ಪೀಡೆನಾಶಕಗಳ ಅತಿಬಳಕೆ: ಆಹಾರ, ನೀರು ವಿಷಮಯ
ಕುಡಿಯುವ ನೀರು, ತಿನ್ನುವ ಆಹಾರ ಹಾಗೂ ಉಸಿರಾಡುವ ಗಾಳಿ ಮಲಿನಗೊಂಡು ವಿಷಮಯವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ದಿಲ್ಲಿ ಸೇರಿದಂತೆ ದೇಶದ ಬಹುತೇಕ ನಗರಗಳು ವಾಯುಮಾಲಿನ್ಯದಿಂದ ಬಳ ಲುತ್ತಿವೆ; ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಕುಡಿಯುವ ನೀರು ಚರಂಡಿ ನೀರಿನೊಂದಿಗೆ ಮಿಶ್ರಗೊಂಡು, 23 ಮಂದಿ ಮರಣ ಹೊಂದಿದ ಪ್ರಕರಣ ತೇಲುತ್ತಿರುವ ನೀರ್ಗಲ್ಲಿನ ಕಾಣುತ್ತಿರುವ ತುದಿಯಷ್ಟೇ. ಇದರೊಟ್ಟಿಗೆ ಕೃಷಿಯಲ್ಲಿ ಪೀಡೆನಾಶಕಗಳ ಅತಿ ಬಳಕೆ, ದುರ್ಬಳಕೆ ಹಾಗೂ ವಿನಾಕಾರಣ ಬಳಕೆಯಿಂದ ತಿನ್ನುವ ಆಹಾರ ಮತ್ತು ಅಂತರ್ಜಲ ವಿಷವಾಗಿ ಪರಿಣಮಿಸಿದೆ. ʻನಮ್ಮದು ಕೃಷಿ ಪ್ರಧಾನ ದೇಶʼ […]
ಹೋಗಿ ಬನ್ನಿ ಗಾಡ್ಗೀಳ್ ಸರ್…ನಮಸ್ಕಾರ
ಪಶ್ಚಿಮ ಘಟ್ಟದಲ್ಲಿ ಬೇಡ್ತಿ-ವರದಾ ಮತ್ತು ಅಘನಾಷಿನಿ-ವೇದಾವತಿ ನದಿ ಜೋಡಣೆ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಆಗುಂಬೆ ಸುರಂಗ, ಹೊನ್ನಾವರ ರೈಲು ಮಾರ್ಗ, ಕ್ಯಾಸಲ್ರಾಕ್-ಕುಲೆಂ ಜೋಡಿ ಹಳಿ ಮಾರ್ಗ, ಕೊಡಚಾದ್ರಿಗೆ ರೋಪ್ವೇ ಸೇರಿದಂತೆ ಹಲವು ಯೋಜನೆಗಳನ್ನು ಉದ್ದೇಶಿಸಲಾಗಿದೆ. ಇದೇ ಹೊತ್ತಿನಲ್ಲಿ ನದಿಗಳಿಗೂ ಜೀವಿಸುವ ಹಕ್ಕು ನೀಡಬೇಕೆಂದು ಆಗ್ರಹಿಸಿ, ಜನವರಿ 11ರಂದು ಶಿರಸಿಯಲ್ಲಿ ಜನ ಸಮಾವೇಶ ನಡೆದಿದೆ. ಪ್ರತಿಯಾಗಿ ಹಾವೇರಿಯಲ್ಲಿ ನದಿ ಜೋಡಣೆ ಪರವಾಗಿ ಸಮಾವೇಶ ನಡೆದಿದೆ. ಇದೆಲ್ಲದರ ನಡುವೆ ಪಶ್ಚಿಮ ಘಟ್ಟಕ್ಕಾಗಿ ತಮ್ಮ ಜೀವವನ್ನೇ ಸವೆಸಿದ್ದ ಮಾಧವ ಗಾಡ್ಗೀಳ್(ಮೇ […]
ಅರಾವಳಿ ಪರ್ವತಶ್ರೇಣಿ ಮೇಲೆ ಉದ್ಯಮದ ಕಾಕದೃಷ್ಟಿ
ಸುಪ್ರೀಂ ಕೋರ್ಟ್ ಡಿಸೆಂಬರ್ 29, 2025ರಂದು ಅರಾವಳಿಯ ಹೊಸ ವ್ಯಾಖ್ಯೆಗೆ ತಡೆ ನೀಡಿದೆ ಮತ್ತು ಈ ಸಂಬಂಧ ಅಧ್ಯಯನ ನಡೆಸಲು ಉನ್ನತಾಧಿಕಾರ ಸಮಿತಿ ರಚಿಸಬೇಕೆಂದು ಹೇಳಿದೆ. ಇದರಿಂದ ಬೀಸುವ ದೊಣ್ಣೆಯಿಂದ ಸದ್ಯಕ್ಕೆ ತಪ್ಪಿಸಿಕೊಂಡಂತಾಗಿದೆ. ಆದರೆ, ಪ್ರಶ್ನೆ ಇರುವುದು- ಪರಿಸರ ಮಂತ್ರಾಲಯದ ಅಧಿಕಾರಿಗಳು ನೀಡಿದ ವ್ಯಾಖ್ಯೆಯನ್ನು ನ್ಯಾಯಾಲಯ ಈಮೊದಲು ಒಪ್ಪಿದ್ದಾದರೂ ಏಕೆ? ನ್ಯಾಯಾಲಯಕ್ಕೆ ವಾಸ್ತವ ಸಂಗತಿ ತಿಳಿಸದೆ ಮುಚ್ಚಿಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ತನ್ನದೇ ಸಚಿವಾಲಯದ ಅಡಿ ಬರುವ ಭಾರತೀಯ ಅರಣ್ಯ ಸಮೀಕ್ಷೆ(ಎಫ್ಎಸ್ಐ)ಯ ಶಿಫಾರಸುಗಳನ್ನು ಕೂಡ ಪರಿಸರ ಸಚಿವಾಲಯ […]
ಸಂರಕ್ಷಣೆಯ ದಣಿವರಿಯದ ಧ್ವನಿ ಮೌನವಾಯಿತು
ಹವಾಮಾನ ಬದಲಾವಣೆ, ಯುದ್ಧ, ಸಂಪನ್ಮೂಲಗಳ ಬರಿದಾಗುವಿಕೆ ಸೇರಿದಂತೆ ಹೆಚ್ಚುತ್ತಿರುವ ಜಾಗತಿಕ ಬಿಕ್ಕಟ್ಟುಗಳ ನಡುವೆ ಸಂರಕ್ಷಣೆಗಾಗಿ ದಣಿವರಿಯದೆ ದುಡಿಯುತ್ತಿದ್ದ ಜೇನ್ ಗೂಡಾಲ್(91) ಇತ್ತೀಚೆಗೆ ಮೃತಪಟ್ಟರು. ಅವರ ದೀರ್ಘಕಾಲೀನ ಸಂರಕ್ಷಣೆ ಕಾರ್ಯಗಳು ಪ್ರಾಮುಖಿ(ಪ್ರೈಮೇಟ್) ಸ್ತನಿಗಳ ಅಧ್ಯಯನ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾದವು. ಚಿಂಪಾಂಜಿಗಳ ಜೀವನವಿವರಗಳನ್ನು ದಾಖಲಿಸಿ, ಬಹಿರಂಗಪಡಿಸಿದ ಅವರು ಆಧುನಿಕ ಜಗತ್ತಿಗೆ ಭರವಸೆಯ ಭಾಷೆಯೊಂದನ್ನು ನೀಡಿದರು. ಪ್ರಸಿದ್ಧ ಮಾನವಶಾಸ್ತ್ರಜ್ಞ ಲೂಯಿಸ್ ಸೇಮೋರ್ ಬಝೆಟ್ ಲೀಕಿ ಅವರ ಬಳಿ ಕೆಲಸ ಮಾಡಲು ನಿರ್ಧರಿಸಿ, ಜುಲೈ 1960ರಲ್ಲಿ ತಾಂಜಾನಿಯಾದ ತಾಂಗನಿಕಾ ಸರೋವರದ ತೀರದಲ್ಲಿರುವ ಗೊಂಬೆ […]
ಸಂರಕ್ಷಣೆ ಕಾಯಿದೆಗಳು ನಿಶ್ಶಕ್ತ : ಭ್ರಷ್ಟಾಚಾರ, ಉದ್ಯಮಕ್ಕೆ ಕಾಡುಗಳ ಬಲಿ
ಆಗುಂಬೆಯ ಅರಣ್ಯದಲ್ಲಿ ಕಾಳಿಂಗ ಸರ್ಪಗಳ ದುರ್ಬಳಕೆ ಬಹಿರಂಗಗೊಂಡು ಈಸಂಬಂಧ ದೂರು ಸಲ್ಲಿಕೆಯಾಗಿದ್ದರೂ, ಅರಣ್ಯ ಇಲಾಖೆ-ಸರ್ಕಾರ ಮೌನವಾಗಿವೆ; ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್)ಯ ದೇವದಾರಿ ಗಣಿ ವಿರುದ್ಧ ಗ್ರಾಮಸಭೆ ನಿರ್ಣಯ ಕೈಗೊಂಡಿದೆ. ಕರ್ನಾಟಕ ವಿದ್ಯುತ್ ನಿಗಮ ಯೋಜಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್(ಪಿಎಸ್ಪಿ) ಕುರಿತ ಸಾರ್ವಜನಿಕ ಅಹವಾಲು ಸಭೆಯಲ್ಲಿ ಯೋಜನೆ ವಿರುದ್ಧ ಸುಮಾರು 10 ಸಾವಿರ ಅಹವಾಲುಗಳು ಸಲ್ಲಿಕೆಯಾಗಿವೆ ಮತ್ತು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಜನ ಎಚ್ಚರಿಸಿದ್ದಾರೆ. ದೇಶದೆಲ್ಲೆಡೆ ಅರಣ್ಯಗಳು ಉದ್ಯಮಕ್ಕೆ, ಭ್ರಷ್ಟಾಚಾರಕ್ಕೆ ಬಲಿಯಾಗುತ್ತಿವೆ. ಸಂಪನ್ಮೂಲ ಸಮೃದ್ಧ ಛತ್ತೀಸ್ಗಢ ರಾಜ್ಯದಲ್ಲಿ […]
ಎಲ್ಲೆಲ್ಲೂ ಇರುವ ಅವಿನಾಶಿ ಪ್ಲಾಸ್ಟಿಕ್
ಸಾವು ಸಂಭವಿಸದ ಮನೆಗಳು ಇರಬಹುದು; ಆದರೆ, ಪ್ಲಾಸ್ಟಿಕ್ ಇಲ್ಲದ ಮನೆಗಳನ್ನು ಹುಡುಕುವುದು ಕಷ್ಟ ಎನ್ನುವಷ್ಟು ಅದು ಎಲ್ಲೆಡೆ ವ್ಯಾಪಿಸಿಬಿಟ್ಟಿದೆ. ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ಸಂಬಂಧ ಸ್ವಿಟ್ಜರ್ಲೆಂಡ್ನ ಜಿನೇವಾದಲ್ಲಿ ಇತ್ತೀಚೆಗೆ (ಆಗಸ್ಟ್ 5 ರಿಂದ ಆಗಸ್ಟ್ 14, 2025) ಸಮಾವೇಶವೊಂದು ನಡೆಯಿತು. ಆದರೆ, ಎರಡು ಭಾಗವಾಗಿ ಒಡೆದಿರುವ ಜಗತ್ತಿನಲ್ಲಿ ಒಮ್ಮತವಿಲ್ಲದೆ ಈ ಸಂಬಂಧ ಯಾವುದೇ ಒಪ್ಪಂದಕ್ಕೆ ಬರಲು ಆಗಲಿಲ್ಲ. ಜಿನೀವಾದಲ್ಲಿ ನಡೆದ ಅಂತರ ಸರ್ಕಾರ ಸಮಾಲೋಚನಾ ಸಮಿತಿಯ ಐದನೇ ಅಧಿವೇಶನ (ಐಎನ್ಸಿ-5.2)ದಲ್ಲಿ 184 ದೇಶಗಳು ಪಾಲ್ಗೊಂಡಿದ್ದವು. 70 ದೇಶಗಳ […]
ನಿಜ ನಾಗರಗಳು ಬಡವರನ್ನೇ ಕಚ್ಚುತ್ತವೆ…….
ಇಂಡಿಯ ಸೇರಿದಂತೆ ಕಡಿಮೆ-ಮಧ್ಯಮ ಆದಾಯದ ದೇಶಗಳಲ್ಲಿ ಹಾವು ಕಡಿತದಿಂದ ಉಂಟಾಗುವ ಸಾವು ಅತಿ ದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆ. ದೇಶದಲ್ಲಿ 2024ರಲ್ಲಿ 64,000 ಮಂದಿ ಮೃತಪಟ್ಟಿದ್ದಾರೆ. ಇದು ಜಗತ್ತಿನಲ್ಲಿ ಸಂಭವಿಸುತ್ತಿರುವ ಸಾವುಗಳಲ್ಲಿ ಶೇ.80. ಇದರಿಂದಾಗಿಯೇ ದೇಶವನ್ನು ಹಾವು ಕಡಿತದಲ್ಲಿ ʼಜಗತ್ತಿನ ರಾಜಧಾನಿʼ ಎಂದು ಹೆಸರಿಸಲಾಗಿದೆ. ಈ ಸಮಸ್ಯೆಯ ಮೂಲ-ಹಾವು, ಮಾನವ ಮತ್ತು ಪರಿಸರದ ನಡುವಿನ ಸಂಘರ್ಷ. ಇದು ಸಾಮಾಜಿಕ, ಆರ್ಥಿಕ, ಮಾನವಿಕ, ವೃತ್ತಿ ಸಂಬಂಧಿತ, ಪರಿಸರ ಹಾಗೂ ಧಾರ್ಮಿಕ ಆಯಾಮಗಳಿರುವ ಸಂಕೀರ್ಣ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್ಒ) […]
ಪಾರಿವಾಳಗಳ ಪ್ರೀತಿಯಿಂದ ರೋಗಕ್ಕೆ ಆಹ್ವಾನ
ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಗುಬ್ಬಚ್ಚಿಗಳು ಕಾಣೆಯಾಗಿವೆ. ಮಾಲಿನ್ಯ, ಆಹಾರದ ಕೊರತೆ, ವಾಹನ ದಟ್ಟಣೆ ಇತ್ಯಾದಿ ಇದಕ್ಕೆ ಕಾರಣ. ಗುಬ್ಬಿಗಳ ಜಾಗವನ್ನು ಪಾರಿವಾಳಗಳು ಆಕ್ರಮಿಸಿಕೊಂಡಿದ್ದು, ಗುಬ್ಬಚ್ಚಿಗಳ ಅವನತಿಗೆ ಕಾರಣವಾದ ಅಂಶಗಳೇ ಪಾರಿವಾಳಗಳಿಗೆ ಪೂರಕವಾಗಿ ಪರಿಣಮಿಸಿವೆ. ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಮಾನವ ಹಸ್ತಕ್ಷೇಪ ಮತ್ತು ಪರಿಸರ ಮಾಲಿನ್ಯ ಕಾರಣ. ನಗರೀಕರಣ, ಆಧುನೀಕರಣ ಮತ್ತು ಅರಣ್ಯನಾಶದಿಂದ ಗುಬ್ಬಿಗಳ ಸಾಂಪ್ರದಾಯಿಕ ಆವಾಸಸ್ಥಾನ ನಾಶವಾಗಿದೆ; ಆಧುನಿಕ ಕಟ್ಟಡ ಗಳ ವಿನ್ಯಾಸದಿಂದ ಗುಬ್ಬಚ್ಚಿಗಳು ಗೂಡು ಕಟ್ಟಲು ತಾವು ಇಲ್ಲವಾಗಿದೆ. ಕೀಟನಾಶಕಗಳ ವ್ಯಾಪಕ ಬಳಕೆಯಿಂದ ಆಹಾರ […]
ಹವಾಮಾನ ಬದಲಾವಣೆಯಿಂದ ವಿದ್ಯುತ್ ಕ್ಷೇತ್ರದಲ್ಲಿ ಬಿಕ್ಕಟ್ಟು
ಫೆಬ್ರವರಿ ಮಧ್ಯ ಭಾಗದಲ್ಲೇ ಸುಡು ಬಿಸಿಲು ನೆತ್ತಿ ಸುಡುತ್ತಿದೆ; ಬೆಂಗಳೂರಿನಲ್ಲಿ ಹಿಂಬಾಗಿಲ ಮೂಲಕ ಲೋಡ್ ಶೆಡ್ಡಿಂಗ್ ಪ್ರವೇಶಿ ಸಿದೆ. ದಿನಕಳೆದಂತೆ ಹವಾಮಾನ ಬದಲಾವಣೆಯ ಕುರುಹುಗಳು ಸ್ಷಷ್ಟವಾಗುತ್ತಿವೆ. ಮುಂಗಾರು ಆಗಮಿಸುವ ಜೂನ್ವರೆಗೆ ಭೂಮಿ ಬೆಂದು ಬವಣೆಗೆ ಕಾರಣವಾಗಲಿದೆ. ಚಂಡಮಾರುತಗಳು, ಇಡೀ ವರ್ಷದ ಮಳೆ ಕೆಲವೇ ದಿನಗಳಲ್ಲಿ ಸುರಿಯುವುದು, ಮೇಘಸ್ಪೋ ಟ, ಭೂಕಂಪ-ಭೂಕುಸಿತ ಹೆಚ್ಚಳ, ತೀವ್ರ ಸುಡು ಗಾಳಿ ಇತ್ಯಾದಿ ಸಂಭವಿಸುವಿಕೆ ಹೆಚ್ಚುತ್ತಿದೆ. ಪ್ರಾಕೃತಿಕ ಘಟನೆಗಳ ಮುನ್ಸೂಚನೆ ನೀಡುವಿಕೆ ಅಸಂಭವವಾಗುತ್ತಿದೆ. ಇತ್ತೀಚೆಗೆ ಪ್ರಕಟಗೊಂಡ ʻಕ್ಲೈಮೇಟ್ ರಿಸ್ಕ್ ಇಂಡೆಕ್ಸ್ 2025ʼ ಪ್ರಕಾರ, […]

