Author: Rutha Editor

Journalist,Translator,avid bibliophile

ಕಾರಣವಿಲ್ಲದ ಭಯ ಭೀತಿಗಳು

ಆಂಟನ್ ಚೆಕಾವ್ ಅನು: ನಾಗರೇಖಾ ಗಾಂವಕರ ಈ ಜಗದಲ್ಲಿ ಇಷ್ಟು ವರ್ಷಗಳ ಬದುಕಿನುದ್ದಕ್ಕೂ ನಾನು ಬರಿಯ ಮೂರು ಬಾರಿ ಮಾತ್ರ ಭಯಗೊಂಡಿದ್ದೆ. ಮೊದಮೊದಲ ಭಯ ಹೇಗಿತ್ತೆಂದರೆ ಅದು ನನ್ನ ರೋಮಗಳು ನೆಟ್ಟಗಾಗುವಂತೆ ಮಾಡಿತ್ತು. ಇಡೀ ದೇಹವನ್ನು ಥರಥರ ಕಂಪಿಸುವಂತೆ ಮಾಡಿತ್ತು. ಅದು ತೀರಾ ಕ್ಷುಲಕವಾದ ಭಯ. ಆದರೆ ಒಂದು ಬಗೆಯಲ್ಲಿ ವಿಚಿತ್ರವಾಗಿತ್ತು. ಜುಲೈ ತಿಂಗಳ ಒಂದು ಸಂಜೆ ಮಾಡಲು ಏನೂ ಕೆಲಸವಿಲ್ಲದ್ದರಿಂದ ಪತ್ರಿಕೆ ತರೋಣವೆಂದು ನಾನು ನಿಲ್ದಾಣಕ್ಕೆ ಗಾಡಿ ಚಲಾಯಿಸಿದೆ. ಜುಲೈ ತಿಂಗಳ ಒಂದೇ ನಮೂನೆಯ ಸಂಜೆಗಳಂತೆ […]

ಸತ್ಯಜಿತ್‌ ರೇ-ವೈದೃಶ್ಯ, ಲಯ ಮತ್ತು ಗತಿ

ಜಗತ್ತಿನ ೧೦ ಅತಿ ಮುಖ್ಯ ಸಿನೆಮಾ ನಿರ್ದೇಶಕರಲ್ಲಿ ಒಬ್ಬರಾದ ಸತ್ಯಜಿತ್‌ ರೇ ಕುರಿತ ಲೇಖನಗಳ ಗುಚ್ಚ. ರಾಘವನ್‌ ಚಕ್ರವರ್ತಿ, ಅರ್ಪಣ ಎಚ್.‌ ಎಸ್.‌,ಎಂ.ಕೆ. ರಾಘವೇಂದ್ರ, ಪ್ರೊ.ಶಿವಲಿಂಗಸ್ವಾಮಿ, ಗೌತಮ್‌ ಜ್ಯೋತ್ಸ್ನ, ಬಾಬು ಸುಬ್ರಮಣಿಯನ್‌, ಪರಮೇಶ್ವರ ಗುರುಸ್ವಾಮಿ, ಸಿ.ಎಸ್.‌ ವೆಂಕಿಟೇಶ್ವರನ್‌, ಸುಹ್ರಿದ್‌ ಶಂಕರ್‌ ಚಟ್ಟೋಪಾಧ್ಯಾಯ, ಆದಿತ್ಯ ಶ್ರೀಕೃಷ್ಣ, ಮೇರಿ ಸೇಟನ್‌, ಶ್ರುತಿ ತಲನೇರಿ, ಫಿರೋಜ್‌ ರಂಗೂನ್ವಾಲಾ, ಮುರುಳೀಧರ ಖಜಾನೆ, ಆಂಡ್ರ್ಯೂ ರಾಬಿನ್ಸನ್‌, ಚಿದಾನಂದ ದಾಸ್‌ ಗುಪ್ತಾ ಮತ್ತಿತರ ಲೇಖನಗಳನ್ನು ಒಳಗೊಂಡಿದೆ. ಸಂಚಿಕೆಯನ್ನು ಡಾ. ಹರೀಶ್‌ ಎಂ.ಜಿ. ಸಂಪಾದಿಸಿದ್ದಾರೆ. ಪುಟ ಸಂಖ್ಯೆ:120+4  […]

ಭಿನ್ನಮತ-‌ ಟಿ.ಎಂ.ಕೃಷ್ಣ ಅವರ ಆಯ್ದ ಲೇಖನಗಳು

ಕಲಾವಿದ ಮತ್ತು ಸಾಮಾಜಿಕ ಕಾರ್ಯಕರ್ತ ಟಿ.ಎಂ.ಕೃಷ್ಣ ಕರ್ನಾಟಕ ಸಂಗೀತ ಕ್ಷೇತ್ರದ ಬಹುದೊಡ್ಡ ಹೆಸರು. ಸಂಗೀತದಲ್ಲಿ ಮಾತ್ರವಲ್ಲದೆ, ಸಾಮಾಜಿಕ ಅಸಮಾನತೆಗಳ ನಿವಾರಣೆ ಬಗ್ಗೆಯೂ ಮಾತನ್ನಾಡುವ ಮತ್ತು ಕ್ರಿಯಾಶೀಲರಾಗಿರುವ ಅವರು ಸಂಗೀತವನ್ನು ಕಛೇರಿಗೆ ಸೀಮಿತವಾಗಿಸದೆ ಸಾರ್ವಜನಿಕ ಸ್ಥಳಗಳಿಗೂ ತಂದವರು. ಅವರ ವಿಚಾರಧಾರೆಗಳನ್ನುಳ್ಳ ಹೊತ್ತಗೆ. ಅಮರ ಹೊಳೆಗದ್ದೆ, ಉಂಡಾಡಿ ಸಂತೋಷ್‌, ಡಾ.ಆರ್‌. ನಾಗಭೂಷಣ, ಡಾ.ಕವಿತಾ, ಎಸ್.ಬಿ.ಪ್ರಸಾದ್‌,ಡಾ.ನೇತ್ರಾವತಿ, ಡಾ.ಸುಷ್ಮಾ ಕಶ್ಯಪ್‌,ಎಚ್.ಕೆ.ಶರತ್‌, ಶಶಾಂಕ್‌ ಎಸ್.‌ ಆರ್.‌,ಡಾ.ಕಾವ್ಯಶ್ರೀ ಎಚ್.‌, ಗೀತಾ ಬಣಕಾರ್‌, ಡಾ.ಸಂತೋಷ್‌ ನಾಯಕ್‌, ಡಾ.ಸವಿತಾ ಬಿ.ಸಿ. ಮತ್ತಿತರರು ಅನುವಾದಿಸಿದ ಲೇಖನಗಳ ಗುಚ್ಚ.   ಪುಟ […]

ವೈವಿಧ್ಯದ ತೊಟ್ಟಿಲು

ಪಶ್ಚಿಮ ಘಟ್ಟ ಕುರಿತ ಲೇಖನಗಳ ಗುಚ್ಛ. ಪಾಂಡುರಂಗ ಹೆಗ್ಡೆ, ಸತೀಶ್‌ ಚಂದ್ರನ್‌ ನಾಯರ್‌, ಪ್ರೊ.ಮಾಧವ ಗಾಡ್ಗೀಳ್‌, ವಂದನಾ ಶಿವ, ಕ್ದಾಲಾಡ್‌ ಅಲ್ವಾರೆಸ್‌, ರಿತ್ವಿಕ್‌ ದತ್ತ, ರೋಮುಲಸ್‌ ವಿಟೇಕರ್‌, ನಿತಿನ್‌ ಡಿ ರೈ, ವಿಜು ಬಿ,ಕಮಲಾಕರ್‌ ಭ‌ಟ್‌ ಮತ್ತು ಕಿಶೋರ್‌ ಕುಮಾರ್‌ ಅವರ ಲೇಖನಗಳನ್ನು ಒಳಗೊಂಡ ಹೊತ್ತಗೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಬಗ್ಗೆ ಕಾಳಜಿ ಇರುವವರೆಲ್ಲರೂ ಓದಲೇಬೇಕಾದ ಹೊತ್ತಗೆ.

ಹೆಣ್ಣು ಭ್ರೂಣಗಳ ಹತ್ಯೆ ನಿರಂತರ, ನಿರಾತಂಕ

ʻಗಂಗಾಳ ಹೊಡೆಯುವುದುʼ, ʻಚಿಬ್ಬಲು ಬಡಿಯುವುದುʼ ಎನ್ನುವುದು ಜನಿಸಿದ ಮಗುವಿನ ಲಿಂಗ ಯಾವುದು ಎಂಬುದನ್ನು ಸಾರಲು ಹಿಂದಿನವರು ಬಳಸುತ್ತಿದ್ದ ಮಾತುಗಳು; ಮೊದಲಿನದು ಗಂಡು ಹಾಗೂ ಎರಡನೆಯದು ಹೆಣ್ಣು ಮಗು ಜನನವಾಯಿತೆಂಬುದರ ಸೂಚನೆ. ಕಳೆದ ಫೆಬ್ರವರಿಯಲ್ಲಿ ಮಂಡ್ಯದ ಹೈಕಳು ಮದುವೆಗೆ ಹೆಣ್ಣು ಕರುಣಿಸು ಎಂದು ಮಾಯಕಾರ ಮಾದೇವನಿಗೆ ಹರಕೆ ಒಪ್ಪಿಸಲು ನಡೆಸಿದ ಪಾದಯಾತ್ರೆಯು ಚಿಬ್ಬಲು ಬಡಿಯುವುದು ಕಡಿಮೆಯಾಗಿದ್ದರ ಪರಿಣಾಮ. ಬರುವ ಜನವರಿಯಲ್ಲಿ ಇಂಥದ್ದೇ ಇನ್ನೊಂದು ಪಾದಯಾತ್ರೆ ನಡೆಯಲಿದೆ. ಅವರಿಗೆ ಗೊತ್ತಿದೆಯೋ ಇಲ್ಲವೋ, ಹೆಣ್ಣು ಸಿಗದೆ ಇರಲು ಕಾರಣ ನಾಗರಿಕರು ಎನ್ನಿಸಿಕೊಳ್ಳುವ […]

ಬೆಳಕಿನಲಿ ಪ್ರಕಾಶಿಸುವ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’

ಶಾಂತಾರಾಮ ನಾಯಕ, ಹಿಚಕಡ ಹಸಿರು ಸಿರಿಯ ಕಣಜ ಅಚವೆಯ ಸುಂದರ ಪರಿಸರದ ರಸ ರೋಮಾಂಚನಗೊಳಿಸುವ ವಿಭೂತಿ ಜಲಪಾತದ ಧುಮ್ಮಿಕ್ಕುವ ಬೆಳ್ನೊರೆಯ ಜಲಧಾರೆಯ ನಡುವಿಂದ ಕವಿ ಫಾಲ್ಗುಣ ಗೌಡರ ಕಾವ್ಯಧಾರೆ ಹರಿದು ಬಂದು ಓದುಗರ ಮನ ತಣಿಸಿದೆ. ಕಾವ್ಯ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ನಾಡಿನ ಹೆಮ್ಮೆಯ ಕವಿ ಪ್ರಿಯ ಜಯಂತ ಕಾಯ್ಕಿಣಿಯವರು ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನಕ್ಕೆ ಮನ್ನುಡಿಯ ಕಿರೀಟ ತೊಡಿಸಿ ‘ಬಿಡುಗಡೆ ಮಾಡಿ ತುಂಬಾ ಪ್ರೀತಿ ಅಭಿಮಾನದಿಂದ ಮುನ್ನುಡಿಯ ಶಿಫಾರಸು ನೀಡಿರುವರು. ಅದು ಒಂದು ಮೋಹಕ […]

ನೋಟವೊಂದೆ ಸಾಕು

ಮಾಧವಿ ಭಂಡಾರಿ ಕೆರೆಕೋಣ ಬಿಸಿಲ ಜಳ ಜಾಸ್ತಿಯಾದಂತೆ ರೈಲಿನ ಹೊರಗಡೆಯಿಂದ ಕಿತ್ತ ಕಣ್ಣನ್ನು ಪುಸ್ತಕದಲ್ಲಿ ನೆಟ್ಟೆ. ಎದುರಿನ ಬರ್ತ್‍ನ ಕಿಟಕಿ ಸೀಟ್ ಖಾಲಿಯಾಗೇ ಇತ್ತು. ಯಾರೋ ಕುಳಿತು ಎದ್ದುದರ ಗುರುತಾಗಿ ಒಂದು ನ್ಯೂಸ್ ಪೇಪರ್ ಅಲ್ಲಿ ಇತ್ತು. ಎತ್ತಿ ಒಗೆಯುವ ಬಸ್ಸಿನಲ್ಲೇ ಓದುವ ನನಗೆ ರೈಲು ಆರಾಮ ಖುರ್ಚಿಯಲ್ಲಿ ಕುಳಿತಂತೆ ಭಾಸವಾಯಿತು. ಓದು ನಿರಾತಂಕವಾಗಿ ಸಾಗಿತು. ಒಂದಿಷ್ಟು ಸಮಯದ ನಂತರ ಧಡಕ್ಕನೆ ಯಾರೋ ಬಂದು ಕುಳಿತ ಸದ್ದು ನನ್ನ ಧ್ಯಾನಸ್ಥ ಓದಿಗೆ ಭಂಗ ತಂದರೂ ಒಂದು ಕ್ಷಣ […]

ದಂಡೆ ಹೂ

ಎಂ.ಜಿ ತಿಲೋತ್ತಮೆ, ಭಟ್ಕಳ ಸೆರಗ ತುಂಬಾ ಕೊಯ್ದು ತರುತ್ತಿದ್ದ ಹೂ ಮಾಲೆಯಾಗಿಸಿ ಬಿಡುತ್ತಿದ್ದಳು ಇಲ್ಲ ದಂಡೆಯಾಗುತ್ತಿದ್ದವು ಅವಳ ಬೆರಳುಗಳಿಗಷ್ಟೇ ಗೊತ್ತು ಎನ್ನುವಷ್ಟು ನಾಜೂಕು ದಾರ ಮತ್ತು ಹೂಗಳ ನಡುವೆ ಸಲೀಸಾಗಿ ದಂಡೆ ಮೂಡುತ್ತಿದ್ದವು ತುಂಬಾ ಬಿಗಿದರೆ ನಲುಗುವುದೆಂಬ ಭಯ ಸೂಕ್ಷ್ಮ ಹೆಣಿಗೆ ಅಪ್ಪಟ ಕಲೆ ಅವಳಿಗೆ ಮಾತ್ರ ಕರಗತ ತೋಟದ ತುಂಬಾ ರಂಗೇರುತ್ತಿದ್ದ ಅಬ್ಭಲಿ ಮುತ್ತುಮಲ್ಲಿ ಸೇವಂತಿಗೆ ನೀರು ಸೇದು ಹೋಯ್ದಾಗಲೆಲ್ಲಾ ಗಿಡಗಳ ಉಸಿರಾಟ ಅವಳಿಗೆ ಕೇಳಿಸುತ್ತಿತ್ತು ದಂಡೆ ಹೂವು ಅವಳ ಕೈ ಬಳೆ ಸದ್ದು ಮೂಗುತಿಯ […]

ಮೀರುವುದು ಕ್ರಿಯಾಪದ

 – ವೆಂಕಟ್ರಮಣ ಗೌಡ ಬರೆಯುವುದಿದೆ ಕಥೆಯೊಂದನು ಅವಳೆದೆಯೊಳಗಿನ ಹೂದೋಟವ ತಂದಿರಿಸಿ ಸುಡು ಹಗಲಲಿ ಮೆರೆಸಿ ಮಧುರಾತ್ರಿಯನು ಎಲ್ಲ ಮರೆಯುವಂತೆ ಆಹಾ ಎನ್ನಬೇಡ ರಮ್ಯತೆಯ ಅಧಿದೇವತೆಯೆ, ಮರೆಯುವುದೆಂದರೆ ಇಲ್ಲಿ ನೆನಪುಗಳ ಅಗ್ನಿಪರೀಕ್ಷೆ ಕೇಳು ರಮ್ಯದೇವತೆಯೆ, ಸುಂದರ ಸುಳ್ಳುಗಳ ಹೊದ್ದ ನಿನ್ನಂತಲ್ಲ ಅವಳು ಅವಳೊಳಗಿವೆ ನಿನ್ನ ಬಿನ್ನಾಣವನೆಲ್ಲ ಬಯಲಿಗಿಳಿಸುವ ನಿಗಿನಿಗಿ ಕ್ರಿಯಾಪದಗಳು ಕಥೆ ಬರೆಯುವುದೆಂದರೂ ಹೀಗೆಯೇ ಕ್ರಿಯಾಪದಗಳ ನಡುವೆ ಕನಲುವುದು ಮೊಗೆಮೊಗೆದು ನೆನಪುಗಳೊಳಗೆ ಬಂಧಿಯಾಗುವುದು ವಿಫಲ ಪ್ರೇಮದ ಅಸಹನೀಯತೆಯಲ್ಲಿ ಬೆಳಗುವುದು ಬರೆಯುವುದಿದೆ ಕಥೆಯೊಂದನು ಬರೆಯಲನುವಾಗುವುದನ್ನೇ ಕಾದು ಮೀರುವುದನ್ನು

Back To Top