ನರೇಗಾಕ್ಕೆ 20: ವೇತನ ಬಾಕಿ, ಅನುದಾನ ವಿಳಂಬ ಹೆಚ್ಚಳ

ಗ್ರಾಮೀಣರ ಉಪಾದಾಯ ಮೂಲವಾದ ನರೇಗಾ(ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಕ್ಕೆ ಈಗ  20ರ ಹರೆಯ. ಗಟ್ಟಿಯಾಗಿ ಬೆಳೆದು ಗ್ರಾಮೀಣರು-ಕೃಷಿ ಕಾರ್ಮಿಕರ ಕೈ ಹಿಡಿಯಬೇಕಿದ್ದ ಈ ಕಾರ್ಯಕ್ರಮವು ಆಡಳಿಶಾಹಿಯ ನಿರ್ಲಕ್ಷ್ಯದಿಂದ ದಿನೇದಿನೇ ಬಲಗುಂದುತ್ತಿದೆ. ಕೃಷಿ ಸಂಕಷ್ಟ, ಹವಾಮಾನ ಬದಲಾವಣೆಯಿಂದ ಆದ ವ್ಯತ್ಯಯ ಹಾಗೂ ಆದಾಯ ಸ್ಥಗಿತಗೊಂಡಿರುವ ಗ್ರಾಮೀಣರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ಅಥವಾ ಎಂಜಿ ನರೇಗಾದ ಮೊದಲ ಹೆಸರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ […]

ಪಾನಿಪೂರಿ ತಿನ್ನಲು ಹಿಂದಿ ಕಲಿಯಬೇಕೇ?

ತಮಿಳುನಾಡು ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಮತ್ತು ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ಸ್‌ಫಾರ್‌ರೈಸಿಂಗ್‌ಇಂಡಿಯ) ಯೋಜನೆಗಳಿಗೆ ಅನುಮತಿಸದ ಕಾರಣ ಒಕ್ಕೂಟ ಸರ್ಕಾರವು ಸರ್ವ ಶಿಕ್ಷಾ ಅಭಿಯಾನದ ಅನು ದಾನವನ್ನು ತಡೆಹಿಡಿದಿದೆ. ಇದು ಡಿಎಂಕೆ ಸರ್ಕಾರ ಹಾಗೂ ಎನ್‌ಡಿಎ-3 ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಎನ್ಡಿಎ ಸರ್ಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರುತ್ತಿದೆ ಎಂದು ತಮಿಳುನಾಡು ದೂರಿದೆ. ಲೋಕಸಭೆಯಲ್ಲೂ ಈ ಸಂಬಂಧ ಟೀಕೆ-ಪ್ರತಿಟೀಕೆ ನಡೆದಿದೆ. ಶಿಕ್ಷಣ ಸಚಿವ ಪ್ರಧಾನ್‌ಬಳಸಿದ ಪದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಡಿಎಂಕೆ ಸಂಸದರು ಕಲಾಪಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ತಮಿಳುನಾಡಿನಲ್ಲಿ ತ್ರಿಭಾಷಾ […]

ಅಣು ಶಕ್ತಿಯೆನ್ನುವ ಹುಲಿ ಸವಾರಿ

2025-26ರ ಆಯವ್ಯಯ ಭಾಷಣದಲ್ಲಿ ವಿತ್ತ ಸಚಿವೆ, ʼಅಣುಶಕ್ತಿ ಕಾಯಿದೆ(ಎಇಅ) ಮತ್ತು ಅಣು ಅವಘಡಗಳಿಗೆ ನಾಗರಿಕ ಹೊಣೆಗಾರಿಕೆ ಕಾಯಿದೆ(ಸಿಎಲ್‌ಎನ್‌ಡಿಎ)ಗೆ ತಿದ್ದುಪಡಿ ತರಲಾಗುವುದುʼ ಎಂದು ಘೋಷಿಸಿದರು; ಅಣು ಶಕ್ತಿ ಕ್ಷೇತ್ರಕ್ಕೆ 20,000 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿದರು. ಅಣು ದುರಂತ ಸಂಭವಿಸಿದಲ್ಲಿ ಸ್ಥಾವರಗಳ ಉತ್ಪಾದಕರು-ಪೂರೈಕೆದಾರರ ಮೇಲೆ ಕನಿಷ್ಠ ಹೊಣೆಗಾರಿಕೆ ಹೊರಿಸುವ ಈ ಕಾಯಿದೆ ಮೇಲೆ ಅಮೆರಿಕದ ಅಣು ಸ್ಥಾವರಗಳ ಉತ್ಪಾದಕರು/ಸಾಧನ-ಸಲಕರಣೆಗಳ ಪೂರೈಕೆ ದಾರರು ಅಸಮಾಧಾನಗೊಂಡಿದ್ದಾರೆ. 2010ರ ಸಿಎಲ್‌ಎನ್‌ಡಿಎ ಕಾಯಿದೆಯು ಅಣುಶಕ್ತಿ ಉತ್ಪಾದನೆಗೆ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ. […]

ಯುಜಿಸಿ ತಿದ್ದುಪಡಿ ಪ್ರಸ್ತಾವ: ಕೇಂದ್ರೀಕರಣದ ಕರಾಳ ಶಾಸನ

ರಾಜ್ಯಪಾಲರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾನಿಲಯ (ತಿದ್ದುಪಡಿ) ಮಸೂದೆ 2024 ಅನ್ನು ಸರ್ಕಾರಕ್ಕೆ ಹಿಂದಿರುಗಿಸಿ ದ್ದು, ಮಸೂದೆಯನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ. ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ವಿವಿ ಕುಲಪತಿಯಾಗಿ ಬದಲಿಸುವ ಈ ಪ್ರಯತ್ನ ವು ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷವನ್ನು ಹೆಚ್ಚಿಸಿದೆ. ರಾಜ್ಯದ ಎಲ್ಲ ವಿವಿಗಳಿಗೂ ಮುಖ್ಯಮಂತ್ರಿಯೇ ಕುಲಪತಿ ಆಗಬೇಕೆಂಬುದು ಸರ್ಕಾರದ ಆಶಯ. ಫೆ.19ರಂದು ಬೆಂಗಳೂರಿನಲ್ಲಿ ನಡೆದ ವಿವಿಧ ರಾಜ್ಯಗಳ ಉನ್ನತ ಸಚಿವರ ಸಮಾ ವೇಶದಲ್ಲಿ ಯುಜಿಸಿ(ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ) […]

ಹವಾಮಾನ ಬದಲಾವಣೆಯಿಂದ ವಿದ್ಯುತ್ ಕ್ಷೇತ್ರದಲ್ಲಿ ಬಿಕ್ಕಟ್ಟು

ಫೆಬ್ರವರಿ ಮಧ್ಯ ಭಾಗದಲ್ಲೇ ಸುಡು ಬಿಸಿಲು ನೆತ್ತಿ ಸುಡುತ್ತಿದೆ; ಬೆಂಗಳೂರಿನಲ್ಲಿ ಹಿಂಬಾಗಿಲ ಮೂಲಕ ಲೋಡ್‌ ಶೆಡ್ಡಿಂಗ್‌ ಪ್ರವೇಶಿ ಸಿದೆ. ದಿನಕಳೆದಂತೆ ಹವಾಮಾನ ಬದಲಾವಣೆಯ ಕುರುಹುಗಳು ಸ್ಷಷ್ಟವಾಗುತ್ತಿವೆ. ಮುಂಗಾರು ಆಗಮಿಸುವ ಜೂನ್‌ವರೆಗೆ ಭೂಮಿ ಬೆಂದು ಬವಣೆಗೆ ಕಾರಣವಾಗಲಿದೆ. ಚಂಡಮಾರುತಗಳು, ಇಡೀ ವರ್ಷದ ಮಳೆ  ಕೆಲವೇ ದಿನಗಳಲ್ಲಿ ಸುರಿಯುವುದು, ಮೇಘಸ್ಪೋ ಟ, ಭೂಕಂಪ-ಭೂಕುಸಿತ ಹೆಚ್ಚಳ, ತೀವ್ರ ಸುಡು ಗಾಳಿ ಇತ್ಯಾದಿ ಸಂಭವಿಸುವಿಕೆ ಹೆಚ್ಚುತ್ತಿದೆ. ಪ್ರಾಕೃತಿಕ ಘಟನೆಗಳ ಮುನ್ಸೂಚನೆ ನೀಡುವಿಕೆ  ಅಸಂಭವವಾಗುತ್ತಿದೆ.  ಇತ್ತೀಚೆಗೆ ಪ್ರಕಟಗೊಂಡ ʻಕ್ಲೈಮೇಟ್‌ ರಿಸ್ಕ್‌ ಇಂಡೆಕ್ಸ್‌ 2025ʼ ಪ್ರಕಾರ, […]

ಆಪ್‌ ಅಪಜಯ ಮತ್ತು ಮೈತ್ರಿಕೂಟದ ಭವಿಷ್ಯ

ಕಂಪ್ಟ್ರೋಲರ್‌ ಆಂಡ್‌ ಆಡಿಟರ್‌ ಜನರಲ್‌ ಆಗಿದ್ದ ವಿನೋ ದ್‌ ರೈ ಅವರು ಯುಪಿಎ-2 ಸರ್ಕಾರ ತರಂಗಾಂತರ ಹಂಚಿಕೆಯಲ್ಲಿ 1.76 ಲಕ್ಷ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ ಎಂದು ವರದಿ ನೀಡಿದ್ದರು. ವರದಿಯನ್ನು ಮುಂದಿಟ್ಟು ಕೊಂಡು ಅಣ್ಣಾ ಹಜಾರೆ, ಕಿರಣ್‌ ಬೇಡಿ, ಅರವಿಂದ್‌ ಕೇಜ್ರಿವಾಲ್‌, ಬಾಬಾ ರಾಮದೇವ್‌ ಹೋರಾಟ ಆರಂಭಿಸಿ ದರು; ಸುಬ್ರಮಣಿಯಂ ಸ್ವಾಮಿ ಪ್ರಕರಣವನ್ನು ನ್ಯಾಯಾಂಗ ಕ್ಕೆ ಕೊಂಡೊಯ್ದರು. ಡಿಸೆಂಬರ್‌ 2017ರಲ್ಲಿ ʻಇದೊಂದು ಕಲ್ಪಿತ ಪ್ರಕರಣʼ ಎಂದ ಸಿಬಿಐ ವಿಶೇಷ ನ್ಯಾಯಾಲಯ, ಅರ್ಜಿಯನ್ನು ವಜಾಗೊಳಿಸಿತು. ಅಷ್ಟರೊಳಗೆ, ಕೇಜ್ರಿವಾಲ್‌ […]

ಕಿರು ಸಾಲವೆಂಬ ಉರುಳು

ಕರ್ನಾಟಕ ಸರ್ಕಾರ ಕಿರುಸಾಲ ಸಂಸ್ಥೆ(ಮೈಕ್ರೋ ಕ್ರೆಡಿಟ್‌ ಸಂಸ್ಥೆಗಳು,ಎಂಎಫ್‌ಐ) ಗಳಿಂದ ಸಾಲ ಪಡೆದಿರುವವರ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಈ ಕಂಪನಿಗಳು ಸಕ್ಷಮ ಪ್ರಾಧಿಕಾರವಾದ ಜಿಲ್ಲಾಧಿಕಾರಿ ಬಳಿ ನೋಂದಣಿ ಮಾಡಿಸ ಬೇಕು, ಬಲವಂತವಾಗಿ ಸಾಲ ವಸೂಲಿ ಕೂಡದು ಹಾಗೂ ನೋಂದಣಿರಹಿತ ಎಂಎಫ್‌ಐಗಳಿಂದ ಪಡೆದ ಸಾಲವನ್ನು ಹಿಂತಿರುಗಿಸುವಂತಿಲ್ಲ ಎಂಬೆಲ್ಲ ಅಂಶ ಗಳನ್ನು ಕರಡು ಒಳಗೊಂಡಿದೆ. ಇದರಿಂದ ಈ ಕಂಪನಿಗಳಿಂದ ಕಿರುಕುಳ ಕಡಿಮೆಯಾಗುವುದೇ ಹಾಗೂ ಸಾಲಗಾರರ ಆತ್ಮಹತ್ಯೆಗಳು ನಿಲ್ಲುತ್ತವೆಯೇ? ಬಾಂಗ್ಲಾದ ಡಾ.ಮೊಹಮ್ಮದ್‌ಯೂನುಸ್‌ ಅವರಿಂದ ಪ್ರೇರಿತವಾಗಿ 1990ರಲ್ಲಿ ದೇಶದಲ್ಲಿ ಎಂಎಫ್‌ಐಗಳು ಆರಂಭಗೊಂಡವು. ಎಂಎಫ್‌ಐಗಳಲ್ಲಿ […]

ಈಡೇರದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌ ಅವರ ವಾಗ್ದಾನ

ʻಪ್ರತಿಯೊಂದು ಕ್ಷಣವೂ ಕ್ರಿಯೆಯ ಸಮಯ. ಸುರಂಗದ ಕೊನೆಯಲ್ಲಿ ಕಂಡುಬರುವ ಬೆಳಕು ನಮಗೆ ದಕ್ಕದೆ ಇರಬಹುದು; ಆದರೆ, ಅದರ ಮಿನುಗುವಿಕೆ ಮತ್ತು ಪ್ರತಿಫಲನಗಳಿಂದ ನಮ್ಮ ದಾರಿ ಕಂಡುಕೊಳ್ಳಬಹುದುʼ   ದೇಶ ತನ್ನ 75ನೇ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದೆ. ಅಮೆರಿಕದಲ್ಲಿ ಟ್ರಂಪ್‌ 2.0 ಆರಂಭಗೊಂಡಿದೆ. ಭಾರತದಲ್ಲಿ ಪ್ರಗತಿಪರ ಚಳವಳಿಗಳು ಮಕಾಡೆ ಮಲಗಿವೆ. ಎರಡೂ ದೇಶಗಳು ಪ್ರಜಾಪ್ರಭುತ್ವದ ಆದರ್ಶಗಳನ್ನು ವಾಸ್ತವಕ್ಕೆ ಪರಿವರ್ತಿಸಲು ಹೆಣಗಾಡುತ್ತಿವೆ; ಅದರಲ್ಲಿ ಎಡವುತ್ತಿವೆ. ಇಂಥ ಸಂದರ್ಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್‌(ಎಂಎಲ್‌ಕೆ) ಅವರ ಬದುಕಿನಿಂದ ನಾವು ಕಲಿಯಬೇಕಿದೆ. 1963 ರಲ್ಲಿ […]

ಮೆಟಾ ಸತ್ಯಾಂಶ ಪರಿಶೀಲಕರನ್ನು ನಿವಾರಿಸುತ್ತಿರುವುದೇಕೆ?

ಜನವರಿ 7, 2025ರಂದು ಮೆಟಾ ಸಿಇಇ ಮಾರ್ಕ್‌ ಎಲಿಯಟ್‌ ಜುಕರ್‌ಬರ್ಗ್‌, ʻಮೆಟಾ ಸತ್ಯಾಂಶ ಪರಿಶೀಲಕ(ಫ್ಯಾಕ್ಟ್‌ ಚೆಕರ್‌)ರನ್ನು ತೆಗೆದುಹಾಕಲಿದೆ. ಅವರು ರಾಜಕೀಯ ಪಕ್ಷಪಾತ ತೋರುತ್ತಿದ್ದು, ನಂಬಿಕೆ ಹುಟ್ಟಿಸುವ ಬದಲು ಅದನ್ನು ನಾಶಮಾಡುತ್ತಿದ್ದಾರೆ. ಮೆಟಾ ಮುಖ್ಯವಾಹಿನಿ ಸಂವಾದವನ್ನು ಸ್ಪರ್ಶಿಸದ ವಿಷಯಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಿದೆ,ʼ ಎಂದು 5 ನಿಮಿಷಗಳ ವಿಡಿಯೋದಲ್ಲಿ ಹೇಳಿದರು. ಸತ್ಯಾಂಶ ಪರಿಶೀಲಕರ ಬದಲು ಎಲಾನ್‌ ಮಸ್ಕ್‌ ಅವರ ʻಎಕ್ಸ್‌ʼ ಅಳವಡಿಸಿಕೊಂಡಿರುವ ʻಕಮ್ಯುನಿಟಿ ನೋಟ್ಸ್‌ʼ ವ್ಯವಸ್ಥೆ ಅಳವಡಿಕೆಗೆ ಮೆಟಾ ಮುಂದಾಗಿದೆ. ಇದರಲ್ಲಿ ಕೇಂದ್ರೀಕೃತ ವ್ಯವಸ್ಥೆಯೊಂದರ ಬದಲು ಗ್ರಾಹಕರು ಸುಳ್ಳಿನ […]

Back To Top