Category: ಹಂಗಾಮ

ಹಂಗಾಮ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ದನಿಗಳನ್ನು ಬೇರೆ ಬೇರೆ ಆಯಾಮಗಳ ನೆಲೆಯಿಂದ ಒಂದೆಡೆಗೆ ತರುವ ಉದ್ದೇಶದ್ದು. ಕವಿತೆ, ಕಥೆ, ಪ್ರಬಂಧ, ಪುಸ್ತಕ ಪ್ರಸ್ತಾಪ ಅಲ್ಲದೆ, ಮಹತ್ವದ ಅಭಿಪ್ರಾಯಗಳ ಮಂಡನೆ ಈ ವಿಭಾಗದಲ್ಲಿರುತ್ತದೆ.

ಅಹಮದನ 407

ಅಂಜನಾ ಹೆಗಡೆ ಸಾವಿತ್ರಕ್ಕ ಎರಡೇ ದೋಸೆ ತಿಂದು ಚಹಾವನ್ನೂ ಕುಡಿಯದೇ ಗಡಿಬಿಡಿಯಲ್ಲಿ ಬಚ್ಚಲುಮನೆಗೆ ಹೋಗಿ ಬಿಸಿನೀರಿನಲ್ಲಿ ಕೈ ತೊಳೆದು ಸೆರಗಿನಿಂದ ಒರೆಸಿಕೊಳ್ಳುತ್ತ ಜಗಲಿಗೆ ಓಡಿದಳು. ರಾಮಣ್ಣ ಎಡಗೈಯಲ್ಲಿ ತೊಗರು ತುಂಬಿದ ಚೊಂಬನ್ನು ಹಿಡಿದುಕೊಂಡು ಹಳೆಯ ಬ್ರಷ್ಶಿನಿಂದ ಅಡಿಕೆಚೀಲಗಳ ಮೇಲೆ ಸೊಸೈಟಿಯ ನಂಬರನ್ನೂ, ಪರಮಣ್ಣನ ಹೆಸರನ್ನೂ ಬರೆದು ಒಂದೊಂದೇ ಚೀಲವನ್ನು ಎಳೆದು ಪಕ್ಕಕ್ಕಿಡುತ್ತಿದ್ದ. ಪರಮಣ್ಣ ಮಾತ್ರ ಆರಾಮಾಗಿ ನಾಲ್ಕೈದು ದೋಸೆಗಳನ್ನು ಬೆಲ್ಲ-ತುಪ್ಪದಲ್ಲದ್ದಿ ತಿಂದು, ಒಂದು ಲೋಟ ಚಹಾ ಕುಡಿದು ಕವಳದ ಬಟ್ಟಲು ಹಿಡಿದು ಆರಾಮಕುರ್ಚಿಯಲ್ಲಿ ಕಾಲಮೇಲೆ ಕಾಲು ಹಾಕಿ […]

ಈ ರಂಗವಲ್ಲಿಯಾಟ

ದಿವ್ಯಾ ಮಂಡೀರ   ಸಾವು ನೆಮ್ಮದಿಯಂತೆ ಸುದೀರ್ಘ ಕತ್ತಲಲ್ಲಿ ನಿಶ್ಚಲವಾಗಿ ಮಲಗುವುದಂತೆ ವಾಸ್ತವತೆಯ ಭೀಕರ ಕತ್ತಲನ್ನು ಮರೆತು ಪ್ರೀತಿ, ಬದುಕು, ಹರಯ, ದ್ವೇಷ-ರೋಷಗಳ ನಡುವೆ ಒಮ್ಮೆ ಸತ್ತು ನೋಡು ಎಂದಿದ್ದ ಕವಿಯನ್ನೊಮ್ಮೆ ಕೇಳಬೇಕೆನ್ನಿಸಿದೆ * ಇದು ಹೊಲಿಗೆ ಸಂಬಂಧಗಳು ಇಲ್ಲಿ ಬದುಕಬೇಕು ನೋವು, ನಿರಾಸೆ, ಭರವಸೆ, ಕನಸುಗಳನ್ನು ಕೇಳಿಕೊಳ್ಳಬೇಕು ಈ ದ್ವಂದ್ವಗಳಿಗೆ ಒಂದಿಷ್ಟು ಉತ್ತರ ಜಡ್ಡುಗಟ್ಟಿದ ಕಲ್ಲುಬಂಡೆಗೆಲ್ಲಿ ತಿಳಿಯಬೇಕು ಕಲ್ಲುಬಾಳೆಯ ನವಿರು ಭಾವಗಳು ರಾತ್ರಿಗಳು ಖಾಲಿಯಾಗುತ್ತಲೇ ಇವೆ ಎದೆಯೊಳಗಿನ ಸಣ್ಣ ಭಯಕ್ಕೆ ಹರೆಯದ್ದು ನಿರ್ಲಿಪ್ತ ನಗು * […]

ಮಲೆನಾಡಿನ ಕಾಫಿ ಬೆಳೆಗಾರ ಸೋತದ್ದೆಲ್ಲಿ ಮತ್ತು ಬೆಲೆಗಳ ಮೇಲೆ ಸರ್ಕಾರಿ ನಿಯಂತ್ರಣ ಯಾಕೆ ಬೇಕು?

ಒಂದು ಕಾಲಕ್ಕೆ ಅತ್ಯಂತ ಪ್ರತಿಷ್ಟಿತ ಹಾಗೂ ಸಧೃಡ ಕೃಷಿಯೆಂದು ಹೆಮ್ಮೆ ಪಡುತ್ತಿದ್ದ  ಕಾಫಿ ಬೆಳೆಗಾರರೆಂದರೆ ಐಷಾರಾಮೀ ದೊರೆಗಳೆಂದು ಬೇರೆಯವರು ಹೇಳುತ್ತಿದ್ದ  ಮಲೆನಾಡಿನ ಕಾಫಿ ಬೆಳೆ ಸೋತದ್ದೆಲ್ಲಿ. ಸುಮಾರಾಗಿ ಎಂಬತ್ತರ ದಶಕದವರೆಗೂ ಕಾಫಿಯ ಸ್ಥಿತಿ ಹಾಗೇ ಇತ್ತು. ಆಂತರಿಕ ಬಳಕೆ ಬಹಳ ಕಡಿಮೆ ಇದ್ದು ಅದು ವರ್ಷಕ್ಕೆ ಐವತ್ತು ಸಾವಿರ ಟನ್ ಮೀರುತ್ತಿರಲಿಲ್ಲ. ಅದರಲ್ಲೂ ತಮಿಳುನಾಡೇ ಮುಖ್ಯ ಗ್ರಾಹಕ ರಾಜ್ಯವಾಗಿತ್ತು. ಉಳಿದ ಎಲ್ಲಾ ಕಾಫಿ ರಫ್ತಾಗುತ್ತಿತ್ತು. ಅಂದಿನ ಕಾಲಕ್ಕೆ ದೊಡ್ಡ ಮೊತ್ತವೆನ್ನಬಹುದಾದ ನಾಲ್ಕು ನೂರು ಕೋಟಿ ರುಪಾಯಿಯಷ್ಟು ವಿದೇಶೀ […]

ಪ್ರಕೃತಿಯ ಉಳಿವು-ಒಳಿತಿಗಾಗಿ ಸಮಾಜದ ಕೆಲಸ

ಅನಂತಶಯನ. –ಸಂತೋಷ ಕೌಲಗಿ ಜನಪದ ಸೇವಾ ಟ್ರಸ್ಟ್ ಮೇಲುಕೋಟೆ-571431   ಅದು 2004-05. ಸ್ವಿಜ್ಟರ್‌ಲ್ಯಾಂಡ್‌ನಲ್ಲಿ 33 ವರ್ಷದ ಭಾರತೀಯ ಯುವಕನೊಬ್ಬ ಐ ಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ. ಕೈ ತುಂಬ ಹಣ. ಮದುವೆಯಾಗಿ ಒಂದೆರಡು ವರ್ಷ ಕಳೆದಿದೆ ಅಷ್ಟೆ. ಯಾವುದಕ್ಕೂ ಕಡಿಮೆ ಇಲ್ಲ. ಸುಖವಾದ ಬದುಕು. ಆದರೂ, ಆ ಯುವಕನಿಗೆ ನೆಮ್ಮದಿ ಇಲ್ಲ. ಪರಿಸರದ ಮೇಲೆ ಮನುಷ್ಯ ನಡೆಸುತ್ತಿರುವಅವ್ಯಾಹತ ದಾಳಿಯ ಬಗ್ಗೆ ಎಲ್ಲೋ ಒಳಗೆ ನೋವು. ಆದರೆ, ಏನು ಮಾಡಲೂ ಧೈರ್ಯ ಸಾಲದು. ಒಂದು ವಾರಾಂತ್ಯ ಮನೆಯಲ್ಲೇ […]

ಸೇವಾದಳಕ್ಕೆ ಜೀವನ ಮೀಸಲಿಟ್ಟ ಸೇವಾರ್ಥಿ

  ನಂಜುಂಡಯ್ಯ ಸುಬ್ಬರಾವ್. -ಸಂತೋಷ ಕೌಲಗಿ ಜನಪದ ಸೇವಾ ಟ್ರಸ್ಟ್ ಮೇಲುಕೋಟೆ-571431 ಖಾದಿ ಚಡ್ಡಿ, ಮೇಲೊಂದು ಖಾದಿ ಅಂಗಿ, ಬಗಲಲ್ಲಿ ಖಾದಿ ಚೀಲ, ಒಂದು ಸಾಧಾರಣ ಚಪ್ಪಲಿ.ಈ ದಿರಿಸಿನಲ್ಲೇ 75 ವರ್ಷ ಕಾಲ ದೇಶವನ್ನು ಸುತ್ತಿರುವ ಸೇಲಂ ನಂಜುಂಡಯ್ಯ ಸುಬ್ಬರಾವ್, 91ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.20 ವರ್ಷ ವಯಸ್ಸಿನಲ್ಲಿ ಮನೆಯಿಂದ ಹೊರ ನಡೆದ ಇವರು ಮತ್ತೆ ಮನೆಗೆ ಮರಳಿದ್ದು 90 ನೇ ವಯಸ್ಸಿನಲ್ಲಿ. ಸುಬ್ಬರಾಯರ ಹೆಸರಿನಲ್ಲಿ ಸೇಲಂ ಎನ್ನುವ ಹೆಸರು ಇದ್ದರೂ, ಅವರು ಅಚ್ಚ ಕನ್ನಡಿಗರು. 1942ರ ಸೆಪ್ಟೆಂಬರ್ […]

Back To Top