ಪಾರಿವಾಳಗಳ ಪ್ರೀತಿಯಿಂದ ರೋಗಕ್ಕೆ ಆಹ್ವಾನ
ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಗುಬ್ಬಚ್ಚಿಗಳು ಕಾಣೆಯಾಗಿವೆ. ಮಾಲಿನ್ಯ, ಆಹಾರದ ಕೊರತೆ, ವಾಹನ ದಟ್ಟಣೆ ಇತ್ಯಾದಿ ಇದಕ್ಕೆ ಕಾರಣ. ಗುಬ್ಬಿಗಳ ಜಾಗವನ್ನು ಪಾರಿವಾಳಗಳು ಆಕ್ರಮಿಸಿಕೊಂಡಿದ್ದು, ಗುಬ್ಬಚ್ಚಿಗಳ ಅವನತಿಗೆ ಕಾರಣವಾದ ಅಂಶಗಳೇ ಪಾರಿವಾಳಗಳಿಗೆ ಪೂರಕವಾಗಿ ಪರಿಣಮಿಸಿವೆ. ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಮಾನವ ಹಸ್ತಕ್ಷೇಪ ಮತ್ತು ಪರಿಸರ ಮಾಲಿನ್ಯ ಕಾರಣ. ನಗರೀಕರಣ, ಆಧುನೀಕರಣ ಮತ್ತು ಅರಣ್ಯನಾಶದಿಂದ ಗುಬ್ಬಿಗಳ ಸಾಂಪ್ರದಾಯಿಕ ಆವಾಸಸ್ಥಾನ ನಾಶವಾಗಿದೆ; ಆಧುನಿಕ ಕಟ್ಟಡ ಗಳ ವಿನ್ಯಾಸದಿಂದ ಗುಬ್ಬಚ್ಚಿಗಳು ಗೂಡು ಕಟ್ಟಲು ತಾವು ಇಲ್ಲವಾಗಿದೆ. ಕೀಟನಾಶಕಗಳ ವ್ಯಾಪಕ ಬಳಕೆಯಿಂದ ಆಹಾರ […]
ರಾಜ್ಯಪಾಲರ ʻಪಾಕೆಟ್ ವಿಟೋʼ ಅಧಿಕಾರ ಅಂತ್ಯ
ಸುಪ್ರೀಂ ಕೋರ್ಟ್ನ ಒಂದು ಮಹತ್ವದ ತೀರ್ಪು ರಾಜ್ಯಪಾಲರ ʻಪಾಕೆಟ್ ವಿಟೋ’ವನ್ನು ಕೊನೆಗೊಳಿಸಿದೆ. ಆದರೆ, ಕಪಾಳಮೋಕ್ಷದಿಂದ ಬುದ್ದಿ ಕಲಿಯದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಮದುರೈನ ಕಾಲೇಜೊಂ ದರಲ್ಲಿ ʻಜೈ ಶ್ರೀರಾಂʼ ಎಂದು ಮೂರು ಬಾರಿ ಘೋಷಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿ, ವಿವಾದ ಸೃಷ್ಟಿಸಿದ್ದಾರೆ. ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆಯಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ. ಬಿಜೆಪಿ ಆಯ್ಕೆಯಾದ ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿ, ದ್ರಾವಿಡ ಮುನ್ನೇತ್ರ ಕಳಗಂ ಸರ್ಕಾರದ ಮಗ್ಗಲುಮುಳ್ಳಾಗಿ ಪರಿಣಮಿಸಿದ್ದರು. ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ಹೊರನಡೆದಿದ್ದು ಸೇರಿದಂತೆ, ಹಲವು […]
ʻಗಂಟೆ ಬಾರಿಸುತ್ತಿರುವುದು ಒಬ್ಬರಿಗೆ ಮಾತ್ರವಲ್ಲ, ಎಲ್ಲರಿಗೂʼ
ಸಂಸತ್ತು ವಕ್ಫ್ ಮಸೂದೆಯನ್ನು ಅಂಗೀಕರಿಸಿದೆ. ದೇಶದ ಕೆಲವೆಡೆ ಪ್ರತಿಭಟನೆ ವ್ಯಕ್ತವಾಗಿದೆ ಹಾಗೂ ವ್ಯವಸ್ಥೆ ಕಠೋರವಾಗಿ ದಮನಕ್ಕೆ ಮುಂದಾಗಿದೆ. 11 ವರ್ಷದ ಬಳಿಕ ನಾಗ್ಪುರದಲ್ಲಿರುವ ಆರ್ಎಸ್ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ʻಆರ್ಎಸ್ಎಸ್ ಆಲದ ಮರʼ ಎಂದು ಶ್ಲಾಘಿಸಿದ್ದಾರೆ. ಬಿಜೆಪಿ ಆಡಳಿತವಿರುವ ರಾಜ್ಯಗಳು ಅತ್ಯಂತ ಉತ್ಸಾಹದಿಂದ ವಕ್ಫ್ ಕಾನೂನು ಜಾರಿಗೆ ಮುಂದಾಗಿವೆ. ಮಸೂದೆ ಕುರಿತು ಕೇರಳದ ಕಯಂಕುಲಂ ಮೂಲದ ದೆಹಲಿ ವಾಸಿ, ಕೇರಳ ಕ್ಲಬ್ ಅಧ್ಯಕ್ಷ ಎ.ಜೆ. ಫಿಲಿಪ್ ಎಂಬುವರು ಸಚಿವ ಕಿರಣ್ ರಿಜಿಜು […]
ಕ್ಷೇತ್ರ ಮರುವಿಂಗಡಣೆ ಎಂಬ ಉರುಳು
ನ್ಯಾಯಸಮ್ಮತ ಕ್ಷೇತ್ರ ಮರುವಿಂಗಡಣೆ ಕುರಿತ ಜಂಟಿ ಕ್ರಿಯಾ ಸಮಿತಿ(ಜೆಎಸಿ) ಸಭೆ ಚೆನ್ನೈಯಲ್ಲಿ ಮಾರ್ಚ್ 22ರಂದು ನಡೆದಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್, ತೆಲಂಗಾಣದ ರೇವಂತ್ ರೆಡ್ಡಿ, ಪಂಜಾಬಿನ ಭಗವಂತ್ ಮಾನ್, ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್, ಆಂಧ್ರಪ್ರದೇಶದ ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಹಾಗೂ ವಿಡಿಯೋ ಕಾನ್ಫೆರೆನ್ಸ್ ಮೂಲಕ ಒಡಿಷಾ ಮಾಜಿ ಸಿಎಂ ನವೀನ್ ಪಟ್ನಾಯಕ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಲೋಕಸಭೆ ಕ್ಷೇತ್ರಗಳ ಸಂಖ್ಯೆ ಹೆಚ್ಚಳವನ್ನು 25 ವರ್ಷ ಕಾಲ ಅಮಾನತಿನಲ್ಲಿ ಇರಿಸಬೇಕು ಎಂದು ಸಭೆ ಒತ್ತಾಯಿಸಿದೆ. […]
ನರೇಗಾಕ್ಕೆ 20: ವೇತನ ಬಾಕಿ, ಅನುದಾನ ವಿಳಂಬ ಹೆಚ್ಚಳ
ಗ್ರಾಮೀಣರ ಉಪಾದಾಯ ಮೂಲವಾದ ನರೇಗಾ(ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಕ್ಕೆ ಈಗ 20ರ ಹರೆಯ. ಗಟ್ಟಿಯಾಗಿ ಬೆಳೆದು ಗ್ರಾಮೀಣರು-ಕೃಷಿ ಕಾರ್ಮಿಕರ ಕೈ ಹಿಡಿಯಬೇಕಿದ್ದ ಈ ಕಾರ್ಯಕ್ರಮವು ಆಡಳಿಶಾಹಿಯ ನಿರ್ಲಕ್ಷ್ಯದಿಂದ ದಿನೇದಿನೇ ಬಲಗುಂದುತ್ತಿದೆ. ಕೃಷಿ ಸಂಕಷ್ಟ, ಹವಾಮಾನ ಬದಲಾವಣೆಯಿಂದ ಆದ ವ್ಯತ್ಯಯ ಹಾಗೂ ಆದಾಯ ಸ್ಥಗಿತಗೊಂಡಿರುವ ಗ್ರಾಮೀಣರು ನಗರ ಪ್ರದೇಶಗಳಿಗೆ ವಲಸೆ ಬರುತ್ತಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ಅಥವಾ ಎಂಜಿ ನರೇಗಾದ ಮೊದಲ ಹೆಸರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ […]
ಪಾನಿಪೂರಿ ತಿನ್ನಲು ಹಿಂದಿ ಕಲಿಯಬೇಕೇ?
ತಮಿಳುನಾಡು ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ) ಮತ್ತು ಪಿಎಂಶ್ರೀ (ಪ್ರಧಾನಮಂತ್ರಿ ಸ್ಕೂಲ್ಸ್ಫಾರ್ರೈಸಿಂಗ್ಇಂಡಿಯ) ಯೋಜನೆಗಳಿಗೆ ಅನುಮತಿಸದ ಕಾರಣ ಒಕ್ಕೂಟ ಸರ್ಕಾರವು ಸರ್ವ ಶಿಕ್ಷಾ ಅಭಿಯಾನದ ಅನು ದಾನವನ್ನು ತಡೆಹಿಡಿದಿದೆ. ಇದು ಡಿಎಂಕೆ ಸರ್ಕಾರ ಹಾಗೂ ಎನ್ಡಿಎ-3 ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಎನ್ಡಿಎ ಸರ್ಕಾರ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ಹೇರುತ್ತಿದೆ ಎಂದು ತಮಿಳುನಾಡು ದೂರಿದೆ. ಲೋಕಸಭೆಯಲ್ಲೂ ಈ ಸಂಬಂಧ ಟೀಕೆ-ಪ್ರತಿಟೀಕೆ ನಡೆದಿದೆ. ಶಿಕ್ಷಣ ಸಚಿವ ಪ್ರಧಾನ್ಬಳಸಿದ ಪದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಡಿಎಂಕೆ ಸಂಸದರು ಕಲಾಪಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ತಮಿಳುನಾಡಿನಲ್ಲಿ ತ್ರಿಭಾಷಾ […]
ಅಣು ಶಕ್ತಿಯೆನ್ನುವ ಹುಲಿ ಸವಾರಿ
2025-26ರ ಆಯವ್ಯಯ ಭಾಷಣದಲ್ಲಿ ವಿತ್ತ ಸಚಿವೆ, ʼಅಣುಶಕ್ತಿ ಕಾಯಿದೆ(ಎಇಅ) ಮತ್ತು ಅಣು ಅವಘಡಗಳಿಗೆ ನಾಗರಿಕ ಹೊಣೆಗಾರಿಕೆ ಕಾಯಿದೆ(ಸಿಎಲ್ಎನ್ಡಿಎ)ಗೆ ತಿದ್ದುಪಡಿ ತರಲಾಗುವುದುʼ ಎಂದು ಘೋಷಿಸಿದರು; ಅಣು ಶಕ್ತಿ ಕ್ಷೇತ್ರಕ್ಕೆ 20,000 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಹೇಳಿದರು. ಅಣು ದುರಂತ ಸಂಭವಿಸಿದಲ್ಲಿ ಸ್ಥಾವರಗಳ ಉತ್ಪಾದಕರು-ಪೂರೈಕೆದಾರರ ಮೇಲೆ ಕನಿಷ್ಠ ಹೊಣೆಗಾರಿಕೆ ಹೊರಿಸುವ ಈ ಕಾಯಿದೆ ಮೇಲೆ ಅಮೆರಿಕದ ಅಣು ಸ್ಥಾವರಗಳ ಉತ್ಪಾದಕರು/ಸಾಧನ-ಸಲಕರಣೆಗಳ ಪೂರೈಕೆ ದಾರರು ಅಸಮಾಧಾನಗೊಂಡಿದ್ದಾರೆ. 2010ರ ಸಿಎಲ್ಎನ್ಡಿಎ ಕಾಯಿದೆಯು ಅಣುಶಕ್ತಿ ಉತ್ಪಾದನೆಗೆ ಖಾಸಗಿ ಕಂಪನಿಗಳಿಗೆ ಅವಕಾಶ ನೀಡುವುದಿಲ್ಲ. […]
ಯುಜಿಸಿ ತಿದ್ದುಪಡಿ ಪ್ರಸ್ತಾವ: ಕೇಂದ್ರೀಕರಣದ ಕರಾಳ ಶಾಸನ
ರಾಜ್ಯಪಾಲರು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾನಿಲಯ (ತಿದ್ದುಪಡಿ) ಮಸೂದೆ 2024 ಅನ್ನು ಸರ್ಕಾರಕ್ಕೆ ಹಿಂದಿರುಗಿಸಿ ದ್ದು, ಮಸೂದೆಯನ್ನು ಹಿಂಪಡೆಯಬೇಕು ಎಂದು ಸೂಚಿಸಿದ್ದಾರೆ. ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ವಿವಿ ಕುಲಪತಿಯಾಗಿ ಬದಲಿಸುವ ಈ ಪ್ರಯತ್ನ ವು ಸರ್ಕಾರ ಮತ್ತು ರಾಜಭವನದ ನಡುವಿನ ಸಂಘರ್ಷವನ್ನು ಹೆಚ್ಚಿಸಿದೆ. ರಾಜ್ಯದ ಎಲ್ಲ ವಿವಿಗಳಿಗೂ ಮುಖ್ಯಮಂತ್ರಿಯೇ ಕುಲಪತಿ ಆಗಬೇಕೆಂಬುದು ಸರ್ಕಾರದ ಆಶಯ. ಫೆ.19ರಂದು ಬೆಂಗಳೂರಿನಲ್ಲಿ ನಡೆದ ವಿವಿಧ ರಾಜ್ಯಗಳ ಉನ್ನತ ಸಚಿವರ ಸಮಾ ವೇಶದಲ್ಲಿ ಯುಜಿಸಿ(ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ) […]

