗೂ ಸಂಶೋಧನೆ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿರುವ […]

ಸಮಾನತೆಯ ಚರಿತ್ರೆ – ಥಾಮಸ್‌ ಪಿಕೆಟ್ಟಿ. ಸಂಗ್ರಹಾನುವಾದ: ಟಿ ಎಸ್‌ ವೇಣುಗೋಪಾಲ್

ಫ್ರೆಂಚ್‌ ಅರ್ಥಶಾಸ್ತ್ರಜ್ಞ ಥಾಮಸ್‌ ಪಿಕೆಟ್ಟಿ ಸಮಾನತೆ, ಅಸಮಾನತೆ ಹಾಗೂ ಬಡತನವನ್ನು ಕುರಿತು ಅಪಾರ ಅಧ್ಯಯನ ನಡೆಸಿರುವ ವಿದ್ವಾಂಸ. ಅವರು ಸಂಪತ್ತಿನ ಕೇಂದ್ರೀಕರಣ ಹಾಗೂ ಅಸಮಾನತೆ ಕುರಿತ ಅಧ್ಯಯನವನ್ನು ವಿಶ್ಲೇಷಣೆಗೆ ಸೀಮಿತಗೊಳಿಸದೆ, ಪರಿಹಾರವನ್ನೂ ಸೂಚಿಸುತ್ತಾರೆ. ಆದ್ದರಿಂದ, ಸಮಸಮಾಜದ ನಿರ್ಮಾಣದ ಕನಸನ್ನು ಇಟ್ಟುಕೊಂಡವರು ಈ ಚರ್ಚೆಯಲ್ಲಿ ಅವಶ್ಯವಾಗಿ ಪಾಲ್ಗೊಳ್ಳಬೇಕಿದೆ. ಅವರ ಪ್ರಕಾರ, ಎಲ್ಲರಿಗೂ ಶಿಕ್ಷಣ ದೊರೆಯಬೇಕು. ಕೆಳಸ್ತರದ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದು ಹಾಗೂ ಅದಕ್ಕೆ ಸಂಪನ್ಮೂಲ ಕ್ರೋಡೀಕರಣ ನಮ್ಮ ಗುರಿ ಆಗಿರಬೇಕು. ಇಲ್ಲಿ ಹಣ ಮುಖ್ಯವಲ್ಲ. ಅದರ […]

ತಾಯಂದಿರ ಸಾವು: ಈ ಅನ್ಯಾಯಕ್ಕೆ ಸರ್ಕಾರಗಳೇ ಹೊಣೆ

ಬಳ್ಳಾರಿಯ ಆಸ್ಪತ್ರೆಯಲ್ಲಿ ರಿಂಗರ್‌ ಲ್ಯಾಕ್ಟೇಟ್‌ ಐವಿ ದ್ರಾವಣದಿಂದ ಆರು ತಾಯಂದಿರು ಮೃತಪಟ್ಟ ಘಟನೆ ಬಳಿಕ ಚಿಕ್ಕಮಗಳೂರು ಜಿಲ್ಲೆ ಹಾಗೂ ಬೆಂಗಳೂರಿನ ಪೀಣ್ಯದಲ್ಲಿ ಮತ್ತಿಬ್ಬರು ತಾಯಂದಿರು ಮೃತಪಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯ ಸಾವಿಗೆ ಕಾರಣ ಎಂದು ಸಂಬಂಧಿಕರು ದೂರಿದ್ದಾರೆ. ಆದರೆ, ಸಂಬಂಧಿಸಿದವರು ಆರೋಪ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ನಡೆದಿರುವ ತಾಯಂದಿರ ಸಾವಿನ ಆಡಿಟ್‌ಗೆ ಸರ್ಕಾರ ಆದೇಶಿಸಿದೆ. ಮೃತರಲ್ಲಿ ಇಬ್ಬರಲ್ಲಿ ಇಲಿ ಜ್ವರ ಪತ್ತೆಯಾಗಿರುವುದರಿಂದ, ಚಿಕಿತ್ಸಾ ತನಿಖೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇವು ಅನ್ಯಾಯದ ಸಾವುಗಳು. […]

ಪೆರಿಯಾರ್‌, ವೈಕಂ ಚಳವಳಿ ಮತ್ತು ದೇವನೂರು ಮಹಾದೇವ

ಸುಮಾರು 100 ವರ್ಷಗಳ ಹಿಂದೆ ನಡೆದ ಸಾಟಿಯಿಲ್ಲದ ಸಾಮಾಜಿಕೋ-ರಾಜಕೀಯ ಹೋರಾಟ; ವೈಕಂ ಚಳವಳಿ. ಅದು ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ವಿರುದ್ಧ ನಡೆದ ದೇಶದ ಮೊಟ್ಟಮೊದಲ ಹೋರಾಟ; ದೇಶದ ಸಾಮಾಜಿಕ ಸುಧಾರಣೆ ಪಥವನ್ನು ರೂಪಿಸಿತು. ಇನ್ನೇನು ಚದುರಿ ಹೋಗಲಿದ್ದ ಈ ಚಳವಳಿಗೆ ಹುರುಪು ತುಂಬಿ, ದಿಗ್ದರ್ಶನ ಮಾಡಿದವರು ಪೆರಿಯಾರ್‌ ಇ.ವಿ. ರಾಮಸ್ವಾಮಿ. ಆನಂತರ ಅವರು ಆರಂಭಿಸಿದ ದ್ರಾವಿಡ ಚಳವಳಿ ಹಾಗೂ ಸ್ವಾಭಿಮಾನ ಚಳವಳಿಗಳು ದಕ್ಷಿಣ ಭಾರತದ ರಾಜಕೀಯ ಚಿತ್ರಣವನ್ನೇ ಬದಲಿಸಿದವು. ಅವರ ನೆನಪಿನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿದ […]

Back To Top