Author: Rutha Editor

Journalist,Translator,avid bibliophile

ಭಾರತದ ಆದಿವಾಸಿ ಕಥನ: ಅಸ್ಮಿತೆ ಮತ್ತು ಅಸಮಾನತೆ

01. ಭಾರತದಲ್ಲಿ ಆದಿವಾಸಿ ಅಸ್ಮಿತೆಯ ಪ್ರಶ್ನೆಗಳು- ಡಾ.ಮುಜಾಫರ್ ಅಸ್ಸಾದಿ(06) ಆದಿವಾಸಿಗಳ ಅಸ್ಮಿತೆಯಲ್ಲಿ ಮೊತ್ತ ಮೊದಲ ಪ್ರಶ್ನೆ ಆದಿವಾಸಿಗಳಲ್ಲಿ ಮತಾಂತರ, ಧರ್ಮ ಪರಿವರ್ತನೆಯ ಮೊದಲನೆಯ ಐಡೆಂಟಿಟಿ ಅಥವಾ ಅಸ್ಮಿತೆ ಪ್ರಧಾನವಾಗುತ್ತದೆ-ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಆದಿವಾಸಿ? ಆದಿವಾಸಿಗಳನ್ನು ರಾಜಕೀಯ ವ್ಯವಸ್ಥೆ ಹೇಗರ ಚಿತ್ರಿಸಿತ್ತು? ಒಂದು ಪ್ರಾಚೀನ ಬುಟಕಟ್ಟು ಜನಾಂಗವಾಗಿ ಗುರುತಿಸಿತ್ತೇ? ಅಥವಾ ಹಿಂದೂ ಧರ್ಮದ ಭಾಗವಾಗಿ ಗುರುತಿತ್ತೇ? ಈ ಗುರುತಿಸುವಿಕೆಯ ಸಂದರ್ಭದಲ್ಲಿ ಯಾವ ಯಾವ ಅಂಶಗಳು ಗಣನೆಗೆ ಬಂದವು. 02. ಬುಡಕಟ್ಟು ಅಧ್ಯಯನದ ಪರ್ಯಾಯ ಹಂಬಲಗಳು- ಡಾ.ಎ.ಎಸ್. ಪ್ರಭಾಕರ(24) […]

ಜಾಗತಿಕ ಪರಿಸರ ಚರಿತ್ರೆ-ರಾಮಚಂದ್ರ ಗುಹಾ. ಅನುವಾದ:ಮಾಧವ ಐತಾಳ್

01. ಹಸಿರಿನೆಡೆಗೆ(10) ಪರಿಸರ ಆಂದೋಲನ ೧೯೬೦ರ ಕೂಸು. ಇದು ಇನ್ನೂ ಕಾವು, ಚಲನೆ ಕಳೆದುಕೊಂಡಿಲ್ಲ. ಈ ಪ್ರತಿಭಟನೆಯ ದಶಕದ  ಬೇರೆಲ್ಲ ಹೋರಾಟಗಳು- ಯುದ್ಧವಿರೋಧವಾದ, ಪ್ರತಿ ಸಂಸ್ಕಿçತಿ ಮತ್ತು ನಾಗರಿಕ ಹಕ್ಕು ಹೋರಾಟ-ಇವೆಲ್ಲ ಈಗ ಕಳೆದುಹೋಗಿವೆ ಇಲ್ಲವೇ ದಾರಿ ಕಾಣದಂತಾಗಿವೆ. ಹೀಗಿದ್ದರೂ, ಪರಿಸರ ಆಂದೋಲನ ಬೆಳೆಯುತ್ತಲೇ ಇದೆ, ನಿರ್ಗಮನವನ್ನು ತಡೆಹಿಡಿದಿದೆ, ನಾಶವಾಗುವುದುನ್ನು ಪ್ರತಿರೋಧಿಸಿದೆ. 02. ಮರಳಿ ಮಣ್ಣಿಗೆ(14) 18 ಮತ್ತು 19ನೇ ಶತಮಾನದಲ್ಲಿ ಇಂಗ್ಲೆಂಡ್ ಭೂ ರಚನೆ ಬದಲಾಯಿತು. ಕಲ್ಲಿದ್ದಲು ಗಣಿಗಳು, ಗಿರಿಣಿಗಳು, ರೈಲು ಹಳಿಗಳು, ಬಂದರುಗಳು ಹಾಗೂ […]

ಒಕ್ಕೂಟ ವ್ಯವಸ್ಥೆ

01.ಭಾರತಕ್ಕೆ ಇಪ್ಪತ್ತೊಂದನೆಯ ಶತಮಾನದ ಒಪ್ಪುಕೂಟ ವ್ಯವಸ್ಥೆ(06) ನಡವಳಿಕೆಯ ನೆಲೆಯಲ್ಲಿ ನೋಡಿದಾಗ ಎರಡು ಬಗೆಯ ಒಪ್ಪುಕೂಟಗಳನ್ನು ಕಾಣಬಹುದು ೧.ಸಡಿಲ ಒಪ್ಪುಕೂಟ ೨. ಸದೃಢ ಒಪ್ಪುಕೂಟ ಸಡಿಲ ಒಪ್ಪುಕೂಟದಲ್ಲಿ ನಾಡುಗಳು ಕಾಲಕಾಲಕ್ಕೆ ತಮ್ಮ ಜನರ ಆಶಯಗಳಿಗೆ ತಕ್ಕಂತೆ ಕೂಟವನ್ನು ಸೇರುವ ಅಥವ ಬಿಡುವ ತೀರ್ಮಾನಗಳನ್ನು ಕಯ್ಗೊಳ್ಳಬಹುದು. 02. ರಾಷ್ಟ್ರೀಯತೆ ಮತ್ತು ಅಭಿವೃದ್ಧಿ(13) ನಾನಾ ರಾಜರ ಆಡಳಿತ ಹಾಗೂ ಅನುಕೂಲಕ್ಕೆ ತಕ್ಕ ಹಾಗೆ ಭಿನ್ನವಾಗಿದ್ದ ಈ ಎಲ್ಲ ಭೂ ಪ್ರದೇಶಗಳನ್ನೂ ಒಟ್ಟುಗುಡಿಸಿ, ಸಮಗ್ರತೆಯ ರೂಪ ಕೊಟ್ಟಿದ್ದು ಬ್ರಿಟಿಷರು. ಅದಾಗಲೇ ಯುರೋಪ್ ಹಾಗೂ […]

ಋತ 1 ವಿಜ್ಞಾನ, ಪ್ರಜಾಪ್ರಭುತ್ವ ಮತ್ತು ಇಕಾಲಜಿ

  ಖ್ಯಾತ ಪರಿಸರ ವಿಜ್ಞಾನಿ ಪ್ರೊ.ಮಾಧವ ಗಾಡ್ಗೀಳ್‌ ಅವರ ಲೇಖನಗಳ ಗುಚ್ಛ.ಪ್ರೊ.ಟಿ ಎಸ್‌ ವೇಣುಗೋಪಾಲ್‌, ಸುಷ್ಮಾ ಕಶ್ಯಪ್‌, ಅಪೂರ್ವ ಯರಬಹಳ್ಳಿ, ಡಾ.ದಿವ್ಯಮಣಿ ಬಿ ಜಿ., ಮತ್ತಿತರರು ಅನುವಾದಿಸಿದ ಲೇಖನಗಳಿವೆ. ಪುಟ 72 ಬೆಲೆ: ರೂ.100  

Back To Top