ನೀಟ್ ಎನ್ನುವುದು ಒಂದು ರಾಜಕೀಯ ಕಾರ್ಯಕ್ರಮ
2017ರಲ್ಲಿ ತಮಿಳುನಾಡು ಪಿಯು ಪರೀಕ್ಷೆಯಲ್ಲಿ 1,176(1,200) ಅಂಕ ಗಳಿಸಿದ ಎಸ್.ಅನಿತಾ ವೈದ್ಯೆಯಾಗುವ ಕನಸು ಕಂಡವರು. ಆದರೆ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯಲ್ಲಿ ಪಾಸ್ ಆಗಲಿಲ್ಲ. ಸಾಕಷ್ಟು ಹೋರಾಟದ ಬಳಿಕ ಆತ್ಮಹತ್ಯೆ ಮಾಡಿಕೊಂಡರು. ನೀಟ್ 720 ಅಂಕಗಳ 3 ಗಂಟೆ ಅವಧಿಯ ಪರೀಕ್ಷೆ. ಬಹು ಆಯ್ಕೆಯ ಪ್ರಶ್ನೆಗಳು ಇರುತ್ತವೆ. ತಪ್ಪು ಉತ್ತರಕ್ಕೆ ಅಂಕಗಳನ್ನು ಕಳೆಯಲಾಗುತ್ತದೆ. ಮೇ 5 ರಂದು ನಡೆದ ನೀಟ್ ಪರೀಕ್ಷೆಯಲ್ಲಿ 24,06,079 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಫಲಿತಾಂಶ ಬಂದಾಗ 67 ಮಂದಿ 720/720 ಅಂಕ ಗಳಿಸಿದರು. […]
ಹವಾಮಾನ ಬದಲಾವಣೆ ವಿರುದ್ಧ ರಕ್ಷಣೆಗೆ ಕಾನೂನಿಗೆ ಮುನ್ನುಡಿ
ಅಂಕೋಲಾ ಬಳಿ ಗುಡ್ಡ ಜರಿದು ನದಿಯಲ್ಲಿ ತೇಲಿಹೋದ ಮತ್ತು ಮಣ್ಣಿನಲ್ಲಿ ಮುಚ್ಚಿಹೋದ 11 ಮಂದಿಗೆ ಕಣ್ಣೀರಾಗೋಣ. 90 ಡಿಗ್ರಿ ಕೋನದಲ್ಲಿ ಗುಡ್ಡೆ ಕೆತ್ತಿ ರಸ್ತೆ ನಿರ್ಮಿಸಿದ ಗುತ್ತಿಗೆದಾರ- ಎಂಜಿನಿಯರ್ಗಳಿಗೆ ವಿಷಾದ ವ್ಯಕ್ತಪಡಿಸೋಣ. ಇಂಥ ಮಾನವ ಪ್ರೇರಿತ ಪರಿಸರ ದುರಂತಗಳ ನಡುವೆಯೇ ಹವಾಮಾನ ಬದಲಾವಣೆಯಿಂದ ಪಶ್ಚಿಮ ಘಟ್ಟಗಳು, ಹಿಮಾಲಯ, ವಿಂಧ್ಯ, ಅರಾವಳಿ ಮತ್ತಿತರ ಬೆಟ್ಟಸಾಲುಗಳ ಜೊತೆಗೆ ಮನುಷ್ಯರನ್ನೂ ಕಾಪಿಡಬಲ್ಲ ಸಣ್ಣದೊಂದು ಬೆಳಕಿನ ಕಿಂಡಿಯೊಂದು ಕಾಣಿಸಿಕೊಂಡಿದೆ. 2024-25ರ ಬಜೆಟ್ಗೆ ಮುನ್ನ ಮಂಡನೆಯಾದ ಆರ್ಥಿಕ ಸಮೀಕ್ಷೆ ಕೂಡ ಹವಾಮಾನ ಬದಲಾವಣೆ ಮತ್ತು […]
ಅತಿ ಶ್ರೀಮಂತರಿಗೆ ಅಧಿಕ ತೆರಿಗೆ ವಿಧಿಸಲು ಇದು ಸರಿಯಾದ ಕಾಲ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಮಂಡಿಸಿದ ಕೇಂದ್ರ ಬಜೆಟ್, ಜಿ-20ರ ಬ್ರೆಜಿಲ್ಅಧ್ಯಕ್ಷತೆಯಡಿ ಮುಂಚೂಣಿಗೆ ಬಂದಿರುವ ಐಶ್ವರ್ಯ ತೆರಿಗೆ ಹಾಗೂ ಅನಂತ್ಅಂಬಾನಿ ವಿವಾಹ-ಇವೆಲ್ಲವೂ ಪರಸ್ಪರ ಜೋಡಿಸಲ್ಪಟ್ಟ ಘಟನೆಗಳು. ಕಳೆದ ಸಾಲಿನ ಜಿ-20 ಸಮಾವೇಶದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿತ್ತು ಹಾಗೂ ಅದನ್ನು ಮೋದಿ ಅವರ ಅಭೂತಪೂರ್ವ ಸಾಧನೆ ಎಂಬಂತೆ ಬಿಂಬಿಸಲಾಯಿತು. ಈ ಸಂಬಂಧ ಸಮಾವೇಶದ ವೇಳೆ ಬಿಡುಗಡೆಯಾದ ದ ರಿಸರ್ಚ್ಅಂಡ್ಇನ್ಫರ್ಮೇಷನ್ಸಿಸ್ಟಮ್ಫಾರ್ಡೆವಲಪಿಂಗ್ಕಂಟ್ರೀಸ್ಪ್ರಕಟಿಸಿದ 171 ಪುಟಗಳ ಇ-ದಾಖಲೆ ʼದ ಗ್ರಾಂಡ್ಸಕ್ಸೆಸ್ಆಫ್ಜಿ-20 ಭಾರತ್ಪ್ರೆಸಿಡೆನ್ಸಿ: ವಿಷನರಿ ಲೀಡರ್ಶಿಪ್, ಇನ್ಕ್ಲೂಸಿವ್ಅಪ್ರೋಚ್ʼ ನಲ್ಲಿ ಸರ್ಕಾರಿ ಅಧಿಕಾರಿಗಳು/ಕೃಪಾಪೋಷಿತ ಲೇಖಕರು ಬರೆದ ಲೇಖನಗಳಿದ್ದು, […]
ನರನು ಕೊಲ್ಲಲು, ಹರನೂ ಕಾಯಲಾರನು
ವಯನಾಡಿನ ಮನುಷ್ಯ ನಿರ್ಮಿತ ಭೂಕುಸಿತದಲ್ಲಿ 231 ಮಂದಿ ಮೃತಪಟ್ಟಿದ್ದು, 130 ಮಂದಿ ನಾಪತ್ತೆಯಾಗಿದ್ದಾರೆ (ಆಗಸ್ಟ್ 13ರ ಮಾಹಿತಿ). ಈ ಭೀಕರ ದುರಂತದ ಬಳಿಕ ಪಶ್ಚಿಮ ಘಟ್ಟಗಳ ಸಂರಕ್ಷಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಆರು ರಾಜ್ಯಗಳಲ್ಲಿ ಹರಡಿಕೊಂಡಿರುವ ಈ ಪರ್ವತ ಶ್ರೇಣಿ ಈ ರಾಜ್ಯಗಳ ಜೀವದಾಯಿಯಾಗಿದ್ದರೂ, ತೀವ್ರ ಶೋಷಣೆಗೆ ಒಳಗಾಗಿದ್ದು, ಕೆಲವು ವರ್ಷಗಳಿಂದ ಉಗ್ರವಾಗಿ ಪ್ರತಿಕ್ರಿಯಿಸುತ್ತಿದೆ. ಪ್ರೊ. ಮಾಧವ ಗಾಡ್ಗೀಳ್ ಅವರು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ನೀಡಿದ್ದ ಅತ್ಯಂತ ನಿಖರ ಹಾಗೂ ವೈಜ್ಞಾನಿಕವಾಗಿ ಪರಿಪೂರ್ಣವಾಗಿದ್ದ ವರದಿಯನ್ನು ಜನರ […]
ಯುರೋಪಿನಲ್ಲಿ ಬಲಪಂಥೀಯರ ಪ್ರಾಬಲ್ಯ ಹೆಚ್ಚಳ
ಯುರೋ 2024 ಫುಟ್ಬಾಲ್ ಟೂರ್ನಿ ಆರಂಭಕ್ಕೆ ಮುನ್ನ ಫ್ರಾನ್ಸ್ ತಂಡದ ನಾಯಕ ಕೈಲಿಯನ್ ಎಂಬಾಪ್ಪೆ ಪತ್ರಿಕಾಗೋಷ್ಟಿಯಲ್ಲಿ, ʻತೀವ್ರವಾದಿಗಳು ಅಧಿಕಾರದ ಹೊಸ್ತಿಲಲ್ಲಿ ಇದ್ದಾರೆ. ನನ್ನ ಮೌಲ್ಯ ಅಥವಾ ನಮ್ಮ ಮೌಲ್ಯ ಗಳಿಗೆ ಹೊಂದಿಕೆಯಾಗದ ದೇಶವನ್ನು ಪ್ರತಿನಿಧಿಸಲು ನಾನು ಇಚ್ಛಿಸುವುದಿಲ್ಲ,ʼ ಎಂದು ಹೇಳಿದ್ದರು. ಇನ್ನೊಂದು ಹೆಜ್ಜೆ ಮುಂದೆ ಹೋದ ಜೊತೆ ಆಟಗಾರ ಮಾರ್ಕಸ್ ತುರಂ, ʻಫ್ರೆಂಚರು ಲಿ ಪೆನ್ ಅವರ ನ್ಯಾಷನಲ್ ರ್ಯಾಲಿ(ಎನ್ಆರ್)ಪಕ್ಷ ಬಲಗೊಳ್ಳದಂತೆ ನೋಡಿಕೊಳ್ಳಬೇಕು,ʼ ಎಂದು ಒತ್ತಾಯಿಸಿದ್ದರು. ನಮ್ಮಲ್ಲಿ ಒಬ್ಬನೇ ಒಬ್ಬ ಕ್ರೀಡಾಪಟು ಇಂಥ ಹೇಳಿಕೆ ನೀಡಿದ್ದನ್ನು, ಸರ್ವಾಧಿಕಾರಿ […]
ಬಲಪಂಥೀಯತೆ: ಒಂದು ಜಾಗತಿಕ ಪಿಡುಗು
ಇಂಡಿಯ ಸೇರಿದಂತೆ ಪ್ರಜಾಪ್ರಭುತ್ವವಿರುವ ದೇಶಗಳಿಗೆ ೨೦೨೪ ಸಂಕಷ್ಟದ ವರ್ಷವಾಗಲಿದೆಯೇ? ಜಗತ್ತಿನ ದೊಡ್ಡ ಪ್ರಜಾಪ್ರಭುತ್ವಗಳಾದ ಇಂಡಿಯ, ಅಮೆರಿಕ, ಬ್ರಿಟನ್, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಥೈವಾನ್ ಸೇರಿದಂತೆ ಹಲವು ದೇಶಗಳಲ್ಲಿ ಚುನಾವಣೆ ನಡೆಯಬೇಕಿದೆ. ಚುನಾವಣೆಗಳು ಆವರ್ತೀಯ ಪ್ರಕ್ರಿಯೆ ಎಂದು ಹೇಳಿಬಿಡಬಹುದು. ಆದರೆ, ಅಂದಾಜು 2 ಶತಕೋಟಿ ಜನರು ಪ್ರಜ್ಞಾಪೂರ್ವಕವಾಗಿ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದು, ಈ ಆಯ್ಕೆಗಳು ದೇಶದ-ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗುತ್ತವೆಯೇ ಎನ್ನುವುದು ಪ್ರಶ್ನೆ. ಮತ ಚಲಾವಣೆಯಂಥ ಸಹಜ ಪ್ರಕ್ರಿಯೆಯ ಫಲಿತಾಂಶಗಳು ತಾರ್ಕಿಕವಾಗಿರುತ್ತವೆ ಎಂದು ಭಾವಿಸಬೇಕಿಲ್ಲ. ಅಮೆರಿಕದ ಪ್ರಜಾಸತ್ತೆ […]
ಡಿಜಿಟಲ್ ನಿರಂಕುಶ ರಾಜ್ಯಕ್ಕೆ ಮುನ್ನುಡಿ
ಡಿಜಿಟಲ್ ನಿರಂಕುಶ ರಾಜ್ಯಕ್ಕೆ ಮುನ್ನುಡಿ ಚಳಿಗಾಲದ ಅಧಿವೇಶನದ ಕಡೆಯ ದಿನ ಪ್ರತಿಪಕ್ಷಗಳ ಗೈರುಹಾಜರಿಯಲ್ಲಿ ಟೆಲಿಕಾಂ ಮಸೂದೆ ೨೦೨೩ ಅಂಗೀಕಾರಗೊಂಡಿತು. ಬಿಜೆಪಿ ಸಂಸದ ಸುಶೀಲ್ ಮೋದಿ, ರಾಷ್ಟ್ರೀಯ ಭದ್ರತೆಗೆ ಮತ್ತು ಸ್ವಾಭಾವಿಕ ಅವಘಡಗಳ ಸಂದರ್ಭದಲ್ಲಿ ಟೆಲಿಕಾಂ ಸೇವೆಗಳನ್ನು ಸರ್ಕಾರ ತಾತ್ಕಾಲಿಕವಾಗಿ ಸುಪರ್ದಿಗೆ ಪಡೆಯುವುದನ್ನು ಮತ್ತು ಉಪಗ್ರಹ ತರಂಗಾಂತರವನ್ನು ಹರಾಜು ಮಾಡದೆ ವಿತರಿಸುವುದನ್ನು ಸಮರ್ಥಿಸಿಕೊಂಡರು. ಟೆಲಿಕಾಂ ಟವರ್ಗಳ ಸಂಖ್ಯೆ ೨೦೧೪ರಲ್ಲಿ ೬ ಲಕ್ಷ ಇದ್ದದ್ದು ೨೫ ಲಕ್ಷಕ್ಕೆ ಹಾಗೂ ಬ್ರಾಡ್ಬ್ಯಾಂಡ್ ಬಳಕೆದಾರರ ಸಂಖ್ಯೆ ೧.೫ ಕೋಟಿಯಿಂದ ೮೫ ಕೋಟಿಗೆ ಹೆಚ್ಚಳಗೊಂಡಿದೆ […]
ಹೆಣ್ಣು ಭ್ರೂಣಗಳ ಹತ್ಯೆ ನಿರಂತರ, ನಿರಾತಂಕ
ʻಗಂಗಾಳ ಹೊಡೆಯುವುದುʼ, ʻಚಿಬ್ಬಲು ಬಡಿಯುವುದುʼ ಎನ್ನುವುದು ಜನಿಸಿದ ಮಗುವಿನ ಲಿಂಗ ಯಾವುದು ಎಂಬುದನ್ನು ಸಾರಲು ಹಿಂದಿನವರು ಬಳಸುತ್ತಿದ್ದ ಮಾತುಗಳು; ಮೊದಲಿನದು ಗಂಡು ಹಾಗೂ ಎರಡನೆಯದು ಹೆಣ್ಣು ಮಗು ಜನನವಾಯಿತೆಂಬುದರ ಸೂಚನೆ. ಕಳೆದ ಫೆಬ್ರವರಿಯಲ್ಲಿ ಮಂಡ್ಯದ ಹೈಕಳು ಮದುವೆಗೆ ಹೆಣ್ಣು ಕರುಣಿಸು ಎಂದು ಮಾಯಕಾರ ಮಾದೇವನಿಗೆ ಹರಕೆ ಒಪ್ಪಿಸಲು ನಡೆಸಿದ ಪಾದಯಾತ್ರೆಯು ಚಿಬ್ಬಲು ಬಡಿಯುವುದು ಕಡಿಮೆಯಾಗಿದ್ದರ ಪರಿಣಾಮ. ಬರುವ ಜನವರಿಯಲ್ಲಿ ಇಂಥದ್ದೇ ಇನ್ನೊಂದು ಪಾದಯಾತ್ರೆ ನಡೆಯಲಿದೆ. ಅವರಿಗೆ ಗೊತ್ತಿದೆಯೋ ಇಲ್ಲವೋ, ಹೆಣ್ಣು ಸಿಗದೆ ಇರಲು ಕಾರಣ ನಾಗರಿಕರು ಎನ್ನಿಸಿಕೊಳ್ಳುವ […]
ಚಿಕ್ಕಮಗಳೂರಿನಲ್ಲಿ ಭಾರೀ ಮಳೆ: ಸೌಂದರ್ಯ ಹೆಚ್ಚಿಸಿಕೊಂಡ ಚಾರ್ಮಾಡಿ ಘಾಟ್
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸತತ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಹಂತದಲ್ಲಿದೆ. ಕಳಸ ಪಟ್ಟಣದಿಂದ ಹೊರನಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹೆಬ್ಬಾಳ ಸೇತುವೆ ಇದಾಗಿದ್ದು, ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಭದ್ರಾ ನದಿ ಮೈದುಂಬಿ ಹರಿಯುತ್ತಿದೆ.ಕುದುರೆಮುಖ ಸುತ್ತಮುತ್ತ ಬಿಟ್ಟು ಬಿಡದೆ ಮುಂಗಾರು ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಪಶ್ಚಿಮ ಘಟ್ಟ ನದಿಗಳು ಜೀವ ಕಳೆ ಪಡೆದಿವೆ. ಆದರೆ ಧಾರಾಕಾರ ಮಳೆಯಿಂದಾಗಿ ಮಲೆನಾಡು ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸೌಂದರ್ಯದ […]